ಆ್ಯಪ್ನಗರ

15 ವರ್ಷಗಳಿಂದ ಬಿಹಾರ ಯುವಕರಿಗೆ ನಿತೀಶ್ ಕುಮಾರ್‌, ಬಿಜೆಪಿಯಿಂದ ಮೋಸ: ತೇಜಸ್ವಿ ಯಾದವ್‌ ಟೀಕೆ

ಬಿಹಾರ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಬಿಸಿಯೇರುತ್ತಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಸಿಎಂ ನಿತೀಶ್‌ ಕುಮಾರ್‌ ಹಾಗೂ ಬಿಜೆಪಿ ಬಿಹಾರದ ಯುವಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ANI 16 Sep 2020, 5:35 pm
ಪಾಟ್ನಾ: ಅಕ್ಟೋಬರ್‌ - ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಬಿಜೆಪಿ ವಿರುದ್ಧ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web nitish kumar bjp misled and cheated bihars youths for 15 years tejashwi yadav
15 ವರ್ಷಗಳಿಂದ ಬಿಹಾರ ಯುವಕರಿಗೆ ನಿತೀಶ್ ಕುಮಾರ್‌, ಬಿಜೆಪಿಯಿಂದ ಮೋಸ: ತೇಜಸ್ವಿ ಯಾದವ್‌ ಟೀಕೆ


ಭಾಗಲ್‌ಪುರ್‌ ಮತ್ತು ದರ್ಭಾಂಗಾದಲ್ಲಿ ಸಾಫ್ಟ್‌ವೇರ್‌ ಟೆಕ್‌ ಪಾರ್ಕ್‌ಗಳನ್ನು ಶೀಘ್ರ ಸ್ಥಾಪಿಸುತ್ತೇವೆ ಎಂದು ಹೇಳಿದ್ದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಅವರ ಹಳೇ ಟ್ವೀಟ್‌ ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿರುವ ತೇಜಸ್ವಿ ಯಾದವ್‌, ಶೀಘ್ರ ಎಂದು ಟ್ವೀಟ್‌ ಮಾಡಿ 6 ವರ್ಷ ಆಗಿದೆ. ಶೀಘ್ರದ ಅರ್ಥ ಗೊತ್ತಿದಿಯಾ ಎಂದು ಪ್ರಶ್ನಿಸಿದ್ದಾರೆ.

ಕಳೆದ 15 ವರ್ಷಗಳಿಂದ ನಿತೀಶ್‌ ಕುಮಾರ್‌ ಮತ್ತು ಬಿಜೆಪಿ ಬಿಹಾರದ ಯುವಕರನ್ನು ತಪ್ಪುದಾರಿಗೆ ಎಳೆದಿರುವುದು ಹಾಗೂ ಮೋಸ ಮಾಡಿರುವುದು ಬಿಟ್ಟರೇ ಮತ್ತೇನು ಮಾಡಿಲ್ಲ ಎಂದು ತೇಜಸ್ವಿ ಯಾದವ್‌ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಬಿಗ್‌ ಟ್ವಿಸ್ಟ್..! ಲಾಲು ಪುತ್ರ ತೇಜ್‌ ಪ್ರತಾಪ್‌ ವಿರುದ್ಧ ಹೆಂಡತಿ ಐಶ್ವರ್ಯ ಕಣಕ್ಕೆ ಸಾಧ್ಯತೆ

ರವಿಶಂಕರ್‌ ಪ್ರಸಾದ್‌ ನವೆಂಬರ್‌ 8, 2014ರಂದು ಭಾಗಲ್‌ಪುರ್‌ ಮತ್ತು ದರ್ಭಾಂಗಾದಲ್ಲಿ ಶೀಘ್ರದಲ್ಲಿ ಸಾಫ್ಟ್‌ವೇರ್‌ ಟೆಕ್‌ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಟ್ವೀಟ್‌ ಮಾಡಿದ್ದರು. ಇದೇ ಟ್ವೀಟ್‌ನ್ನು ಉಲ್ಲೇಖಿಸಿ ಈಗ ತೇಜಸ್ವಿ ಯಾದವ್‌ ಬಿಜೆಪಿ ಮತ್ತು ನಿತೀಶ್‌ ಕುಮಾರ್‌ ಮೇಲೆ ಸಮರ ಸಾರಿದ್ದಾರೆ.

ಬಿಹಾರ‌ ಚುನಾವಣೆಗೂ ಮುನ್ನ ಆರ್‌ಜೆಡಿಗೆ ಭಾರೀ ಹಿನ್ನಡೆ..! 32 ವರ್ಷಗಳ ಬಳಿಕ ಪಕ್ಷ ತೊರೆದ ಲಾಲು ಅತ್ಯಾಪ್ತ

ನವೆಂಬರ್‌ 29ಕ್ಕೆ ಪ್ರಸ್ತುತ ಅವಧಿ ಮುಗಿಯುವ ಬಿಹಾರ ವಿಧಾನಸಭೆಗೆ ಇದೇ ಅಕ್ಟೋಬರ್‌ - ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇನ್ನೂ ಅಂತಿಮಗೊಳಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ