ಆ್ಯಪ್ನಗರ

ಪಾಸ್ವಾನ್‌ಗೆ ನಿತೀಶ್‌ರಿಂದ ಅವಮಾನ, ಬಹಿರಂಗ ಪತ್ರದಲ್ಲಿ ಚಿರಾಗ್‌ ಪಾಸ್ವಾನ್‌ ಅಸಮಾಧಾನ

ತಂದೆಯವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ ಪ್ರಧಾನಿ ಮೋದಿಯವರು ನಿತ್ಯವೂ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ನಿತೀಶ್‌ ಕುಮಾರ್‌ ಮಾತ್ರ ಪಾಸ್ವಾನ್‌ ಅನಾರೋಗ್ಯದ ವಿಷಯ ತಮಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದರು ಎಂದು ಚಿರಾಗ್‌ ಪಾಸ್ವಾನ್‌ ದೂರಿದ್ದಾರೆ.

Agencies 10 Oct 2020, 6:52 pm
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ‌ಕುಮಾರ್‌ ಅವರು ತಮ್ಮ ತಂದೆ ರಾಮ್‌ ವಿಲಾಸ್‌ ಪಾಸ್ವಾನ್‌ ಅವರನ್ನು ಹಲವು ಸಲ ಅಪಮಾನಿಸಿದ್ದಾರೆ ಎಂದು ಅವರ ಪುತ್ರ ಚಿರಾಗ್‌ ಪಾಸ್ವಾನ್‌ ಆರೋಪಿಸಿದ್ದಾರೆ.
Vijaya Karnataka Web Chirag PAswan
ತಂದೆ ರಾಮ್‌ ವಿಲಾಸ್‌ ಪಾಸ್ವಾನ್‌ ಜೊತೆ ಚಿರಾಗ್‌ ಪಾಸ್ವಾನ್‌


ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಸೆ.24ರಂದು ಬಹಿರಂಗ ಪತ್ರ ಬರೆದಿರುವ ಚಿರಾಗ್‌, ಜೆಡಿಯು ವರಿಷ್ಠರೂ ಆಗಿರುವ ನಿತೀಶ್‌ ಕುಮಾರ್‌ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರವನ್ನು ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಕಳೆದ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಿಹಾರದಿಂದ ತಮ್ಮ ತಂದೆಯವರಿಗೆ ಟಿಕೆಟ್‌ ನೀಡುವುದಾಗಿ ಬಿಜೆಪಿ ವರಿಷ್ಠ ನಾಯಕರು ಭರವಸೆ ನೀಡಿದ್ದರು. ಆದರೆ ನಿತೀಶ್‌ಕುಮಾರ್‌ ಅವರು ತಾತ್ಸಾರ ತೋರಿಸಿದರು. ತಂದೆಯವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ ಪ್ರಧಾನಿ ನರೇಂದ್ರ ಮೋದಿಯವರು ನಿತ್ಯವೂ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ನಿತೀಶ್‌ ಕುಮಾರ್‌ ಮಾತ್ರ ಪಾಸ್ವಾನ್‌ ಅನಾರೋಗ್ಯದ ವಿಷಯ ತಮಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದರು ಎಂದು ಎಲ್‌ಜೆಪಿ ಅಧ್ಯಕ್ಷರೂ ಆಗಿರುವ ಚಿರಾಗ್‌ ಪಾಸ್ವಾನ್‌ ವಿವರಿಸಿದ್ದಾರೆ.

‘‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನೇ ದಿನೆ ವೃದ್ಧಿಸುತ್ತಿದೆ. ಅದಕ್ಕೆ ವ್ಯತಿರಿಕ್ತವಾಗಿ ನಿತೀಶ್‌ ಕುಮಾರ್‌ ವಿರುದ್ಧ ಆಡಳಿತ ವಿರೋಧಿ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಜೆಪಿಯ ಅನೇಕ ನಾಯಕರಿಗೆ ನಿತೀಶ್‌ ವರ್ತನೆ ಬಗ್ಗೆ ಅಸಮಾಧಾನವಿದೆ," ಎಂದೂ ಚಿರಾಗ್‌ ಪತ್ರದಲ್ಲಿ ತಿಳಿಸಿದ್ದಾರೆ.

‘ಸ್ಧೆದ್ಧಾಂತಿಕ ಭಿನ್ನಾಭಿಪ್ರಾಯ’ದಿಂದ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಅಸಾಧ್ಯ ಎಂದಿದ್ದ ಚಿರಾಗ್‌ ಪಾಸ್ವಾನ್‌, ಕಳೆದ ವಾರವಷ್ಟೇ ಬಿಹಾರದಲ್ಲಿಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದಾರೆ. ಆದರೆ ಬಿಜೆಪಿ ಜತೆ ಬಾಂಧವ್ಯ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿತೀಶ್‌ ಕುರಿತು ಚಿರಾಗ್‌ ಅಸಮಾಧಾನದ ಕಾರಣ ಏನು ಎನ್ನುವುದು ಈಗ ಬಹಿರಂಗವಾದಂತಾಗಿದೆ. ಪಾಸ್ವಾನ್‌ ನಿಧನದ ಜೊತೆಗೆ ನಿತೀಶ್‌ ವರ್ತನೆ ಕುರಿತು ಚಿರಾಗ್‌ ಬರೆದಿರುವ ಈ ಪತ್ರ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ