ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿದ್ಯುತ್ ಚಾಲಿತ ಕಾರಿನಲ್ಲಿಯೇ ವಿಧಾನಸಭೆಗೆ ಬರುವ ಮೂಲಕ ಪರಿಸರ ಕಾಳಜಿಯ ಪ್ರಾಯೋಗಿಕ ಆದರ್ಶ ಮೆರೆದ ಪ್ರಸಂಗ ಗುರುವಾರ ನಡೆದಿದೆ. ಬಳಿಕ ಅವರು, ವಿದ್ಯುತ್ ಚಾಲಿತ ಕಾರಿನ ಸುಲಲಿತ ಪ್ರಯಾಣದ ಗುಣಗಾನ ಮಾಡಿದರು. ''ಸದ್ದೇ ಇರದೆ ಸಲೀಸಾಗಿ ಚಲಿಸುವ ಕಾರಿನ ಪ್ರಯಾಣ ತುಂಬ ಹಿತಕರ ಅನುಭವ ನೀಡಿತು. ವಿಮಾನ ಪ್ರಯಾಣದಂತೆ ಮುದ ನೀಡಿತು,'' ಎಂದಿದ್ದಾರೆ. ದೂಳು, ಹೊಗೆಯ ಹಾವಳಿಯಿಂದ ನಗರ ಜನ ಜೀವನ ದುಸ್ತರ ಎನಿಸಿದೆ. ಇದಕ್ಕೆ ತೆರೆ ಬೀಳಬೇಕಾದರೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಈ ದಿಸೆಯಲ್ಲಿ ಹಲವು ಕಂಪನಿಗಳು ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನು ಈಗಾಗಲೇ ಸಿದ್ಧಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಲಿದೆ ಎಂದು ಬಿಹಾರದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಹೇಳಿದರು.
ಎಲೆಕ್ಟ್ರಿಕ್ ಕಾರಿನಲ್ಲಿ ವಿಧಾನಸಭೆಗೆ ಬಂದ ನಿತೀಶ್
ದೂಳು, ಹೊಗೆಯ ಹಾವಳಿಯಿಂದ ನಗರ ಜನ ಜೀವನ ದುಸ್ತರ ಎನಿಸಿದೆ. ಇದಕ್ಕೆ ತೆರೆ ಬೀಳಬೇಕಾದರೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕು. ಈ ದಿಸೆಯಲ್ಲಿ ಹಲವು ಕಂಪನಿಗಳು ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನು ಈಗಾಗಲೇ ಸಿದ್ಧಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಲಿದೆ ಎಂದು ಬಿಹಾರದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಹೇಳಿದರು.
PTI 26 Jul 2019, 5:00 am