ಆ್ಯಪ್ನಗರ

ಬಂಗಲೆಗೆ ನಿತೀಶ್‌ ಕುಮಾರ್ ಭೂತ ಛೂ ಬಿಟ್ಟಿದ್ದಾರೆ: ತೇಜ್‌ ಪ್ರತಾಪ್‌ ಯಾದವ್‌

ಸರಕಾರ ನೀಡಿದ್ದ ಬಂಗಲೆಯನ್ನು ತೊರೆದಿರುವ ಮಾಜಿ ಆರೋಗ್ಯ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳ ಮುಖಂಡ ತೇಜ್ ಪ್ರತಾಪ್ ಯಾದವ್

Vijaya Karnataka Web 22 Feb 2018, 4:53 pm
ಪಾಟ್ನಾ: ಬಿಹಾರದ ಅಧಿಕಾರ ಕಳೆದುಕೊಂಡು ಆರು ತಿಂಗಳು ಕಳೆದ ಬಳಿಕ ಸರಕಾರ ನೀಡಿದ್ದ ಬಂಗಲೆಯನ್ನು ತೊರೆದಿರುವ ಮಾಜಿ ಆರೋಗ್ಯ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳ ಮುಖಂಡ ತೇಜ್ ಪ್ರತಾಪ್ ಯಾದವ್, ಬಂಗಲೆಯಲ್ಲಿ ಬಿಹಾರ ಮುಖ್ಯಮಂತ್ರಿ ಭೂತವನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
Vijaya Karnataka Web nitish released ghosts in my bungalow lalus son
ಬಂಗಲೆಗೆ ನಿತೀಶ್‌ ಕುಮಾರ್ ಭೂತ ಛೂ ಬಿಟ್ಟಿದ್ದಾರೆ: ತೇಜ್‌ ಪ್ರತಾಪ್‌ ಯಾದವ್‌


ಆರ್​ಜಿಡಿ ಮುಖಂಡ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್ ಅವರು ಮೇವು ಹಗರಣದಲ್ಲಿ ಅಪರಾಧಿ ಎನಿಸಿ ಜೈಲು ಪಾಲಾಗಿದ್ದಾರೆ. ಇದೀಗ ಹೊಸ ವಿವಾದವನ್ನು ಹುಟ್ಟಿಹಾಕಿರುವ ಇವರ ಪುತ್ರ ತೇಜ್ ಪ್ರತಾಪ್‌, 'ನಾನು ವಾಸ ಮಾಡುತ್ತಿರುವ ಸರಕಾರಿ ಬಂಗಲೆಯೊಳಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಸೇರಿಕೊಂಡು ಭೂತ ಪ್ರೇತಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಾನು ನಿವಾಸವನ್ನು ತೆರವುಗೊಳಿಸಲು ನಿರ್ಧರಿಸಿದ್ದೇನೆ ಎಂದು ಅವರು ಆರೋಪಿಸಿ ಬಂಗಲೆ ಖಾಲಿ ಮಾಡಿದ್ದಾರೆ.

ಮಾಹಿತಿಗಳ ಪ್ರಕಾರ ತೇಜ್‌ ಪ್ರತಾಪ್‌ ಇಂತಹ ವಿಚಾರಗಳನ್ನು ಹೆಚ್ಚು ನಂಬಿಕೊಂಡು ಬಂದಿದ್ದು, ಬಂಗ್ಲಾ-3 ದೇಶ್ ರತ್ನ ಮಾರ್ಗ್‌ನಲ್ಲಿರುವ ಬಂಗಲೆಯಲ್ಲಿ ಈ ಹಿಂದೆಯೇ ಹಲವಾರು ಪೂಜೆಗಳನ್ನು ಸಹ ಮಾಡಲಾಗಿತ್ತಂತೆ. ವಾಸ್ತು ಜ್ಯೋತಿಷಿಗಳ ತಜ್ಞರ ಬಂಗಲೆಯ ದಕ್ಷಿಣ ಭಾಗದ ಬಾಗಿಲನ್ನೂ ಸಹ ತೇಜ್‌ ಮುಚ್ಚಿದ್ದರಂತೆ.

ಈ ಹಿಂದೆ ಬಿಹಾರದಲ್ಲಿ ಮಹಾ ಘಟಬಂಧನ್ ಸರಕಾರ ಮುರಿದು ಬಿದ್ದ ಬಳಿಕ ಬಿಜೆಪಿ ಜತೆ ಸೇರಿ ಹೊಸ ಸರ್ಕಾರ ರಚಿಸಿದ್ದ ಜೆಡಿಯು, ಕಳೆದ ಆಗಸ್ಟ್‌ನಿಂದ ರಾಜ್ಯ ಕಟ್ಟಡ ನಿರ್ಮಾಣ ಇಲಾಖೆಯ ಮೂಲಕ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷದ ಮುಖಂಡರಿಗೆ ಕಟ್ಟಡ ತೆರವುಗೊಳಿಸುವಂತೆ ನೋಟಿಸ್‌ ನೀಡುತ್ತಲೇ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ