ಆ್ಯಪ್ನಗರ

ಆಂಧ್ರ, ತಮಿಳುನಾಡು, ಪುದುಚೇರಿ ಕರಾವಳಿಗೆ ನಿವರ್‌ ಚಂಡಮಾರುತ ಭೀತಿ, 12 ಗಂಟೆಯೊಳಗೆ ರಕ್ಕಸ ಬಿರುಗಾಳಿ ಎಂಟ್ರಿ!

12 ಗಂಟೆಯೊಳಗೆ ಚಂಡಮಾರುತ ತಮಿಳುನಾಡಿಗೆ ಎಂಟ್ರಿಕೊಡಲಿದ್ದು ತೀವ್ರ ಪ್ರಮಾಣದಲ್ಲಿ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಪ್ರಮಾಣದ ಗುಡುಗು ಸಹಿತ ಮಳೆ, ಸುಂಟರಗಾಳಿ ಉಂಟಾಗಲಿದೆ. 100 ರಿಂದ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬಂದು ಅಪ್ಪಳಿಸಲಿದೆ.

Vijaya Karnataka Web 24 Nov 2020, 10:08 am
ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೆರಿಯ ಕರಾವಳಿ ತೀರಕ್ಕೆ 'ನಿವರ್‌' ಚಂಡಮಾರುತವು ಮಂಗಳವಾರ ಮತ್ತು ಗುರುವಾರದ ಮಧ್ಯೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಪುಟ ಕಾರ‍್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್‌ಸಿಎಂಸಿ) ಸೋಮವಾರ ಸನ್ನದ್ಧತೆ ಕುರಿತು ಪರಿಶೀಲನಾ ಸಭೆ ನಡೆಸಿತು.
Vijaya Karnataka Web Nivar Cyclone​


ಗೌಬಾ ಅವರು ಸಂಭವನೀಯ ಹಾನಿ, ಜನರ ತೆರವು ಕಾರ್ಯಾಚರಣೆ ಮತ್ತು ಪುನರ್‌ವಸತಿ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡು, ಈ ನಿಟ್ಟಿನಲ್ಲಿ ಸಕಲ ವ್ಯವಸ್ಥೆ ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು. ಗೃಹ, ಇಂಧನ, ದೂರಸಂಪರ್ಕ, ನಾಗರಿಕ ವಿಮಾನಯಾನ, ಬಂದರು, ಆರೋಗ್ಯ, ರೈಲ್ವೆ ಮಂಡಳಿ, ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇನ್ನು 12 ಗಂಟೆಯೊಳಗೆ ಚಂಡಮಾರುತ ತಮಿಳುನಾಡಿಗೆ ಎಂಟ್ರಿಕೊಡಲಿದ್ದು ತೀವ್ರ ಪ್ರಮಾಣದಲ್ಲಿ ಅಬ್ಬರಿಸಲಿದೆ ಎಂದು ತಿಳಿದುಬಂದಿದೆ. ಭಾರೀ ಪ್ರಮಾಣದ ಗುಡುಗು ಸಹಿತ ಮಳೆ, ಸುಂಟರಗಾಳಿ ಉಂಟಾಗಲಿದೆ. 100 ರಿಂದ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬಂದು ಅಪ್ಪಳಿಸಲಿದೆ.

ದಿಲ್ಲಿಯಲ್ಲಿ ಜೋರಾದ ಕೊರೊನಾರ್ಭಟ: ಪ್ರತೀ ಗಂಟೆಗೆ ಐದು ಮಂದಿ ವೈರಸ್‌ಗೆ ಬಲಿ!

ಚಂಡಮಾರುತದ ಎಂಟ್ರಿ!
ವಾಯುಭಾರ ಕುಸಿತದಿಂದ ನಿವಾರ್ ಚಂಡಮಾರುತವು ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ದಾಟಿ ಹೋಗಲಿದೆಯಂತೆ. ಈ ವೇಳೆ ಸುಂಟರಗಾಳಿ ಸಮೇತ ಭಾರೀ ಮಳೆಯಾಗುವ ಸಾದ್ಯತೆ ಎದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ತಮಿಳುನಾಡಿನ ನಾಗಪಟ್ಟಣಂ, ಮೈಲಾಡುತುರೈ, ಅರಿಯಲೂರು, ಪೆರಂಬಲೂರ್, ಕಡಲೂರು, ವಿಲ್ಲುಪುರಂ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ನವೆಂಬರ್ 25 ರಂದು ಕಲ್ಲಾಪುರಿಚಿ, ತಿರುವಣ್ಣಾಮಲೈ ಜಿಲ್ಲೆಗಳು ಮತ್ತು ಪುದುಚೇರಿ. ತಿರುವರೂರಿನ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಆಂಧ್ರಪ್ರದೇಶ, ತೆಲಂಗಾಣದ ಕೆಲವು ಪ್ರದೇಶಗಳ ಮೇಲೂ ನಿವರ್‌ ಚಂಡಮಾರುತದ ಪರಿಣಾಮ ಬೀರಲಿದೆ. ಈಗಾಗಲೇ ತಮಿಳುನಾಡಿನ ಏಳು ಜಿಲ್ಲೆಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಎನ್‌ಡಿಆರ್‌ಎಫ್‌ ತಂಡಗಳು ರೆಡಿ!

ಇನ್ನು ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಈಗಾಗಲೇ ಎನ್‌ಡಿಆರ್‌ಎಫ್‌ನ ವಿವಿಧ ತಂಡಗಳು ಭೇಟಿ ನೀಡಿವೆ. ಅಲ್ಲಿನ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ. ಕಡಲ್ಲೂರು, ಪುದುಚೇರಿ ಹಾಗೂ ಕರೈಕಾಲ್‌ನಲ್ಲಿ ಈಗಾಗಲೇ ಎನ್‌ಡಿಆರ್‌ಎಫ್ ಬೀಡುಬಿಟ್ದಿದೆ. ತನ್ನ ರಕ್ಷಣಾ ಸಿಬ್ಬಂದಿಗಳೊಂದಿಗೆ ಎಲ್ಲಾ ರೀತಿಯ ಸಮಸ್ಯೆ ಎದುರಿಸಲು ಸಜ್ಜಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ