ಆ್ಯಪ್ನಗರ

ಸಾಮಾಜಿಕ ಜಾಲತಾಣ ಖಾತೆಗೆ ಆಧಾರ್‌ ಜೋಡಣೆ ಇಲ್ಲ: ನೆಟ್ಟಿಗರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್!

ಸಾಮಾಜಿಕ ಜಾಲತಾಣಗಳಲ್ಲಿಬಳಕೆದಾರರ ಖಾತೆಗಳಿಗೆ ಅವರ ಆಧಾರ್‌ ಜೋಡಣೆ ಮಾಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲಎಂದು ಕೇಂದ್ರ ಐಟಿ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಈ ಮೂಲಕ ನೆಟ್ಟಿಗರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್ ಕೊಟ್ಟಿದೆ.

Vijaya Karnataka 20 Nov 2019, 8:42 pm
ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಖಾತೆಗಳಿಗೆ ಅವರ ಆಧಾರ್‌ ಜೋಡಣೆ ಮಾಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೇಂದ್ರ ಐಟಿ ಖಾತೆ ಸಚಿವ ರವಿಶಂಕರ್‌ ಪ್ರಸಾದ್‌ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾ ಗ್ರಾಂ, ಹೆಲೋ, ಟಿಕ್‌ಟಾಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಜನರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್ ಕೊಟ್ಟಿದೆ.
Vijaya Karnataka Web no aadhar link to social media account central government
ಸಾಮಾಜಿಕ ಜಾಲತಾಣ ಖಾತೆಗೆ ಆಧಾರ್‌ ಜೋಡಣೆ ಇಲ್ಲ: ನೆಟ್ಟಿಗರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್!


ಗಣ್ಯರ ವಾಟ್ಸ್‌ಆ್ಯಪ್‌ ಮಾಹಿತಿ ಕಳವಿಗೆ ಇಸ್ರೇಲ್‌ನ ಸ್ಪೈವೇರ್‌ ದಾಳಿ: ಕೇಂದ್ರ ನಿರುತ್ತರ!

ಲೋಕಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ರವಿಶಂಕರ್ ಪ್ರಸಾದ್ ಲಿಖಿತ ಉತ್ತರ ನೀಡಿದರು. ಆಧಾರ್‌ ಬಯೋಮೆಟ್ರಿಕ್‌ಗಳ ಬಳಕೆಗೆ ಹಲವು ನಿರ್ಬಂಧಗಳಿವೆ. ಆ ಮಾಹಿತಿಯನ್ನು ಹಂಚಿಕೆ ಮಾಡೋದಿಲ್ಲ. ನೋಂದಣಿ ವೇಳೆ ನಾಗರಿಕ ನೀಡುವ ಮಾಹಿತಿ ಮಾತ್ರ ಆಧಾರ್‌ನಲ್ಲಿ ಸಂಗ್ರಹಿಸಲಾಗಿರುತ್ತದೆ. ಹಾಗಾಗಿ ಆಧಾರ್‌ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಂಥ ಖಾಸಗಿ ವೇದಿಕೆಗಳಿಗೆ ಜೋಡಣೆ ಮಾಡಲ್ಲ ಎಂದು ರವಿಶಂಕರ್ ಪ್ರಸಾದ್ ವಿವರಿಸಿದರು.

ಕೇಂದ್ರ ಸರಕಾರ ಮತ್ತು ವಾಟ್ಸ್‌ಆ್ಯಪ್‌ ನಡುವೆ ಜಟಾಪಟಿಗೆ ಕಾರಣವಾಯ್ತು ಗೂಢಚರ್ಯೆ ವಿಚಾರ!

ಇನ್ನೊಂದೆಡೆ, ಎನ್‌ಆರ್‌ಐಗಳು ಆಧಾರ್‌ ಪಡೆಯುವ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಸಾದ್‌, '2019ರ ಸೆಪ್ಟೆಂಬರ್ 20ರಿಂದ ಅನ್ವಯವಾಗುವಂತೆ ಎನ್‌ಆರ್‌ಐಗಳ ಆಧಾರ್‌ ನೋಂದಣಿಯನ್ನು ವಿಶಿಷ್ಟ ಗುರುತು ಪ್ರಾಧಿಕಾರ ಆರಂಭಿಸಿದೆ. ಸುಮಾರು 2800 ಎನ್‌ಆರ್‌ಐಗಳಿಗೆ ಈಗಾಗಲೇ ಆಧಾರ್‌ ನೀಡಲಾಗಿದೆ' ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತಡೆಯಲು ಹಾಗೂ ವದಂತಿಗಳನ್ನು ತಡೆಯಲು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕ್ ಮಾಡುತ್ತೆ ಅನ್ನೋ ವದಂತಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿನ ಖಾಸಗಿತನಕ್ಕೆ ಇದರಿಂದ ಭಂಗವಾಗುತ್ತೆ ಅನ್ನೋ ವಾದವೂ ಕೇಳಿಬಂದಿತ್ತು. ಇದೀಗ ಲೋಕಸಭೆಯಲ್ಲೇ ವಿವರಣೆ ನೀಡುವ ಮೂಲಕ, ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಬಿಜೆಪಿ ಸರ್ಕಾರ ವಿವಾದಕ್ಕೆ ಅಧಿಕೃತವಾಗಿ ತೆರೆ ಎಳೆದಿದೆ.

ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ಕಿರುಕುಳ ಕೊಟ್ಟು ಜೈಲು ಸೇರಿದ ಯುವಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ