ಅವಿಶ್ವಾಸ ನಿರ್ಣಯದ ಕ್ರೆಡಿಟ್ ನಮ್ಮದೇ: ವೈಎಸ್ಸಾರ್ ಕಾಂಗ್ರೆಸ್
ಕೇಂದ್ರ ಸರಕಾರದ ವಿರುದ್ಧ ಟಿಡಿಪಿ ಮುಂದಿಟ್ಟ ಅವಿಶ್ವಾಸ ನಿರ್ಣಯ ಪ್ರಸ್ತಾವಕ್ಕೆ ಸಂಘಟಿತ ಪ್ರತಿಪಕ್ಷಗಳು ಬೆಂಬಲ ಘೋಷಿಸುತ್ತಿದ್ದಂತೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಭಿನ್ನ ಧ್ವನಿಯೆತ್ತಿದೆ. ಅವಿಶ್ವಾಸ ನಿರ್ಣಯದ ಮೂಲ ಪ್ರಸ್ತಾವ ತಮ್ಮದಾಗಿದ್ದು, ಅದರ ಯಶಸ್ಸು ತನಗೇ ಸಲ್ಲಬೇಕು ಎಂದು ಪಕ್ಷ ಹೇಳಿದೆ.
Vijaya Karnataka Web 16 Mar 2018, 3:22 pm
ಹೊಸದಿಲ್ಲಿ: ಕೇಂದ್ರ ಸರಕಾರದ ವಿರುದ್ಧ ಟಿಡಿಪಿ ಮುಂದಿಟ್ಟ ಅವಿಶ್ವಾಸ ನಿರ್ಣಯ ಪ್ರಸ್ತಾವಕ್ಕೆ ಸಂಘಟಿತ ಪ್ರತಿಪಕ್ಷಗಳು ಬೆಂಬಲ ಘೋಷಿಸುತ್ತಿದ್ದಂತೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಭಿನ್ನ ಧ್ವನಿಯೆತ್ತಿದೆ. ಅವಿಶ್ವಾಸ ನಿರ್ಣಯದ ಮೂಲ ಪ್ರಸ್ತಾವ ತಮ್ಮದಾಗಿದ್ದು, ಅದರ ಯಶಸ್ಸು ತನಗೇ ಸಲ್ಲಬೇಕು ಎಂದು ಪಕ್ಷ ಹೇಳಿದೆ.
'ರಾಜಕೀಯ ಅನಿವಾರ್ಯತೆಗೆ ಸಿಲುಕಿ ಟಿಡಿಪಿಯು ವೈಎಸ್ಸಾರ್ಸಿಪಿಯ ಅವಿಶ್ವಾಸ ಪ್ರಸ್ತಾವವನ್ನು ಬೆಂಬಲಿಸಲು ಮುಂದಾಗಿದೆ' ಎಂದು ವೈಎಸ್ಸಾರ್ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಜಗನ್ ಮೋಹನ್ ರೆಡ್ಡಿ ಹೇಳಿದ್ದರು.
'ಜನತೆಯ ಬೆಂಬಲದೊಂದಿಗೆ ನಾಲ್ಕು ವರ್ಷಗಳ ಕಾಲ ವೈಎಸ್ಸಾರ್ಸಿಪಿ ಸತತ ಹೋರಾಟ ನಡೆಸಿದ ಬಳಿಕ ಟಿಡಿಪಿಯ ಚಂದ್ರಬಾಬು ನಾಯ್ಡು ಸೇರಿದಂತೆ ಇಡೀ ದೇಶ ಎಚ್ಚತ್ತುಕೊಂಡಿದೆ' ಎಂದು ವೈಎಸ್ಸಾರ್ ಹೇಳಿಕೊಂಡಿದ್ದಾರೆ.
ಅವಿಶ್ವಾಸ ಗೊತ್ತುವಳಿ ಪ್ರಸ್ತಾವ ಮೊದಲು ಮಂಡಿಸಲು ಮುಂದಾಗಿದ್ದು ವೈಎಸ್ಸಾರ್ ಕಾಂಗ್ರೆಸ್. ನಿನ್ನೆಯೇ (ಗುರುವಾರ) ಅವರು ಈ ಕೆಲಸ ಮಾಡಿದ್ದರು. ಇದನ್ನು ರೆಡ್ಡಿ ನೆನಪಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆಯಿಂದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಧಕ್ಕೆಯಾಗಬಹುದು ಎಂಬ ಅರಿವಾಗಿ ಸ್ವಲ್ಪ ಹೊತ್ತಿನ ಬಳಿಕ ಜಗನ್ ರೆಡ್ಡಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಯಾರೇ ಮೊದಲು ಪ್ರಸ್ತಾವ ಮಂಡಿಸಿದ್ದರೂ ಆಂಧ್ರದ ಹಿತಾಸಕ್ತಿಯೇ ಇಲ್ಲಿ ಮುಖ್ಯ ಎಂದೂ ಅವರು ಹೇಳಿಕೊಂಡಿದ್ದಾರೆ.
'ರಾಜಕೀಯ ಅನಿವಾರ್ಯತೆಗೆ ಸಿಲುಕಿ ಟಿಡಿಪಿಯು ವೈಎಸ್ಸಾರ್ಸಿಪಿಯ ಅವಿಶ್ವಾಸ ಪ್ರಸ್ತಾವವನ್ನು ಬೆಂಬಲಿಸಲು ಮುಂದಾಗಿದೆ' ಎಂದು ವೈಎಸ್ಸಾರ್ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಜಗನ್ ಮೋಹನ್ ರೆಡ್ಡಿ ಹೇಳಿದ್ದರು.
'ಜನತೆಯ ಬೆಂಬಲದೊಂದಿಗೆ ನಾಲ್ಕು ವರ್ಷಗಳ ಕಾಲ ವೈಎಸ್ಸಾರ್ಸಿಪಿ ಸತತ ಹೋರಾಟ ನಡೆಸಿದ ಬಳಿಕ ಟಿಡಿಪಿಯ ಚಂದ್ರಬಾಬು ನಾಯ್ಡು ಸೇರಿದಂತೆ ಇಡೀ ದೇಶ ಎಚ್ಚತ್ತುಕೊಂಡಿದೆ' ಎಂದು ವೈಎಸ್ಸಾರ್ ಹೇಳಿಕೊಂಡಿದ್ದಾರೆ.
ಅವಿಶ್ವಾಸ ಗೊತ್ತುವಳಿ ಪ್ರಸ್ತಾವ ಮೊದಲು ಮಂಡಿಸಲು ಮುಂದಾಗಿದ್ದು ವೈಎಸ್ಸಾರ್ ಕಾಂಗ್ರೆಸ್. ನಿನ್ನೆಯೇ (ಗುರುವಾರ) ಅವರು ಈ ಕೆಲಸ ಮಾಡಿದ್ದರು. ಇದನ್ನು ರೆಡ್ಡಿ ನೆನಪಿಸಿಕೊಂಡಿದ್ದಾರೆ.
ತಮ್ಮ ಹೇಳಿಕೆಯಿಂದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಧಕ್ಕೆಯಾಗಬಹುದು ಎಂಬ ಅರಿವಾಗಿ ಸ್ವಲ್ಪ ಹೊತ್ತಿನ ಬಳಿಕ ಜಗನ್ ರೆಡ್ಡಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಯಾರೇ ಮೊದಲು ಪ್ರಸ್ತಾವ ಮಂಡಿಸಿದ್ದರೂ ಆಂಧ್ರದ ಹಿತಾಸಕ್ತಿಯೇ ಇಲ್ಲಿ ಮುಖ್ಯ ಎಂದೂ ಅವರು ಹೇಳಿಕೊಂಡಿದ್ದಾರೆ.