ಆ್ಯಪ್ನಗರ

ಸೈನಿಕರಿಗೆ ಶಸ್ತ್ರ ಎಷ್ಟು ಮುಖ್ಯವೋ, ರೈತರಿಗೆ ಟ್ರ್ಯಾಕ್ಟರ್ ಕೂಡ ಅಷ್ಟೇ ಮುಖ್ಯ: ರಾಜನಾಥ್ ಸಿಂಗ್!

ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ಪ್ರತಿಭಟಿಸುವ ಸಂದರ್ಭದಲ್ಲಿ, ದೆಹಲಿಯ ಇಂಡಿಯಾ ಗೇಟ್‌ ಬಳಿ ಟ್ರ್ಯಾಕ್ಟರ್ ಸುಟ್ಟ ಘಟನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ. ಸೈನಿಕರಿಗೆ ಶಸ್ತ್ರಗಳು ಎಷ್ಟು ಮುಖ್ಯವೋ, ರೈತರಿಗೆ ಟ್ರ್ಯಾಕ್ಟರ್ ಕೂಡ ಅಷ್ಟೇ ಮುಖ್ಯ ಎಂದು ರಾಜನಾಥ್ ಹೇಳಿದ್ದಾರೆ.

Vijaya Karnataka Web 1 Oct 2020, 7:17 pm
ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ಪ್ರತಿಭಟಿಸುವ ಸಂದರ್ಭದಲ್ಲಿ, ದೆಹಲಿಯ ಇಂಡಿಯಾ ಗೇಟ್‌ ಬಳಿ ಟ್ರ್ಯಾಕ್ಟರ್ ಸುಟ್ಟ ಘಟನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ.
Vijaya Karnataka Web rajnath singh 1
ಸಂಗ್ರಹ ಚಿತ್ರ


ಸೈನಿಕರಿಗೆ ಶಸ್ತ್ರಗಳು ಎಷ್ಟು ಮುಖ್ಯವೋ, ರೈತರಿಗೆ ಟ್ರ್ಯಾಕ್ಟರ್ ಕೂಡ ಅಷ್ಟೇ ಮುಖ್ಯ. ಯಾವ ರೈತನೂ ಪ್ರತಿಭಟನೆ ನೆಪದಲ್ಲಿ ಟ್ರ್ಯಾಕ್ಟರ್ ಸುಡಲು ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ: ಇಂಡಿಯಾ ಗೇಟ್‌ ಬಳಿ ಟ್ರಾಕ್ಟರ್‌ ಸುಟ್ಟು ಆಕ್ರೋಶ, ಐವರು ವಶಕ್ಕೆ!

ಗಡಿ ಕಾಯುವ ಸೈನಿಕ ತನ್ನ ಶಸ್ತ್ರಗಳನ್ನು ಗೌರವಿಸುತ್ತಾನೆ. ಅದೇ ರೀತಿ ದೇಶಕ್ಕೆ ಅನ್ನ ನೀಡುವ ರೈತ ತನ್ನ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಸಲಕರಣೆಗಳನ್ನು ಗೌರವಿಸುತ್ತಾನೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್ ಸುಟ್ಟವರು ರೈತರಲ್ಲ, ಬದಲಿಗೆ ಪಕ್ಷವೊಂದರ ಕಾರ್ಯಕರ್ತರು. ಅವರಿಗೆ ರೈತರ ಜೀವನಾಡಿಯಾದ ಟ್ರ್ಯಾಕ್ಟರ್ ಮಹತ್ವ ಗೊತ್ತಿಲ್ಲ ಎಂದು ರಾಜನಾಥ್ ಸಿಂಗ್ ಕಿಡಿಕಾರಿದರು.

ರಾಝಕೀಯ ಲಾಭಕ್ಕಾಗಿ ಟ್ರ್ಯಾಕ್ಟರ್ ಸುಟ್ಟಿರುವುದು ಖಂಡನೀಯ ಎಂದಿರುವ ರಕ್ಷಣಾ ಸಚಿವ, ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ಸುಟ್ಟು ದರೈತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಹರಿಹಾಯ್ದಿದ್ದಾರೆ.

'ರೈತರು ಪೂಜಿಸುವ ಯಂತ್ರಗಳಿಗೆ ಬೆಂಕಿ ಹಚ್ಚಿ ಅನ್ನದಾತರನ್ನು ಅವಮಾನಿಸುತ್ತಿದ್ದಾರೆ'

ಕಳೆದ ಸೆ.28ರಂದು ಕೇಂದ್ರದ ಕೃಷಿ ವಿಧೇಯಕಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ, ಯುತ್ ಕಾಂಗ್ರೆಸ್ ಸದಸ್ಯರು ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್‌ವೊಂದನ್ನು ಸುಟ್ಟು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ