ಆ್ಯಪ್ನಗರ

ಭಾರತ-ನೇಪಾಳ ರೋಟಿ-ಬೇಟಿ ಸಂಬಂಧ ಮುರಿಯಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್!

ಭಾರತ-ನೇಪಾಳದ ನಡುವಿನ ಅನೋನ್ಯ ಸಂಬಂಧವನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿ ತಕರಾರನ್ನು ಪರಸ್ಪರ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 15 Jun 2020, 2:03 pm
ನವದೆಹಲಿ: ನೇಪಾಳದ ಗಡಿ ಕ್ಯಾತೆ ತಾತ್ಕಾಲಿಕ ಎಂದು ಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ-ನೇಪಾಳದ ನಡುವಿನ ರೋಟಿ-ಬೇಟಿ(ರೊಟ್ಟಿ ಹಾಗೂ ಮಗಳು)ಸಂಬಂಧವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Vijaya Karnataka Web Rajnath Singh
ಜನ ಸಂವಾದ ಸಭೆ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್


ಉತ್ತರಾಖಂಡ್‌ನ ಜನ ಸಂವಾದ ರ‍್ಯಾಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತ-ನೇಪಾಳನದ ನಡುವೆ ಯಾವುದೇ ವಿಚಾರವಾಗಿ ಸಮಸ್ಯೆ ಉದ್ಭವವಾದರೂ ನಾವು ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಶಕ್ತರಾಗಿದ್ದೇವೆ ಎಂದು ಹೇಳಿದರು.

'ಲಿಪುಲೇಖ್‌, ಕಾಲಾಪಾನಿ ಭಾರತದ್ದು, ಐತಿಹಾಸಿಕ ದಾಖಲೆ ಇವೆ': ಅಧಿಕಾರಿಗಳ ವಾದ

ತಪ್ಪು ಕಲ್ಪನೆಯಿಂದ ನೇಪಾಳ ಗಡಿ ತಕರಾರು ತೆಗೆದಿದ್ದು, ಭಾರತದ ಹೆದ್ದಾರಿ ನೇಪಾಳದ ಗಡಿಯಲ್ಲಿ ಹಾದು ಹೋಗಿಲ್ಲ ಎಂದಿರುವ ರಾಜನಾಥ್, ಲಿಪುಲೇಖ್ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ.


ಆದರೆ ಗಡಿ ತಕರಾರು ಇದೆ ಎಂಬ ಮಾತ್ರಕ್ಕೆ ಭಾರತ-ನೇಪಾಳ ನಡುವಿನ ಸಂಬಂಧ ಹಳಿಸಿದೆ ಎಂದು ವಿಶ್ಲೇಷಿಸಬೇಕಿಲ್ಲ ಎಂದಿರುವ ರಾಜನಾಥ್, ಪರಸ್ಪರ ಶಾಂತಿ ಮತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.


ಸಮಂಜಸವೂ ಅಲ್ಲ, ಒಪ್ಪುವುದೂ ಇಲ್ಲ: ನೇಪಾಳ ಗಡಿ ನಕ್ಷೆ ಅನುಮೋದನೆಗೆ ಭಾರತ ಗರಂ!

ಭಾರತ-ನೇಪಾಳದ ನಡುವೆ ಐತಿಹಾಸಿಕವಾಗಿ ಅನೋನ್ಯ ಸಂಬಂಧವಿದ್ದು, ಪರಸ್ಪರ ನಡೆದ ಮದುವೆ ಸಂಬಂಧಗಳಿಂದಲೂ ಬಾಂಧವ್ಯ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ರಾಜನಾಥ್ ಭಾರತ-ನೇಪಾಳ ನಡುವೆ ರೋಟಿ-ಬೇಟಿ ಸಂಬಂಧ ಇದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ