ಆ್ಯಪ್ನಗರ

ಬಿಜೆಪಿ ಜತೆಗಿನ ಮೈತ್ರಿ ಮುರಿಯುವುದು ಅಸಾಧ್ಯ: ಎಐಎಡಿಎಂಕೆ

ಯಾರು ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಜತೆಗಿನ ತನ್ನ ಬಾಂಧವ್ಯ ಕೆಡಿಸುವುದು ಯಾರಿಗೂ ಸಾಧ್ಯವಿಲ್ಲ ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಭಾನುವಾರ ಘಂಟಾಘೋಷವಾಗಿ ಸಾರಿದೆ.

Vijaya Karnataka Web 23 Apr 2018, 12:40 pm
ಚೆನೈ: ಯಾರು ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಜತೆಗಿನ ತನ್ನ ಬಾಂಧವ್ಯ ಕೆಡಿಸುವುದು ಯಾರಿಗೂ ಸಾಧ್ಯವಿಲ್ಲ ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಭಾನುವಾರ ಘಂಟಾಘೋಷವಾಗಿ ಸಾರಿದೆ.
Vijaya Karnataka Web OPS-PM Modi


ಕಾವೇರಿ ವಿಷಯದಲ್ಲಿ ಪ್ರಮುಖ ಪ್ರತಿಪಕ್ಷ ಡಿಎಂಕೆ ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಈ ನಿಲುವು ಮಹತ್ವದ್ದಾಗಿದೆ.

''ಪ್ರತಿಭಟನೆಗಳು ಅಥವಾ ಮೆರವಣಿಗೆಳು ಎಷ್ಟೇ ನಡೆಯಲಿ, ಎಐಎಡಿಎಂಕೆ ಮತ್ತು ಬಿಜೆಪಿ ನಡುವಣ ಬಾಂಧವ್ಯ ಕೆಡಿಸಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿ ಮತ್ತು ಎಐಎಡಿಎಂಕೆ ಡಬ್ಬಲ್‌ ಬ್ಯಾರೆಲ್‌ ಗನ್‌ ರೀತಿ ಕೆಲಸ ಮಾಡುವುದು ನಿಶ್ಚಿತ,'' ಎಂದು ಪಕ್ಷದ ಮುಖವಾಣಿ 'ನಮಧು ಪುರಚ್ಚಿ ತಲೈವಿ ಅಮ್ಮಾ,''ದಲ್ಲಿ ಪಕ್ಷ ಸ್ಪಷ್ಟಪಡಿಸಿದೆ.

ಕಾವೇರಿ ವಿಷಯದಲ್ಲಿ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳುವಂತೆ ಕೇಂದ್ರ ಸರಕಾರವನ್ನು ಪಕ್ಷವು ಕೋರಿಕೊಂಡ ಬೆನ್ನಲ್ಲಿಯೇ ಈ ತೀರ್ಮಾನ ಪ್ರಕಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ