ಆ್ಯಪ್ನಗರ

ಮತ್ತೆ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದರೆ ಸರ್ವನಾಶ: ಪಾಕ್ ವಿರುದ್ಧ ಗುಡುಗಿದ ರಾಜನಾಥ್

ಬಲೂಚಿಸ್ತಾನದಲ್ಲಿ ಸ್ಥಳೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಮಾನವ ಹಕ್ಕು ಉಲ್ಲಂಘನೆಗಳನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಪಾಕ್‌ ಹೋಳಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಜನಾಥ್‌ಎಂದಿದ್ದಾರೆ.

PTI 23 Sep 2019, 6:24 am
ಪಟನಾ: 1965 ಮತ್ತು 1971ರ ಲ್ಲಿಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದ ತಪ್ಪನ್ನು ಪುನಃ ಮಾಡಿದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪಾಕಿಸ್ತಾನಕ್ಕೆ ಖಡಕ್‌ಎಚ್ಚರಿಕೆ ಕೊಟ್ಟಿದ್ದಾರೆ.
Vijaya Karnataka Web no power will be able to protect rajnath singhs warning to pak on repeating 1965 1971 mistakes
ಮತ್ತೆ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದರೆ ಸರ್ವನಾಶ: ಪಾಕ್ ವಿರುದ್ಧ ಗುಡುಗಿದ ರಾಜನಾಥ್


ಯುದ್ಧೋನ್ಮಾದದಲ್ಲಿಮಾತನಾಡುತ್ತಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಸಂಪುಟ ಸಚಿವರಿಗೆ ಮತ್ತು ಪಾಕ್‌ನ ಆಪ್ತ ರಾಷ್ಟ್ರ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿರುವ ಸಿಂಗ್‌, ಮತ್ತೊಂದು ಯುದ್ಧ ನಡೆದದ್ದೇ ಆದಲ್ಲಿಪಾಕಿಸ್ತಾನ ಮತ್ತಷ್ಟು ಛಿದ್ರಗೊಳ್ಳಲಿದೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿಭಾನುವಾರ ನಡೆದ 'ಜನ ಜಾಗರಣ' ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಜನಾಥ ಸಿಂಗ್‌, ''ಸುಖಾಸುಮ್ಮನೆ ಯುದ್ಧಕ್ಕೆ ಪ್ರಚೋದಿಸುತ್ತಿರುವ ಪಾಕಿಸ್ತಾನ ಪಿಒಕೆ ಬಗ್ಗೆ ಚಿಂತಿಸಬೇಕು. ಬಲೂಚಿಸ್ತಾನದಲ್ಲಿಸ್ಥಳೀಯರು ಮತ್ತು ಪಶ್ತೂನ್‌ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಮಾನವ ಹಕ್ಕು ಉಲ್ಲಂಘನೆಗಳನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಪಾಕ್‌ ಹೋಳಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ,'' ಎಂದಿದ್ದಾರೆ.

370ನೇ ವಿಧಿ ರದ್ದತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಗಾಯಗೊಂಡ ಪರಿಸ್ಥಿತಿಯಲ್ಲಿತ್ತು. ಯಾಕೆಂದರೆ 370ನೇ ವಿಧಿ ಕ್ಯಾನ್ಸರ್‌ನಂತೆ ಕಣಿವೆ ರಾಜ್ಯವನ್ನು ಕಿತ್ತು ತಿನ್ನುತ್ತಿತ್ತು. ಕಣಿವೆ ರಾಜ್ಯದ ಶೇ.75ರಷ್ಟು ನಿವಾಸಿಗರು 370ನೇ ವಿಧಿ ರದ್ದತಿಗೆ ಆಗ್ರಹಿಸಿದ್ದರು. ಸದ್ಯ ಅವರೆಲ್ಲರೂ ನಿಟ್ಟುಸಿರುಬಿಡುತ್ತಿದ್ದಾರೆ. ಆದರೆ ಪಾಕಿಸ್ತಾನ ಮಾತ್ರ ಗಡಿಯಾಚೆಗೆ ತನ್ನ ಉಗ್ರರನ್ನು ನುಸುಳಿಸುವುದನ್ನು ಬಿಟ್ಟಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ