ಜೈಪುರ/ ಹೊಸದಿಲ್ಲಿ: ಜೂನ್ ತಿಂಗಳು ಆರಂಭವಾಗಿದ್ದು, ದೇಶದ ಬಹುತೇಕ ಭಾಗದಲ್ಲಿ ಬಿಸಿಲಿನ ತಾಪ ಮಿತಿಮೀರುತ್ತಿದೆ. ಉತ್ತರ ಭಾರತದಲ್ಲಿ ಬಿಸಿಗಾಳಿಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಘೋಷಿಸಿದ್ದು, ಪಶ್ಚಿಮ ರಾಜಸ್ಥಾನದಲ್ಲಂತೂ ತೀವ್ರವಾದ ಶಾಖದ ಪರಿಸ್ಥಿತಿ ಇದೆ.
ಈ ಪೈಕಿ ರಾಜಸ್ಥಾನ ಜನತೆ ಅತೀ ಕೆಟ್ಟ ಪರಿಣಾಮ ಎದುರಿಸುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಜೈಪುರದ ಕನಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಇನ್ನು, ರಾಜಸ್ಥಾನದ ಚುರುವಿನಲ್ಲಿ ಶನಿವಾರ (ಜೂನ್ 1,2019)ರ ಗರಿಷ್ಠ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಹೆಚ್ಚುತ್ತಿರುವ ತಾಪಮಾನದಿಂದ ಜನತೆ ಕಂಗಾಲಾಗಿದ್ದಾರೆ. ಅಲ್ಲದೆ, ಶ್ರೀ ಗಂಗಾನಗರದಲ್ಲೂ ಗರಿಷ್ಠ ತಾಪಮಾನ ಶನಿವಾರ (ಜೂನ್ 1,2019) 49.6 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಕನಿಷ್ಠ ಇನ್ನೂ ಒಂದು ವಾರದ ಕಾಲ ತಾಪಮಾನ ಕಡಿಮೆಯಾಗಲ್ಲ ಎಂದು ಸಹ ಹವಾಮಾನ ಇಲಾಖೆ ನಿರೀಕ್ಷಿಸಿದೆ.
ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಶನಿವಾರ 46.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಅಲ್ಲಿನ ಹವಾಮಾನ ಪರಿಸ್ಥಿತಿಯನ್ನು ಐಎಂಡಿ ಕೆಂಪು ವರ್ಗಕ್ಕೆ ಸೇರಿಸಿದೆ. ದಿಲ್ಲಿಯಲ್ಲಿ ಶನಿವಾರ 46.1 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ಪಾಲಂ ವೀಕ್ಷಣಾಲಯ ಮಾಹಿತಿ ನೀಡಿದ್ದರೆ ಕನಿಷ್ಠ 43.5 ಡಿಗ್ರಿ ಇತ್ತೆಂದು ಸಫ್ದರ್ಜಂಗ್ ವೀಕ್ಷಣಾಲಯ ತಿಳಿಸಿದೆ.
ಆದರೆ, ಜೂನ್ 6ರಂದು ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಲಿದ್ದು, ಇದರಿಂದ ಬಿಸಿಲು, ತಾಪಮಾನ ಕಡಿಮೆಯಾಗಲಿದ್ದು, ಇದು ದೇಶಕ್ಕೆ ಸದ್ಯ ಅಗತ್ಯವಾಗಿದೆ. ಇನ್ನು, ದಿಲ್ಲಿಯಲ್ಲಿ ಮಾತ್ರ ಸದ್ಯ ಮಳೆ ಬರುವುದಿಲ್ಲ. ಹೀಗಾಗಿ ಗರಿಷ್ಠ ತಾಪಮಾನ ಸದ್ಯ 46ರ ಆಸುಪಾಸಿನಲ್ಲಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪೈಕಿ ರಾಜಸ್ಥಾನ ಜನತೆ ಅತೀ ಕೆಟ್ಟ ಪರಿಣಾಮ ಎದುರಿಸುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಜೈಪುರದ ಕನಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ತಾಪಮಾನ 46 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಇನ್ನು, ರಾಜಸ್ಥಾನದ ಚುರುವಿನಲ್ಲಿ ಶನಿವಾರ (ಜೂನ್ 1,2019)ರ ಗರಿಷ್ಠ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಹೆಚ್ಚುತ್ತಿರುವ ತಾಪಮಾನದಿಂದ ಜನತೆ ಕಂಗಾಲಾಗಿದ್ದಾರೆ. ಅಲ್ಲದೆ, ಶ್ರೀ ಗಂಗಾನಗರದಲ್ಲೂ ಗರಿಷ್ಠ ತಾಪಮಾನ ಶನಿವಾರ (ಜೂನ್ 1,2019) 49.6 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಕನಿಷ್ಠ ಇನ್ನೂ ಒಂದು ವಾರದ ಕಾಲ ತಾಪಮಾನ ಕಡಿಮೆಯಾಗಲ್ಲ ಎಂದು ಸಹ ಹವಾಮಾನ ಇಲಾಖೆ ನಿರೀಕ್ಷಿಸಿದೆ.
ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಶನಿವಾರ 46.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಅಲ್ಲಿನ ಹವಾಮಾನ ಪರಿಸ್ಥಿತಿಯನ್ನು ಐಎಂಡಿ ಕೆಂಪು ವರ್ಗಕ್ಕೆ ಸೇರಿಸಿದೆ. ದಿಲ್ಲಿಯಲ್ಲಿ ಶನಿವಾರ 46.1 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ಪಾಲಂ ವೀಕ್ಷಣಾಲಯ ಮಾಹಿತಿ ನೀಡಿದ್ದರೆ ಕನಿಷ್ಠ 43.5 ಡಿಗ್ರಿ ಇತ್ತೆಂದು ಸಫ್ದರ್ಜಂಗ್ ವೀಕ್ಷಣಾಲಯ ತಿಳಿಸಿದೆ.
ಆದರೆ, ಜೂನ್ 6ರಂದು ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಲಿದ್ದು, ಇದರಿಂದ ಬಿಸಿಲು, ತಾಪಮಾನ ಕಡಿಮೆಯಾಗಲಿದ್ದು, ಇದು ದೇಶಕ್ಕೆ ಸದ್ಯ ಅಗತ್ಯವಾಗಿದೆ. ಇನ್ನು, ದಿಲ್ಲಿಯಲ್ಲಿ ಮಾತ್ರ ಸದ್ಯ ಮಳೆ ಬರುವುದಿಲ್ಲ. ಹೀಗಾಗಿ ಗರಿಷ್ಠ ತಾಪಮಾನ ಸದ್ಯ 46ರ ಆಸುಪಾಸಿನಲ್ಲಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.