ಆ್ಯಪ್ನಗರ

ಕೊರೊನಾದ ಹೊಸ ಅಪಾಯ, ಸೋಂಕಿತರಲ್ಲಿ ಲಕ್ಷಣವೇ ಕಾಣಿಸಲ್ಲ!

ಕೇರಳದ ಪತ್ಥನಂತಿಟ್ಟ ಜಿಲ್ಲೆಯಲ್ಲಿ ದುಬೈನಿಂದ ಮರಳಿದ 60 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅದರಂತೆ ಮಾರ್ಚ್ 19 ರಿಂದ ಏ. 6ರವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಇಷ್ಟೂ ದಿನಗಳವರೆಗೆ ಸೋಂಕಿತನಲ್ಲಿ ಯಾವುದೇ ಲಕ್ಷಣಗಳು ಗೋಚರವಾಗಿರಲಿಲ್ಲ.

Agencies 7 Apr 2020, 8:58 pm

ತಿರುವನಂತಪುರಂ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗಿ ತಲ್ಲಣ ಸೃಷ್ಟಿಸುತ್ತಿರುವ ಸಂದರ್ಭದಲ್ಲಿಯೇ ಮಹಾಮಾರಿಯ ಮತ್ತೊಂದು ಮುಖ ವೈದ್ಯರಲ್ಲಿಆತಂಕ ಮೂಡಿಸಿದೆ. ಕೊರೊನಾ ಸೋಂಕಿತರಲ್ಲಿ ರೋಗದ ಲಕ್ಷಣಗಳೇ ಗೋಚರಿಸುತ್ತಿಲ್ಲ. ಆದರೆ ದೇಹದಲ್ಲಿ ವೈರಾಣು ಇರುವುದು ಮಾತ್ರ ಖಾತ್ರಿಯಾಗುತ್ತಿದೆ!
Vijaya Karnataka Web coronavirus


ಹೌದು, ಕೇರಳದ ಪತ್ಥನಂತಿಟ್ಟ ಜಿಲ್ಲೆಯಲ್ಲಿ ದುಬೈನಿಂದ ಮರಳಿದ 60 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅದರಂತೆ ಮಾರ್ಚ್ 19 ರಿಂದ ಏ. 6ರವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಇಷ್ಟೂ ದಿನಗಳವರೆಗೆ ಸೋಂಕಿತನಲ್ಲಿ ಯಾವುದೇ ಲಕ್ಷಣಗಳು ಗೋಚರವಾಗಲಿಲ್ಲ.

ಕೆಮ್ಮು, ಸೀನುವಿಕೆ, ಜ್ವರದ ಲಕ್ಷಣಗಳೇ ಗೋಚರಿಸಲಿಲ್ಲ. ಬದಲಾಗಿ ರಕ್ತದ ಪರೀಕ್ಷೆ ಮಾಡಿದಾಗಲೆಲ್ಲ ವೈರಾಣು ಇರುವುದು ಖಾತ್ರಿ ಮಾತ್ರ ಆಗುತ್ತಿತ್ತು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಲಕ್ಷಣ ರಹಿತ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಕೂಡ ಪತ್ತೆ ಮಾಡುವುದು ಕಷ್ಟವಾಗುತ್ತದೆ.

ಬದುಕಿದ್ದಾಗ ಕೊರೊನಾ ನೆಗೆಟಿವ್, ಸತ್ತಾಗ ಪಾಸಿಟಿವ್: ಮೂಕ ವಿಸ್ಮಿತರಾದ ವೈದ್ಯರು!

ದಿಲ್ಲಿಯಿಂದ ಮಾರ್ಚ್ 15ರಂದು ರೈಲಿನಲ್ಲಿ ಎರ್ನಾಕುಲಂಗೆ ಆಗಮಿಸಿದ್ದ 19 ವರ್ಷದ ಸೋಂಕಿತೆಗೆ ಕೂಡ ಕೊರೊನಾ ಲಕ್ಷಣಗಳು ಕಾಣಿಸಿಲ್ಲ, ಆದರೆ ರಕ್ತ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ