ಆ್ಯಪ್ನಗರ

ಟಾಯ್ಲೆಟ್ ಇಲ್ಲದವರಿಗೆ ರೇಷನ್ ನಿರಾಕರಣೆ

ಬಸ್ತಾರ್ ವಲಯದಲ್ಲಿ ಶೌಚಾಲಯ ಇಲ್ಲದ 15 ಕುಟುಂಬಗಳಿಗೆ ಪಡಿತರ ವಿತರಣೆಯನ್ನು ನಿರಾಕರಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 16 Jul 2016, 1:21 pm
ರಾಜ್‌ಪುರ: ಛತ್ತೀಸ್‌ಗಢದ ಬಸ್ತಾರ್ ವಲಯದಲ್ಲಿ ಶೌಚಾಲಯ ಇಲ್ಲದ 15 ಕುಟುಂಬಗಳಿಗೆ ಪಡಿತರ ಸಾಮಗ್ರಿ ನಿರಾಕರಿಸಲಾಗಿದೆ.
Vijaya Karnataka Web no toilet no pds ration in bastar
ಟಾಯ್ಲೆಟ್ ಇಲ್ಲದವರಿಗೆ ರೇಷನ್ ನಿರಾಕರಣೆ

ಗ್ರಾಮದ ಸರಪಂಚರ ಆದೇಶ ಇದ್ದರೂ ಈ ಕುಟುಂಬಗಳು ಎರಡು ತಿಂಗಳಿಂದಲೂ ಶೌಚಾಲಯ ನಿರ್ಮಿಸಿಲ್ಲ. ಮನ್‌ಸೆಕ್ರಿ ಗ್ರಾಮವನ್ನು ಬಯಲು ಶೌಚಮುಕ್ತಗೊಳಿಸಲು ಆ.15 ಅಂತಿಮ ಗಡುವಾಗಿದ್ದು, ಕಾರ್ಯರೂಪಕ್ಕೆ ತರದಿ ದ್ದರೆ ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರಪಂಚರ ಆದೇಶದಲ್ಲಿ ಹೇಳಲಾಗಿದೆ. 15 ಕುಟುಂಬಗಳು ಪಕ್ಕದ ಹಳ್ಳಿಗೆ ಹೋಗಿ ಮಾರುಕಟ್ಟೆ ದರದಲ್ಲಿ ಅಕ್ಕಿ ಮತ್ತಿತರ ಸಾಮಗ್ರಿ ಖರೀದಿಸುತ್ತಿವೆ.

ಸರಕಾರಿ ಇಲಾಖೆ ಅನುದಾನ ನೀಡಲು ವಿಳಂಬ ಮಾಡುತ್ತದೆಯಾದ್ದರಿಂದ ಶೌಚಾಲಯ ನಿರ್ಮಿಸುತ್ತಿಲ್ಲ ಎಂಬುದು ಈ ಕುಟುಂಬಗಳ ಆರೋಪ. ನಮ್ಮ ಆಹಾರದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಬಡವರಿಗೆ ಶೌಚಾಲಯಕ್ಕಿಂತ ಊಟ ಮುಖ್ಯ ಎನ್ನುತ್ತಾರೆ ಇತ್ವರಿರಾಮ್‌ ಪಟೇಲ್. ಶೌಚಾಲಯ ನಿರ್ಮಿಸಿದರೆ ಸೂಕ್ತ ಸಮಯದಲ್ಲಿ ನಮಗೆ ಹಣ ದೊರೆಯುವುದಿಲ್ಲ, ನಮ್ಮಲಿ ವೆಚ್ಚ ಮಾಡುವ ಶಕ್ತಿ ಇಲ್ಲ. ನಮಗೆ ಕಲ್ಲು ಒಡೆಯುವ ಉದ್ಯೋಗವೊಂದೇ ಗೊತ್ತು ಎಂಬುದು ದುರ್ಗೇಶ್ ಕುಮಾರ್ ಮಾತು.

'ಉಚಿತವಾಗಿ ಶ್ಔಚಾಲಯ ನಿರ್ಮಿಸಿಕೊಳ್ಳಿ ಎಂದು ಅವರಿಗೆ ಹೇಳಿಲ್ಲ, ಶೌಚಾಲಯ ನಿರ್ಮಿಸಲು ಸಮಯ ಇಲ್ಲ ಎಂದು ಅವರೇ ಹೇಳಿದ್ದಾರೆ. ಸಭೆ ಕರೆದು ಅವರಿಗೆ ಅಂತಿಮ ಗಡು ವಿಧಿಸಲಾಗಿದೆ. ಪಕ್ಕದ ಹಳ್ಳಿಗಳು ಶೌಚಾಲಯ ನಿರ್ಮಾಣದಲ್ಲಿ ತೊಡಗಿಕೊಂಡಿವೆ. ಇಲ್ಲೂ ಕೆಲಸ ಮಾಡಿಸಿಕೊಂಡ ಬಳಿಕ ಪಡಿತರ ಪಡೆದುಕೊಳ್ಳಬಹುದು,'ಎಂದು ಸರಪಂಚ ಅಹಿಲ್ಯ ಕೊರ್ರಂ ಹೇಳಿದ್ದಾರೆ.

'ಪಡಿತರ ನಿರಾಕರಿಸುವ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ, ಇದು ಸರಪಂಚರು ಮಾಡಿರುವ ತಪ್ಪು ಕೆಲಸ. ಆಹಾರ ಪರಿವೀಕ್ಷಕರು ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವರು,'ಎಂದು ಆಯುಕ್ತರಾದ ಶಮಿಮ್ ಅಬಿದಿ ಹೇಳಿದ್ದಾರೆ. ಈ ವಿವಾದವು ಶುಕ್ರವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಪ್ರತಿಪಕ್ಷದ ಭೂಪೇಶ್ ಬಘೆಲ್ ವಿಷಯ ಕೈಗೆತ್ತಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ