ಆ್ಯಪ್ನಗರ

ಕೋರ್ಟ್‌ ಆವರಣದಲ್ಲಿ ಸೂಕ್ತ ಶೌಚಾಲಯವಿಲ್ಲದೆ ಬಾಟಲಿಯಲ್ಲಿ ಮೂತ್ರ ವಿಸರ್ಜನೆ

ಅಂಗವೈಕಲ್ಯ ಹೊಂದಿದ್ದ ವ್ಯಕ್ತಿಯೊಬ್ಬರು ಸೂಕ್ತ ಶೌಚಾಲಯ ಸೌಲಭ್ಯವಿಲ್ಲದ ಕಾರಣ ಟವೆಲ್‌ ಹೊದ್ದುಕೊಂಡು ಬಾಟಲಿಗೆ ಮೂತ್ರ ವಿಸರ್ಜಿಸಬೇಕಾದ ಸನ್ನಿವೇಶಕ್ಕೆ ಮದ್ರಾಸ್‌ ಹೈಕೋರ್ಟ್‌ ಆವರಣ ಸಾಕ್ಷಿಯಾಗಿದೆ.

TIMESOFINDIA.COM 20 Sep 2018, 3:20 pm
Vijaya Karnataka Web 1
ಚೆನ್ನೈ: ಅಂಗವೈಕಲ್ಯ ಹೊಂದಿದ್ದ ವ್ಯಕ್ತಿಯೊಬ್ಬರು ಸೂಕ್ತ ಶೌಚಾಲಯ ಸೌಲಭ್ಯವಿಲ್ಲದ ಕಾರಣ ಟವೆಲ್‌ ಹೊದ್ದುಕೊಂಡು ಬಾಟಲಿಗೆ ಮೂತ್ರ ವಿಸರ್ಜಿಸಬೇಕಾದ ಸನ್ನಿವೇಶಕ್ಕೆ ಮದ್ರಾಸ್‌ ಹೈಕೋರ್ಟ್‌ ಆವರಣ ಸಾಕ್ಷಿಯಾಗಿದೆ.

ಪ್ರಕರಣವೊಂದರ ವಿಚಾರಣೆ ಇದ್ದ ಕಾರಣ ವಿಜಯ್‌ ಕುಮಾರ್‌ ಎಂಬವರು ವೀಲ್‌ ಚೇರ್‌ನಲ್ಲಿ ಹೈಕೋರ್ಟ್‌ಗೆ ಬಂದಿದ್ದರು. ಮೊದಲ ಅಂತಸ್ತಿನಲ್ಲಿ ಕೋರ್ಟ್‌ ರೂಂ ಇದ್ದು, ಅವರು ಮೂತ್ರ ವಿಸರ್ಜನೆಗಾಗಿ ವೀಲ್‌ ಚೇರ್‌ನಲ್ಲೇ ತಳ ಅಂತಸ್ತಿನಲ್ಲಿರುವ ಶೌಚಾಲಯದತ್ತ ಬಂದಿದ್ದರು. ಆದರೆ ಅಲ್ಲಿದ್ದ ಶೌಚಾಲಯಕ್ಕೆ ವೀಲ್‌ ಚೇರ್‌ ಸಹಿತ ಪ್ರವೇಶಿಸಲು ಆಗುತ್ತಿರಲಿಲ್ಲ.

ವೀಲ್‌ ಚೇರ್‌ ಮೂಲಕ ಶೌಚಾಲಯಕ್ಕೆ ಹೋಗಲು ಸಾಧ್ಯವಾಗದ ಕಾರಣ ನನಗೆ ಬೇರೆ ಆಯ್ಕೆ ಇಲ್ಲದೆ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಬೇಕಾಯಿತು. ಕೋರ್ಟ್‌ ಆವರಣದಲ್ಲಿ ಅಂಗವೈಕಲ್ಯ ಸ್ನೇಹಿಯಾಗಿರುವ, ವೀಲ್‌ ಚೇರ್‌ ಮೂಲಕ ಹೋಗಲು ಅನುಕೂಲವಾಗುವ ರೀತಿ ಶೌಚಾಲಯ ನಿರ್ಮಿಸಿದರೆ ಬಹಳ ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಇವರೊಬ್ಬರದೇ ಸಮಸ್ಯೆ ಅಲ್ಲ. ಡಿಸೆಬಿಲಿಟಿ ರೈಟ್ಸ್‌ ಅಲೆಯನ್ಸ್‌ನ ಸ್ಮಿತಾ ಸದಾಶಿವರು ಅವರೂ ದನಿಗೂಡಿಸಿದ್ದಾರೆ. ಇಡೀ ದಿನ ಕೋರ್ಟ್‌ನಲ್ಲಿ ಇರಬೇಕಾದ ದಿನ ನಾನು ಮನೆಗೆ ಹೋಗಿಯೇ ಮೂತ್ರ ವಿಸರ್ಜಿಸುವುದಾಗಿ ಹೇಳಿದ್ದಾರೆ.

ಸಮಸ್ಯೆ ಗಮನಕ್ಕೆ ಬಂದಿದ್ದು, ಹೀಗಾಗದಂತೆ ನೋಡಿಕೊಳ್ಳಲಾಗುವುದು. ನ್ಯಾಯಾಲಯ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶೌಚಾಲಯ ನಿರ್ಮಿಸುವುದಿಲ್ಲ. ಅಂಗವೈಕಲ್ಯ ಹೊಂದಿರುವವರ ಅನುಕೂಲಕ್ಕಾಗಿ ಸೌಚಾಲಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದಾಗಿ ಕೋರ್ಟ್‌ ರಿಜಿಸ್ಟ್ರಾರ್‌ ದೇವನಾಥನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ