ಆ್ಯಪ್ನಗರ

ಭಾರತದ ಆರ್ಥಿಕತೆ ಅಲುಗಾಡುತ್ತಿದೆ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಎಚ್ಚರಿಕೆ

ಕಳೆದ ಐದಾರು ವರ್ಷಗಳಲ್ಲಿ ನಾವು ಕನಿಷ್ಠ ಅಭಿವೃದ್ಧಿಯನ್ನಾದರೂ ನೋಡಿದೆವು. ಸದ್ಯ ಆ ಭರವಸೆಯೂ ಇಲ್ಲವಾಗಿದೆ ಎಂಬುದಾಗಿ ಅಮೆರಿಕಾದಿಂದಲೇ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

TIMESOFINDIA.COM 14 Oct 2019, 9:22 pm

ಹೊಸದಿಲ್ಲಿ: ‘ಭಾರತದ ಆರ್ಥಿಕತೆಯು ಆಲುಗಾಡುತ್ತಿದೆ’ - ಹೀಗಂಥ ಖ್ಯಾತ ಅರ್ಥಶಾಸ್ತ್ರಜ್ಞ, 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web ಅಭಿಜಿತ್‌ ಬ್ಯಾನರ್ಜಿ
ಅಭಿಜಿತ್‌ ಬ್ಯಾನರ್ಜಿ


ಲಭ್ಯವಿರುವ ದಾಖಲೆಗಳ ಪ್ರಕಾರ ಭಾರತದ ಆರ್ಥಿಕತೆ ತಕ್ಷಣಕ್ಕೆ ಎದ್ದೇಳುವ ಯಾವ ಭರವಸೆಯೂ ಇಲ್ಲ ಎಂಬುದಾಗಿ ಭಾರತೀಯ ಮೂಲದ ಅಮೆರಿಕಾ ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ.

“ಭಾರತದ ಆರ್ಥಿಕತೆಯ ಪರಿಸ್ಥಿತಿ ಅಲುಗಾಡುತ್ತಿದೆ. ಪ್ರಸ್ತುತ (ಬೆಳವಣಿಗೆಯ) ಅಂಕಿ ಅಂಶಗಳನ್ನು ನೋಡಿದಾಗ, ಇದರ (ಸದ್ಯಕ್ಕೆ ಆರ್ಥಿಕತೆ ಎಚ್ಚೆತ್ತುಕೊಳ್ಳುವ) ಬಗ್ಗೆ ಯಾವ ಭರವಸೆಯೂ ಇಲ್ಲ,” ಎಂಬುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪತಿ-ಪತ್ನಿಗೆ ನೊಬೆಲ್‌! ಅಭಿಜಿತ್‌ ಬ್ಯಾನರ್ಜಿ ಬಗೆಗಿನ 9 ಕುತೂಹಲಕಾರಿ ಸಂಗತಿಗಳು

ಕಳೆದ ಐದಾರು ವರ್ಷಗಳಲ್ಲಿ ನಾವು ಕನಿಷ್ಠ ಅಭಿವೃದ್ಧಿಯನ್ನಾದರೂ ನೋಡಿದೆವು. ಸದ್ಯ ಆ ಭರವಸೆಯೂ ಇಲ್ಲವಾಗಿದೆ ಎಂಬುದಾಗಿ ಅಮೆರಿಕಾದಿಂದಲೇ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

58 ವರ್ಷಕ್ಕೇ ನೊಬೆಲ್‌ ಪ್ರಶಸ್ತಿ ಪಡೆದಿರುವ ಅವರು, "ವೃತ್ತಿ ಜೀವನದಲ್ಲಿ ಇಷ್ಟು ಬೇಗ ಪ್ರಶಸ್ತಿ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ," ಎಂದಿದ್ದಾರೆ. ತಮ್ಮ ಪತ್ನಿ ಈಸ್ಟರ್‌ ಡುಫ್ಲೋ ಜೊತೆ ಜಾಗತಿಕ ಬಡತನ ನಿರ್ಮೂಲನೆಗೆ ತೋರಿದ ಪ್ರಯೋಗಾತ್ಮಕ ನಡೆಗಳಿಗಾಗಿ ಅಭಿಜಿತ್‌ ಬ್ಯಾನರ್ಜಿ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮೈಖಲ್‌ ಕ್ರೆಮರ್‌ ಜೊತೆ ದಂಪತಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಭಾರತೀಯ ಸಂಜಾತ ಅಭಿಜಿತ್‌ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್‌

"ನಾನು ಕಳೆದ ಇಪ್ಪತ್ತು ವರ್ಷಗಳಿಂದ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಡತನ ನಿವಾರಣೆಗೆ ಪರಿಹಾರಗಳನ್ನು ನೀಡಲು ನಾವು ಪ್ರಯತ್ನಿಸಿದ್ದೇವೆ" ಎಂದು ಅವರು ತಮ್ಮ ಸಂಶೋಧನೆಯನ್ನು ತೆರೆದಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ