ಆ್ಯಪ್ನಗರ

1947ರಲ್ಲೇ ಮುಸ್ಲಿಮರಿಗೆ ಅವರ ಪಾಲಿನದ್ದನ್ನು ನೀಡಲಾಗಿದೆ: ಬಿಜೆಪಿ ನಾಯಕ

ಓವೈಸಿ ಯೋಚಿಸಿ ಮಾತನಾಡಬೇಕು. ಅವರನ್ನು ಯಾರು ಕೂಡ ಬಾಡಿಗೆದಾರರೆಂದಿಲ್ಲ. ಅವರ ಪಾಲಿನ ಮಾತಿನ ಬಗ್ಗೆ ಹೇಳಬೇಕೆಂದರೆ, ಅವರ ಪಾಲಿನದ್ದನ್ನು 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲೇ ನೀಡಿಯಾಗಿದೆ. ಆ ವಿಷಯ ಅಲ್ಲಿಗೆ ಮುಗಿದಿದೆ ಎಂದಿದ್ದಾರೆ.

TIMESOFINDIA.COM 3 Jun 2019, 10:59 am
ಹೊಸದಿಲ್ಲಿ: ಮುಸ್ಲಿಮರಿಲ್ಲಿ ಬಾಡಿಗೆದಾರರಲ್ಲ , ಸಮಾನ ಪಾಲುದಾರರು ಎಂದು ಎಂದು ಹೇಳಿದ್ದ ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೆ ಬಿಜೆಪಿ ನಾಯಕ ಮಾಧವ್ ಭಂಡಾರಿ ಟಾಂಗ್ ನೀಡಿದ್ದಾರೆ.
Vijaya Karnataka Web Owisi 1200


ಓವೈಸಿ ಯೋಚಿಸಿ ಮಾತನಾಡಬೇಕು. ಅವರನ್ನು ಯಾರು ಕೂಡ ಬಾಡಿಗೆದಾರರೆಂದಿಲ್ಲ. ಅವರ ಪಾಲಿನ ಮಾತಿನ ಬಗ್ಗೆ ಹೇಳಬೇಕೆಂದರೆ, ಅವರ ಪಾಲಿನದ್ದನ್ನು 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲೇ ನೀಡಿಯಾಗಿದೆ. ಆ ವಿಷಯ ಅಲ್ಲಿಗೆ ಮುಗಿದ ಅಧ್ಯಾಯ ಎಂದಿದ್ದಾರೆ.


ಕಳೆದೆರಡು ದಿನಗಳ ಹಿಂದೆ ಮುತ್ತಿನ ನಗರಿಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಮಾತನಾಡುತ್ತಿದ್ದ ಓವೈಸಿ, ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ ಎಂದು ರಾಷ್ಟ್ರದ ಮುಸ್ಲಿಮರು ಗಾಬರಿಯಾಗಬೇಕಿಲ್ಲ. ನಮ್ಮ ಧರ್ಮವನ್ನು ಪಾಲನೆ ಮಾಡಲು ಭಾರತೀಯ ಕಾನೂನು, ಸಂವಿಧಾನ ಅಧಿಕಾರ ನೀಡಿದೆ. ಲೋಕಸಭೆಯಲ್ಲಿ 300 ಸೀಟು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕನ್ನು ಕಿತ್ತುಕೊಳ್ಳುವ ಹಾಗಿಲ್ಲ. ಅವರು ದೇವಸ್ಥಾನಕ್ಕೆ ಹೋಗಬಹುದು ಎಂದಾದರೆ ಮುಸ್ಲಿಮರು ಮಸೀದಿಗೆ ಹೆಮ್ಮೆಯಿಂದ ಭೇಟಿ ನೀಡಬಹುದು . ಮುಸ್ಲಿಮರಿಲ್ಲಿ ಬಾಡಿಗೆದಾರರಲ್ಲ, ನಮಗೂ ಇಲ್ಲಿ ಸಮಾನ ಪಾಲಿದೆ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ