ಆ್ಯಪ್ನಗರ

ನನ್ನನ್ನು ಯಾರೂ ಟಚ್‌ ಮಾಡಲಾರರು, ನಾನು ಪರಮಶಿವ: ನಿತ್ಯಾನಂದ ಹೊಸ ವಿಡಿಯೋ

ಬಾಲಕಿಯರಿಬ್ಬರ ಅಪಹರಣ, ಅತ್ಯಾಚಾರ ಹಾಗೂ ಆಶ್ರಮದಲ್ಲಿ ಬಾಲಕರನ್ನು ಇಟ್ಟುಕೊಂಡ ಆರೋಪ ಹೊತ್ತಿರುವ ನಿತ್ಯಾನಂದ ಈಗ ದೇಶ ಬಿಟ್ಟು ಪರಾರಿಯಾಗಿದ್ದು, ಹೊಸ ದೇಶ ಕಟ್ಟಲು ಮುಂದಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

Vijaya Karnataka Web 7 Dec 2019, 8:00 am
ಹೊಸದಿಲ್ಲಿ: ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪ ಹೊತ್ತು ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನ ನಿತ್ಯಾನಂದ ಈಗ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾನೆ.
Vijaya Karnataka Web ನಿತ್ಯಾನಂದ
ನಿತ್ಯಾನಂದ


ನಾನು ಪರಮ ಶಿವ, ನನ್ನನ್ನು ಯಾರೂ ಟಚ್‌ ಮಾಡಲಾರರು ಎಂದ ವಿಡಿಯೋದಲ್ಲಿ ನಿತ್ಯಾಣಂದ ಹೇಳಿಕೊಂಡಿದ್ದಾನೆ.

ನಿತ್ಯಾನಂದ ಅಜ್ಞಾತ ಸ್ಥಳದಿಂದ ಹೊಸ ವಿಡಿಯೊ ಸಂದೇಶ ಹರಿಬಿಟ್ಟಿದ್ದು, ಅದೀಗ ವೈರಲ್‌ ಆಗಿದೆ. ''ನನ್ನನ್ನು ಯಾರೂ ಟಚ್‌ ಮಾಡಲು ಸಾಧ್ಯವಿಲ್ಲ. ಯಾವ ನ್ಯಾಯಾಲಯವೂ ನನ್ನನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ.ಸತ್ಯವೇನೆಂದು ನಾನು ಜಗತ್ತಿಗೆ ತೋರಿಸುತ್ತೇನೆ. ನಾನು ಪರಮಶಿವ'' ಎಂದು ನಿತ್ಯಾನಂದ ಹೇಳುತ್ತಿರುವುದು ವಿಡಿಯೊದಲ್ಲಿದೆ. ಅಜ್ಞಾತ ಸ್ಥಳದಿಂದ ಈ ವಿಡಿಯೊ ಟ್ವೀಟ್‌ ಮಾಡಲಾಗಿದೆ.

ಫ್ರಾನ್ಸ್‌ ನಲ್ಲೂ2.85 ಕೋಟಿ ವಂಚನೆ!

ಮಕ್ಕಳು ಮತ್ತು ಮಹಿಳೆಯರ ಅಕ್ರಮ ಬಂಧನ, ಅತ್ಯಾಚಾರ ಆರೋಪ ಎದುರಿಸುತ್ತಿರುವ ನಿತ್ಯಾನಂದನ ವಿರುದ್ಧ ಫ್ರಾನ್ಸ್‌ ಸರಕಾರ ವಂಚನೆ ಪ್ರಕರಣದ ತನಿಖೆ ಆರಂಭಿಸಿದೆ. ಫ್ರೆಂಚ್‌ ನಾಗರಿಕರೊಬ್ಬರು ತಮಗೆ ನಿತ್ಯಾನಂದ ಸುಮಾರು 2.85 ಕೋಟಿ ರೂ. (40,000 ಅಮೆರಿಕನ್‌ ಡಾಲರ್‌) ವಂಚನೆ ಮಾಡಿದ್ದಾನೆ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿಈ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ