ಆ್ಯಪ್ನಗರ

ಯಾರಿಗೂ ಬೇಡವಾದ ಝಾಕೀರ್‌ ನಾಯ್ಕ್‌; ಆತನಿಗೆ ಆಶ್ರಯ ಕೊಟ್ಟಿದ್ದೇ ತಲೆನೋವಾಗಿದೆ ಎಂದ ಮಲೇಷ್ಯಾ!

ಇತ್ತೀಚೆಗೆ ರಷ್ಯಾದಲ್ಲಿನಡೆದ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಝಾಕೀರ್‌ ನಾಯ್ಕ್‌ ಗಡಿಪಾರು ವಿಷಯವಾಗಿ ಮಲೇಷ್ಯಾ ಪ್ರಧಾನಿ ಜತೆ ಚರ್ಚಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿಮಹತಿರ್‌ ಈ ಸ್ಪಷ್ಟನೆ ನೀಡಿದ್ದಾರೆ.

PTI 18 Sep 2019, 12:14 pm
ಕೌಲಾಲಂಪುರ: ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್‌ ಯಾವ ದೇಶಕ್ಕೂ ಬೇಡವಾಗಿದ್ದು, ಆತನಿಗೆ ಆಶ್ರಯ ಕೊಟ್ಟಿರುವುದೇ ನಮಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಮಲೇಷ್ಯಾ ಪ್ರಧಾನಿ ಮಹತಿರ್‌ ಮೊಹಮ್ಮದ್‌ ಹೇಳಿದ್ದಾರೆ. ಇತ್ತೀಚೆಗೆ ರಷ್ಯಾದಲ್ಲಿನಡೆದ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಝಾಕೀರ್‌ ನಾಯ್ಕ್‌ ಗಡಿಪಾರು ವಿಷಯವಾಗಿ ಮಲೇಷ್ಯಾ ಪ್ರಧಾನಿ ಜತೆ ಚರ್ಚಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಮಹತಿರ್‌ ಈ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web zakir


'ಝಾಕೀರ್‌ ನಾಯ್ಕ್‌ಗೆ ಆಶ್ರಯ ನೀಡಿದ್ದೇ ನಮ್ಮ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ. ಆತನ ಗಡಿಪಾರಿಗೆ ಭಾರತವೂ ಸೇರಿ ಯಾವ ರಾಷ್ಟ್ರಗಳೂ ನನ್ನಲ್ಲಿಮನವಿ ಮಾಡಿಕೊಂಡಿಲ್ಲ. ಹಿಂದೂಗಳು ಹಾಗೂ ಚೀನಿಯರ ವಿರುದ್ಧ ದ್ವೇಷದ ಹೇಳಿಕೆ ನೀಡಿದ್ದ ಝಾಕೀರ್‌ಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಆತನನ್ನು ಯಾವ ದೇಶಕ್ಕೆ ರವಾನಿಸಬೇಕು ಎನ್ನುವುದೇ ತಿಳಿಯುತ್ತಿಲ್ಲ' ಎಂದು ಮಹತಿರ್‌ ಹೇಳಿದ್ದಾರೆ.

ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಅಕ್ರಮ ವರ್ಗಾವಣೆ ಪ್ರಕರಣದಲ್ಲಿಝಾಕೀರ್‌ ನಾಯ್ಕ್‌ ಗಡಿಪಾರಿಗೆ ಭಾರತ ಮನವಿ ಮಾಡಿಕೊಂಡಿತ್ತು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ