ಆ್ಯಪ್ನಗರ

ಶಾರೂಖ್‌ರನ್ನು ದಾವೂದ್‌ಗೆ ಹೋಲಿಸಿದ ಕೈಲಾಶ್

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲೇಶ್ ವಿಜಯ್ ವರ್ಗಿಯಾ ನಟ ಶಾರೂಖ್‌ಖಾನ್‌ರನ್ನು ಭೂಗತ ಪಾತಕಿ ದಾವೂದ್ ಇಬ್ರಾಯಿಂಗೆ ಹೋಲಿಸಿದ್ದಾರೆ.

Vijaya Karnataka Web 25 Jan 2017, 2:23 pm
ವಡೋದರಾ: ನಟ ಶಾರೂಖ್‌ ಖಾನ್‌ರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಹೋಲಿಸಿದ್ದಾರೆ.
Vijaya Karnataka Web not only srk crowds will come to see dawood too
ಶಾರೂಖ್‌ರನ್ನು ದಾವೂದ್‌ಗೆ ಹೋಲಿಸಿದ ಕೈಲಾಶ್


ವಡೋದರಾ ರೈಲ್ವೆ ಸ್ಟೇಷನ್‌ಗೆ ಶಾರೂಖ್ ಬಂದಾಗ ನೂಕುನುಗ್ಗಲು ಉಂಟಾಗಿ ರಾಜಕಾರಣಿ, ಸಮಾಜ ಸೇವಕ ಫರೀದ್ ಖಾನ್ ಪಠಾಣ್ ಮೃತಪಟ್ಟ ಘಟನೆಯ ಕುರಿತು ಮಾತನಾಡುತ್ತಾ ವರ್ಗೀಯಾ ಈ ಹೇಳಿಕೆ ನೀಡಿದ್ದಾರೆ.

'ಒಂದು ವೇಳೆ ದಾವೂದ್ ಇಬ್ರಾಹಿಂ ಬೀದಿಗೆ ಬಂದರೂ ಅವನನ್ನು ನೋಡಲು ಜನರು ಗುಂಪು ಸೇರಬಹುದು, ಜನರ ಗುಂಪು ನೋಡಿ ಜನಪ್ರಿಯತೆಯನ್ನು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ, ಇದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಜನರಿಗೆ ನಾನು ಏನು ಹೇಳುತ್ತಿದ್ದೇನೆ ಎಂದು ಅರ್ಥವಾಗಿರುತ್ತದೆ' ಎಂದು ವರದಿಗಾರರ ಬಳಿ ಹೇಳಿದರು.

ಶಾರೂಖ್ 'ರಯೀಸ್‌' ಚಿತ್ರದ ಪ್ರಚಾರಕ್ಕಾಗಿ 'ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್‌ಪ್ರೆಸ್‌' ರೈಲಿನಲ್ಲಿ ಬಂದಾಗ ನೂಕುನುಗ್ಗಲು ಉಂಟಾಗಿ ಒಬ್ಬ ವ್ಯಕ್ತಿ ಮೃತ ಪಟ್ಟು, ಮತ್ತೆ ಕೆಲವರಿಗೆ ಪೆಟ್ಟಾಗಿತ್ತು. ಈ ದುರಂತಕ್ಕೆ ಶಾರೂಖ್‌ರನ್ನು ಡಾನ್‌ ದಾವೂದ್‌ಗೆ ಹೋಲಿಸುವುದರ ಮುಖಾಂತರ ಕೈಲಾಶ್‌ ರಾಜಕೀಯ ಬಣ್ಣ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ