ಆ್ಯಪ್ನಗರ

ದೀದಿ ಸೂಚನೆಯಿಂದ ಪೇಚಿಗೆ ಸಿಲುಕಿದ ಟಿಎಂಸಿ ಕಾರ‍್ಯಕರ್ತರು

ವಿವಿಧ ಸ್ಥಳೀಯ ಸಂಸ್ಥೆಗಳ ಟಿಎಂಸಿ ಸದಸ್ಯರ ಸಭೆಯನ್ನು 'ದೀದಿ' ಜೂನ್‌ 18ರಂದು ಆಯೋಜಿಸಿದ್ದರು. ಅಲ್ಲಿ ಅವರು ಈ ಸೂಚನೆ ನೀಡಿದ್ದರು. ಪಕ್ಷ ದೊಳಗಿನಿಂದ ಭ್ರಷ್ಟಾಚಾರ ಕಿತ್ತೊಗೆಯುವುದು ಇದರ ಉದ್ದೇಶವಾಗಿತ್ತು.

PTI 27 Jun 2019, 5:00 am
ಕೋಲ್ಕೊತಾ: ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅವರಿಂದ ಪಡೆದ 'ಕಟ್‌ ಹಣ'ವನ್ನು (ಲಂಚದ ರೂಪದಲ್ಲಿ ಪಡೆದ ಹಣ) ಮರಳಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡಿದ ಸೂಚನೆಯಿಂದ ಕಾರ‍್ಯಕರ್ತರು ಪೇಚಿಗೆ ಸಿಲುಕಿದ್ದಾರೆ. ಒಂದೊಮ್ಮೆ ಹಣ ವಾಪಸ್‌ ನೀಡಿದರೆ ನಾವು ಭ್ರಷ್ಟರು ಎಂಬುದನ್ನು ಒಪ್ಪಿಕೊಂಡಂತಾಗುವುದಲ್ಲದೇ ಇದು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತದೆ ಎಂಬುದು ಕಾರ‍್ಯಕರ್ತರ ಅಳಲಾಗಿದೆ. ಆದರೆ 'ದೀದಿ' ಲಂಚದ ಹಣ ವಾಪಸ್‌ ನೀಡಿದರೆ ತಪ್ಪೇನೂ ಆಗದು. ಇದು ಪಕ್ಷದಲ್ಲಿ ಶಿಸ್ತು ಇದೆ ಎಂಬ ಸಂದೇಶವನ್ನೂ ರವಾನಿಸಿದಂತಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web mamata


ವಿವಿಧ ಸ್ಥಳೀಯ ಸಂಸ್ಥೆಗಳ ಟಿಎಂಸಿ ಸದಸ್ಯರ ಸಭೆಯನ್ನು 'ದೀದಿ' ಜೂನ್‌ 18ರಂದು ಆಯೋಜಿಸಿದ್ದರು. ಅಲ್ಲಿ ಅವರು ಈ ಸೂಚನೆ ನೀಡಿದ್ದರು. ಪಕ್ಷ ದೊಳಗಿನಿಂದ ಭ್ರಷ್ಟಾಚಾರ ಕಿತ್ತೊಗೆಯುವುದು ಇದರ ಉದ್ದೇಶವಾಗಿತ್ತು. ಆದರೆ ಈ ಸೂಚನೆ ಬೆನ್ನಲ್ಲೇ ಜನಪ್ರತಿನಿಧಿಗಳು ಲಂಚ ಪಡೆದೇ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂಬುದು ಸಾಬೀತಾದಂತಾಗಿದೆ ಎಂದು ಆರೋಪಿಸಿ ಅಲ್ಲಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.

ಮಮತಾ ಬ್ಯಾನರ್ಜಿ ಅವರು, ''ಪುರಾವೆಗಳಿಲ್ಲದೇ ಯಾರ ಮೇಲೂ ದೂರುವುದು ಸರಿಯಲ್ಲ. ಹಾಗಾಗಿ ಪಕ್ಷದ ಆಂತರಿಕ ಸಭೆಯಲ್ಲಿ ಕಾರ‍್ಯಕರ್ತರಿಗೆ ಹೀಗೆ ಸೂಚನೆ ನೀಡಿದ್ದೇನೆ ಅಷ್ಟೆ. ಲಂಚ ಪಡೆದಿದ್ದೇ ಆದಲ್ಲಿ ಕಾರ‍್ಯಕರ್ತರು ಅದನ್ನು ಹಿಂದಿರುಗಿಸಬೇಕು. ಇದರಲ್ಲಿ ತಪ್ಪೇನೂ ಇಲ್ಲ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ