ಆ್ಯಪ್ನಗರ

ಡಬ್ಬಾವಾಲಾಗಳಿನ್ನು ಸ್ವಚ್ಛತೆಯ ರಾಯಭಾರಿಗಳೂ ಹೌದು

ನಗರಾಭಿವೃದ್ಧಿ ಸಚಿವಾಲಯ ಸುಮಾರು 5 ಸಾವಿರ ಡಬ್ಬಾವಾಲಾಗಳನ್ನು ಸಂಪರ್ಕಿಸಿದ್ದು, ಜನರಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಬಗ್ಗೆ ಊಟದ ಡಬ್ಬಗಳ ಮೇಲೆ ಸಂದೇಶಗಳನ್ನು ಅಂಟಿಸಲು ಕೇಳಿಕೊಂಡಿದೆ.

ಏಜೆನ್ಸೀಸ್ 11 Jul 2016, 4:15 pm
ಹೊಸದಿಲ್ಲಿ: ಮುಂಬಯಿಯಲ್ಲಿ ಡಬ್ಬಾವಾಲಾಗಳ ಕಾರ್ಯವೈಖರಿ ಹಾಗೂ ಅವರ ವೃತ್ತಿಪರತೆ ಬಗ್ಗೆ ಅಪಾರ ಮೆಚ್ಚುಗೆ ಇದೆ. ಉದ್ಯೋಗಸ್ಥರ ಊಟವನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಇವರು, ಸ್ವಚ್ಛತಾ ಸಂದೇಶಗಳನ್ನೂ ಪಸರಿಸುವ ರಾಯಭಾರಿಗಳಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
Vijaya Karnataka Web now dabbawalas may also deliver swachhata message
ಡಬ್ಬಾವಾಲಾಗಳಿನ್ನು ಸ್ವಚ್ಛತೆಯ ರಾಯಭಾರಿಗಳೂ ಹೌದು


ನಗರಾಭಿವೃದ್ಧಿ ಸಚಿವಾಲಯ ಸುಮಾರು 5 ಸಾವಿರ ಡಬ್ಬಾವಾಲಾಗಳನ್ನು ಸಂಪರ್ಕಿಸಿದ್ದು, ಜನರಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಬಗ್ಗೆ ಊಟದ ಡಬ್ಬಗಳ ಮೇಲೆ ಸಂದೇಶಗಳನ್ನು ಅಂಟಿಸಲು ಕೇಳಿಕೊಂಡಿದೆ.

ಸುಮಾರು 1.7ರಿಂದ 2 ಲಕ್ಷ ಮಂದಿಗೆ ಊಟ ತೆಗೆದುಕೊಂಡು ಹೋಗುವ ಈ ಡಬ್ಬಾವಾಲಾಗಳು, ದೇಶದ ಆರ್ಥಿಕ ರಾಜಧಾನಿಯ ಪ್ರಮುಖ ಭಾಗ. ಈ ಕಾರಣದಿಂದಲೇ ಇವರನ್ನು ಸ್ವಚ್ಛ ಭಾರತ ಆಂದೋಲನಕ್ಕೆ ನೇಮಿಸಿಕೊಳ್ಳಲಾಗಿದೆ.

'ಊಟಕ್ಕೆ ಮುಂಚೆ ಕೈ ತೊಳೆದುಕೊಳ್ಳಿ, ಉಳಿದ ಆಹಾರವನ್ನು ಕಸದ ತೊಟ್ಟಿಯಲ್ಲಿಯೇ ಬಿಸಾಕಿ....' ಮುಂತಾದ ಸಂದೇಶಗಳುಳ್ಳ ಚೀಟಿಗಳು ಊಟದ ಬಾಕ್ಸ್ ಮೇಲೆ ಅಂಟಿಸುವ ಹೊಣೆಯನ್ನು ಡಬ್ಬಾವಾಲಾಗಳು ವಹಿಸಿಕೊಳ್ಳಲ್ಲಿದ್ದಾರೆ.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಭಾರತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರಕಾರ, ರಾಜ್ಯ ಸರಕಾರಗಳ ನೆರವು ಪಡೆಯುತ್ತಿದ್ದು ನಿವಾಸಿಗಳ ಕಲ್ಯಾಣ ಸಂಘಟನೆಗಳ ನೆರವು ಪಡೆಯಲೂ ಚಿಂತಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ