ಆ್ಯಪ್ನಗರ

ಜಾಹೀರಾತಿನಲ್ಲಿ ರಾಹುಲ್‌ ಈಗ ಯುವರಾಜ!

ಗುಜರಾತ್‌ ವಿಧಾನಸಭಾ ಚುನಾವಣೆ ಪ್ರಚಾರದ ಜಾಹೀರಾತಿನಲ್ಲಿ'ಪಪ್ಪು' ಪದ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿ

Vijaya Karnataka 17 Nov 2017, 12:22 pm
ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಚುನಾವಣೆ ಪ್ರಚಾರದ ಜಾಹೀರಾತಿನಲ್ಲಿ'ಪಪ್ಪು' ಪದ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧಿಸಿದ ಹಿನ್ನೆಲೆಯಲ್ಲಿಇದೀಗ ಬಿಜೆಪಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಅವರನ್ನು ಗುರಿಯಾಗಿಸಿಕೊಂಡು 'ಯುವರಾಜ' ಎಂಬ ಪದ ಬಳಸಲು ನಿರ್ಧರಿಸಿದೆ.
Vijaya Karnataka Web now rahul is yuvaraj in advertisement
ಜಾಹೀರಾತಿನಲ್ಲಿ ರಾಹುಲ್‌ ಈಗ ಯುವರಾಜ!


ಈ ಮೊದಲು ಗುಜರಾತ್‌ ಬಿಜೆಪಿ ಘಟಕವು, ಸೋಷಿಯಲ್‌ ಮಿಡಿಯಾದ ಜಾಹೀರಾತುಗಳಲ್ಲಿರಾಹುಲ್‌ ಗಾಂಧಿಯನ್ನು ಲೇವಡಿ ಮಾಡಲು 'ಪಪ್ಪು' ಪದ ಬಳಸಿ ವಿಡಿಯೊವೊಂದನ್ನು ಸಿದ್ದಪಡಿಸಿತ್ತು.

ಇದಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ 49 ನಿಮಿಷದ ವಿಡಿಯೊದಲ್ಲಿಒಂದಷ್ಟು ಬದಲಾವಣೆಗಳನ್ನು ಮಾಡಿ 'ಪಪ್ಪು' ಬದಲು 'ಯುವರಾಜ' ಶಬ್ದ ಬಳಸಲು ಮುಂದಾಗಿದೆ. ಯುವರಾಜ ಪದ ಬಳಕೆ ಇರುವ ವಿಡಿಯೊ ಬಿಡುಗಡೆಗೆ ಆಯೋಗ ಅನುಮತಿ ನೀಡಿದೆ ಎಂದು ಬಿಜೆಪಿ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ