ಆ್ಯಪ್ನಗರ

ತವರಿಗೆ ಮರಳಲು ಹಾದಿ ಸುಗಮವೆಂದ ಕಾಶ್ಮೀರಿ ಪಂಡಿತರು

ಕೇಂದ್ರದ ನಿರ್ಧಾರದಿಂದ ಕಾಶ್ಮೀರಿ ಪಂಡಿತರು ಗೌರವ ಮತ್ತು ಘನತೆಯೊಂದಿಗೆ ಮತ್ತೆ ತವರು ರಾಜ್ಯಕ್ಕೆ ಮರಳಲು ಹಾದಿ ಸುಗಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vijaya Karnataka 6 Aug 2019, 9:56 am
ಹೊಸದಿಲ್ಲಿ: 1990ರ ದಶಕದಲ್ಲಿ ರಾಜ್ಯದಿಂದ ಹೊರದೂಡಲ್ಪಟ್ಟ ಕಾಶ್ಮೀರಿ ಪಂಡಿತರು, 370ನೇ ವಿಧಿಯನ್ನು ರದ್ದುಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.
Vijaya Karnataka Web Pandit


ಕೇಂದ್ರದ ನಿರ್ಧಾರದಿಂದ ಕಾಶ್ಮೀರಿ ಪಂಡಿತರು ಗೌರವ ಮತ್ತು ಘನತೆಯೊಂದಿಗೆ ಮತ್ತೆ ತವರು ರಾಜ್ಯಕ್ಕೆ ಮರಳಲು ಹಾದಿ ಸುಗಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

''ಕೇಂದ್ರದ ಕ್ರಮವು ಭಾರತದ ಸಾಂಸ್ಕೃತಿಕ, ರಾಜಕೀಯ ಮತ್ತು ಭೌಗೋಳಿಕ ಐಕ್ಯತೆಯನ್ನು ಹೆಚ್ಚಿಸಿದೆ,'' ಎಂದು ಕಾಶ್ಮೀರಿ ಪಂಡಿತರ ಜಾಗತಿಕ ವೇದಿಕೆ (ಜಿಕೆಪಿಡಿ) ಅಭಿಪ್ರಾಯಪಟ್ಟಿದೆ.

ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದೇಶದ ಐತಿಹಾಸಿಕ ದಿನ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದ. ಮುಂದಿನ ಸರದಿ ಪಾಕ್‌ ಆಕ್ರಮಿತ ಕಾಶ್ಮೀರ- ಜೈನುಲ್‌ ಅಬೆದಿನ್‌ ಅಲಿ ಖಾನ್‌, ಅಜ್ಮೀರ್‌ ದರ್ಗಾ ಮುಖ್ಯಸ್ಥ

ಜಮ್ಮು-ಕಾಶ್ಮೀರ ವಿಚಾರವಾಗಿ ಸರಕಾರದ ನಡೆಗೆ ನಮ್ಮ ಬೆಂಬಲವಿದೆ. ಈ ನಡೆಯಿಂದ ರಾಜ್ಯದಲ್ಲಿ ಶಾಂತಿ-ಅಭಿವೃದ್ಧಿಗೆ ನೆರವಾಗಲಿದೆ ಎಂಬ ವಿಶ್ವಾಸವಿದೆ.
-ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಸಿಎಂ

ಇದು ಭಾರತದ ಪ್ರಜಾಪ್ರಭುತ್ವದಲ್ಲೇ ಅತ್ಯಂತ ಕರಾಳ ದಿನ. ಇದೊಂದು ಏಕಪಕ್ಷೀಯ, ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ನಿರ್ಧಾರ. ಇದರ ಪರಿಣಾಮ ಘೋರವಾಗಿರಲಿದೆ-ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

ಇದು ಜಮ್ಮು-ಕಾಶ್ಮೀರ ಜನತೆಗೆ ಸರಕಾರ ಬಗೆದ ದ್ರೋಹ. ಸರಕಾರದ ನಡೆ ಏಕಪಕ್ಷೀಯ ಮತ್ತು ಆಘಾತಕಾರಿ- ಉಮರ್‌ ಅಬ್ದುಲ್ಲಾ, ಎನ್‌ಸಿ ಮುಖಂಡ

ಐತಿಹಾಸಿಕ ದೋಷವನ್ನು ಕೊನೆಗೂ ತಿದ್ದಲಾಗಿದೆ. ಸರಕಾರದ ನಿರ್ಧಾರದಿಂದ ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ, ಶಿಕ್ಷಣ ಮತ್ತು ಆದಾಯ ಗಳಿಕೆ ಅವಕಾಶಗಳು ಹೆಚ್ಚಲಿವೆ- ಅರುಣ್‌ ಜೇಟ್ಲಿ, ಮಾಜಿ ಸಚಿವ

ಏಕೀಕೃತ ಭಾರತಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಸಂದ ಅತಿದೊಡ್ಡ ಗೌರವ. ಮೋದಿ ಮತ್ತು ಅಮಿತ್‌ ಶಾ ಅವರಿಗೆ ಪ್ರತಿಯೊಬ್ಬ ಭಾರತೀಯನ ಹೃದಯಪೂರ್ವಕ ಧನ್ಯವಾದಗಳು- ವಿವೇಕ್‌ ಒಬೆರಾಯ್‌, ನಟ

ಕಾಶ್ಮೀರ ಪರಿಹಾರ ಈಗ ಆರಂಭವಾಗಿದೆ- ಅನುಪಮ್‌ ಖೇರ್‌, ನಟ

ಜಮ್ಮು-ಕಾಶ್ಮೀರದ ಗುರುತನ್ನೇ ಸರಕಾರ ಅಳಿಸಿಹಾಕಿದೆ- ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ