ಆ್ಯಪ್ನಗರ

ದೇಶಾದ್ಯಂತ ಎನ್‌ಆರ್‌ಸಿ ಜಾರಿ

ರಾಷ್ಟ್ರೀಯ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿಅಂಗೀಕಾರ ಸಿಕ್ಕ ತಕ್ಷಣವೇ ಮೊದಲು ಪಶ್ಚಿಮ ಬಂಗಾಳದಲ್ಲಿಯೇ ಎನ್‌ಆರ್‌ಸಿ ಜಾರಿಗೊಳಿಸಲಾಗುವುದು ಎಂದು ಶಾ ಘೋಷಿಸಿದರು.

PTI 2 Oct 2019, 5:00 am
ಕೋಲ್ಕೊತಾ: ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅತ್ಯಗತ್ಯವಾಗಿದ್ದು, ಅದನ್ನು ದೇಶದ ಎಲ್ಲರಾಜ್ಯಗಳಲ್ಲಿಜಾರಿಗೊಳಿಸುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
Vijaya Karnataka Web shah-PTI


ಅಸ್ಸಾಂ ನಂತರ ಅತಿ ಹೆಚ್ಚು ಅಕ್ರಮ ವಲಸಿಗರು ನೆಲೆಸಿರುವ ರಾಜ್ಯ ಪಶ್ಚಿಮ ಬಂಗಾಳವಾಗಿದೆ. ಹೀಗಾಗಿ ರಾಷ್ಟ್ರೀಯ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿಅಂಗೀಕಾರ ಸಿಕ್ಕ ತಕ್ಷಣವೇ ಮೊದಲು ಪಶ್ಚಿಮ ಬಂಗಾಳದಲ್ಲಿಯೇ ಎನ್‌ಆರ್‌ಸಿ ಜಾರಿಗೊಳಿಸಲಾಗುವುದು ಎಂದು ಶಾ ಘೋಷಿಸಿದರು.

ಎನ್‌ಆರ್‌ಸಿ ಕುರಿತು ಬಿಜೆಪಿ ಏರ್ಪಡಿಸಿದ್ದ ಸಮಾವೇಶದಲ್ಲಿಮಾತನಾಡಿದ ಶಾ, ನೈಜ ಪ್ರಜೆಗಳಿಗೆ ಈ ಕಾಯಿದೆ ಜಾರಿಯಿಂದ ಕಿಂಚಿತ್ತೂ ತೊಂದರೆಯಾಗುವುದಿಲ್ಲಎಂದು ಭರವಸೆ ನೀಡಿದರು. ''ಯಾರದೇ ವಿರೋಧವಿದ್ದರೂ ಪಶ್ಚಿಮ ಬಂಗಾಳದಲ್ಲಿಎನ್‌ಆರ್‌ಸಿ ಜಾರಿಗೆ ಬರುವುದು ಖಚಿತ. ಆದರೆ, ಅದರಿಂದ ಬಂಗಾಳದ ಜನ ಆತಂಕ ಪಡುವ ಅಗತ್ಯ ಇಲ್ಲ. ಹಿಂದೂ, ಸಿಖ್‌, ಜೈನ್‌ ಮತ್ತು ಬೌದ್ಧ ಧರ್ಮೀಯ ನಿರಾಶ್ರಿತರು ಭಯ ಪಟ್ಟು ದೇಶ ತೊರೆಯಬೇಕಿಲ್ಲ. ಅವರು ಭಾರತೀಯ ಪೌರತ್ವ ಪಡೆದು ಎಲ್ಲರ ರೀತಿಯಲ್ಲಿನೆಮ್ಮದಿಯಿಂದ ಇರಬಹುದಾಗಿದೆ,'' ಎಂದು ಧೈರ್ಯ ತುಂಬಿದರು.

ದೀದಿ ವಿರುದ್ಧ ವಾಗ್ದಾಳಿ: ಅಸ್ಸಾಂನಲ್ಲಿಜಾರಿಯಾದ ಎನ್‌ಆರ್‌ಸಿ ಬಗ್ಗೆ ಟಿಎಂಸಿ ಅಪಪ್ರಚಾರ ನಡೆಸಿದೆ. ಎನ್‌ಆರ್‌ಸಿ 'ಬಂಗಾಳಿ ವಿರೋಧಿ' ಎನ್ನುವ ದೂಷಣೆ ಮಾಡಿದೆ. ದೊಡ್ಡ ಪ್ರಮಾಣದ ಹಿಂದುಗಳೂ ಸೇರಿದಂತೆ ಬಂಗಾಳಿ ಭಾಷಿಕ 12 ಲಕ್ಷ ಮಂದಿಯನ್ನು ಆಗಸ್ಟ್‌ 31ರಂದು ಪ್ರಕಟಗೊಂಡ ಎನ್‌ಆರ್‌ಸಿ ಅಂತಿಮ ಪಟ್ಟಿಯಿಂದ ಕೈಬಿಡಲಾಗಿರುವುದನ್ನೇ ಮಮತಾ ಸರಕಾರ ಅಸ್ತ್ರವಾಗಿ ಮಾಡಿಕೊಂಡಿದೆ. ಮಮತಾ ಟೀಕೆಯನ್ನು ಪ್ರಸ್ತಾಪಿಸಿದ ಶಾ, ''ದಿದಿ ಟೀಕೆಯಲ್ಲಿ ಹುರುಳಿಲ್ಲ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೈಗೊಂಡ ಕ್ರಮವು ನೈಜ ಭಾರತೀಯರೆಲ್ಲರ ಪರವಾಗಿದೆ. ಎನ್‌ಆರ್‌ಸಿ ವಿಷಯದಲ್ಲಿಬಂಗಾಳದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಬಿಜೆಪಿ ನಿಲುವಿನ ಕುರಿತ ಎಲ್ಲಾ ಅನುಮಾನಗಳನ್ನು ನಿವಾರಿಸುವ ಸಲುವಾಗಿ ನಾನು ಇಂದು ಇಲ್ಲಿದ್ದೇನೆ.... ಎನ್‌ಆರ್‌ಸಿಯಿಂದ ಲಕ್ಷಾಂತರ ಹಿಂದೂಗಳು ಪಶ್ಚಿಮ ಬಂಗಾಳ ತೊರೆಯಬೇಕಾಗುತ್ತದೆ ಎಂದು ಮಮತಾ ದೀ ಹೇಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ಸುಳ್ಳು ಇರಲು ಸಾಧ್ಯವಿಲ್ಲ,'' ಎಂದು ವಾಗ್ದಾಳಿ ಮಾಡಿದರು.
.......
ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನು ದೇಶದಲ್ಲಿವಾಸಿಸಲು ಬಿಡುವುದಿಲ್ಲ. ಅಂತಹ ನುಸುಳುಕೋರರ ಹೊರೆಯಿಂದ ಜಗತ್ತಿನ ಯಾವ ದೇಶವೂ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಇದನ್ನು ನಿಲ್ಲಿಸಲೇಬೇಕಿದೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ