ಆ್ಯಪ್ನಗರ

ಶುಕ್ರವಾರ ದೋವಲ್-ವಾಂಗ್ ಯೀ ನಡುವೆ 2ನೇ ಸುತ್ತಿನ ಮಾತುಕತೆ: ಫೋನ್ ಕಾಲ್‌ಗೆ ಕಾಯುತ್ತಿವೆ ಭಾರತ-ಚೀನಾ!

ನಾಳೆ(ಶುಕ್ರವಾರ) ಕೂಡ ಅಜಿಯತ್-ದೋವಲ್ ಹಾಗೂ ವಾಂಗ್ ಯೀ ನಡುವೆ ದೂರವಾಣಿ ಸಂಭಾಷಣೆ ನಡೆಯಲಿದ್ದು, ಎರಡನೇ ಹಂತದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎನ್ನಲಾಗಿದೆ.

Vijaya Karnataka Web 9 Jul 2020, 9:42 pm
ನವದೆಹಲಿ: ಲಡಾಖ್ ಗಡಿಯಿಂದ ಭಾರತ-ಚೀನಾ ಸೇನೆಗಳು ತಮ್ಮ ತುಕಡಿಗಳನ್ನು ಹಿಂಪಡೆಯುತ್ತಿವೆ. ಈಗಾಗಲೇ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಂಡಿದೆ.
Vijaya Karnataka Web Ajit Doval
ಸಂಗ್ರಹ ಚಿತ್ರ


ಲಡಾಖ್ ಗಡಿಯಿಂದ ಚೀನಾ ತನ್ನ ಸೇನೆಯನ್ನು ಹಿಂಪಡೆಯಲು ಪ್ರಮುಖ ಕಾರಣ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವಿನ ದೂರವಾಣಿ ಸಂಭಾಷಣೆ ಎಂಬುದು ಎಲ್ಲಿರಗೂ ತಿಳಿದ ಸಂಗತಿ.

ಸೈನ್ಯ ಹಿಂಪಡೆಯಲು ಕಾರಣವಾದ ಅಜಿತ್ ಧೋವಲ್-ವಾಂಗ್ ಯೀ ನಡುವಿನ ಫೋನ್ ಕಾಲ್!
ಅದರಂತೆ ನಾಳೆ(ಶುಕ್ರವಾರ) ಕೂಡ ಅಜಿಯತ್-ದೋವಲ್ ಹಾಗೂ ವಾಂಗ್ ಯೀ ನಡುವೆ ದೂರವಾಣಿ ಸಂಭಾಷಣೆ ನಡೆಯಲಿದ್ದು, ಎರಡನೇ ಹಂತದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎನ್ನಲಾಗಿದೆ.

ಕೇವಲ ಒಂದು ವಾರದ ಅವಧಿಯಲ್ಲಿ ಅಜಿತ್ ದೋವಲ್ ಹಾಗೂ ವಾಂಗ್ ಯೀ ಎರಡನೇ ಬಾರಿ ದೂರವಾಣಿಯಲ್ಲಿ ಮಾತನಾಡಲಿದ್ದು, ಗಡಿಯಿಂದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ವೇಗ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಗಲ್ವಾನ್ ಕಣಿವೆಯಲ್ಲಿ 1 ಕಿ.ಮೀ. ಹಿಂದೆ ಸರಿದ ಚೀನಾ, ಮೋದಿ ಭೇಟಿಯಿಂದ ಬೆದರಿತೆ?

ಕಳೆದ ಬಾರಿಯ ದೂರವಾಣಿ ಸಂಭಾಷಣೆಯಲ್ಲಿ ಚರ್ಚೆ ಮಾಡಲಾಗಿದ್ದ ಎಲ್ಲಾ ಅಂಶಗಳೂ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತದ ಮಾತುಕತೆಗೆ ಇಬ್ಬರೂ ನಾಯಕರು ಸಜ್ಜಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ