ಆ್ಯಪ್ನಗರ

ಸಿಂಧೂರ, ಮಂಗಳಸೂತ್ರ ಧರಿಸಿ ಧರ್ಮಾಂಧರಿಗೆ ಸಡ್ಡು ಹೊಡೆದ ಸಂಸದೆ ನುಸ್ರತ್‌ ಜಹಾನ್‌

ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿರುವ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಧರ್ಮ ಮತ್ತು ರಾಜಕೀಯವನ್ನು ಬೆರೆಸುವುದು ಬೇಡ ಎಂಬ ಸಂದೇಶವನ್ನು ಸಾರಿದ್ದಾರೆ.

Vijaya Karnataka Web 4 Jul 2019, 9:29 pm
ಕೋಲ್ಕೊತಾ: ಸಿಂಧೂರ, ಮಂಗಳಸೂತ್ರ ಧರಿಸಿ, ಸೀರೆ ಉಟ್ಟು ಸಂಸತ್ತಿಗೆ ಬಂದ ಕಾರಣಕ್ಕೆ ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿರುವ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಅದೇ ದಿರಸಿನಲ್ಲಿ ಇಸ್ಕಾನ್‌ ರಥಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಧರ್ಮಾಂಧರಿಗೆ ಸಡ್ಡು ಹೊಡೆದಿದ್ದಾರೆ.
Vijaya Karnataka Web ನುಸ್ರತ್‌ ಜಹಾನ್‌
ನುಸ್ರತ್‌ ಜಹಾನ್‌


ಕೋಲ್ಕೊತಾದಲ್ಲಿ ನಡೆದ ಈ ರಥ ಯಾತ್ರೆಯಲ್ಲಿ ನುಸ್ರತ್‌ ಜಹಾನ್‌ ಜತೆಗೆ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ಜತೆಗೆ ನಿಂತದ್ದು ಅವರಿಗೆ ದೊಡ್ಡ ಬಲ ಬಂದಂತಾಯಿತು. ಇಸ್ಕಾನ್‌ ನುಸ್ರತ್‌ ಜಹಾನ್‌ ಅವರನ್ನು ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಈ ವೇಳೆ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ನುಸ್ರತ್‌, ''ಮಮತಾ ಬ್ಯಾನರ್ಜಿ ಅವರು ಈದ್‌ ಹಬ್ಬಕ್ಕೆ ಬಂದು ನಮ್ಮ ಜತೆ ನಿಲ್ಲುತ್ತಾರೆ. ಅದರಲ್ಲಿ ಯಾವುದೇ ರಾಜಕೀಯವಿಲ್ಲ. ಇದು ನಂಬಿಕೆಯ ವಿಚಾರ. ಹಾಗಾಗಿ ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡೋಣ,'' ಎಂದಿದ್ದಾರೆ.

ಮುಸ್ಲಿಂ ಧರ್ಮಗುರುಗಳು ನೀಡಿದ ಫತ್ವಾದ ಬಗ್ಗೆ ಮಾತನಾಡಿದ ಅವರು, ''ನಾನು ಆಧಾರವಿಲ್ಲದ ವಿಚಾರಗಳ ಬಗ್ಗೆ ಗಮನ ಕೊಡುವುದಿಲ್ಲ. ನನಗೆ ನನ್ನ ಧರ್ಮದ ವಿಚಾರ ಗೊತ್ತಿದೆ. ನಾನು ಹುಟ್ಟಾ ಮುಸ್ಲಿಂ, ಈಗಲೂ ಮುಸ್ಲಿಂ. ಅದು ನಂಬಿಕೆಯ ವಿಚಾರ. ಅದನ್ನು ಹೃದಯದಲ್ಲಿ ಅನುಭವಿಸಬೇಕೆ ಹೊರತು ತಲೆಗೆ ತುಂಬಿಸಿಕೊಳ್ಳಬಾರದು'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ