ಒಡಿಶಾ ಒಡೆಯ: ದಾಖಲೆಯ 5ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪಟ್ನಾಯಕ್ ಪ್ರಮಾಣ ವಚನ
146 ಸ್ಥಾನದ ವಿಧಾನಸಭಾ ಬಲಾಬಲದಲ್ಲಿ ನವೀನ್ ಅವರ ಪಕ್ಷ ಬಿಜೆಪಿ ಬರೋಬ್ಬರಿ 112 ಸ್ಥಾನಗಳಲ್ಲಿ ವಿಕ್ರಮ ಸಾಧಿಸಿತ್ತು. ಬಿಜೆಪಿ 23 ಸ್ಥಾನಗಳನ್ನು ಗಳಿಸಿತ್ತು.
Times Now 29 May 2019, 12:53 pm
ಭುವನೇಶ್ವರ: ದೇಶಾದ್ಯಂತ ಕಂಡುಬಂದ ಬಿಜೆಪಿಯ ಅಬ್ಬರದ ನಡುವೆಯೂ ಭಾರಿ ಗೆಲುವು ಸಾಧಿಸಿದ, ಬಿಜೆಡಿ ನಾಯಕ ನವೀನ್ ಪಟ್ನಾಯಕ್ ದಾಖಲೆಯ ಐದನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ 19 ವರ್ಷಗಳಿಂದ ಒಡಿಶಾದ ಚುಕ್ಕಾಣಿ ಅವರ ಕೈಯಲ್ಲಿದೆ.
ಅವರ ಜತೆ 20 ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಟ್ನಾಯಕ್ ಅವರ ಸಹೋದರಿ, ಪ್ರಖ್ಯಾತ ಬಹರಗಾರ್ತಿ ಗೀತಾ ಮೆಹ್ತಾ ಸಹ ಈ ಸಂದರ್ಭಕ್ಕೆ ಸಾಕ್ಷಿಯಾದರು.
146 ಸ್ಥಾನದ ವಿಧಾನಸಭಾ ಬಲಾಬಲದಲ್ಲಿ ನವೀನ್ ಅವರ ಪಕ್ಷ ಬಿಜೆಪಿ ಬರೋಬ್ಬರಿ 112 ಸ್ಥಾನಗಳಲ್ಲಿ ವಿಕ್ರಮ ಸಾಧಿಸಿತ್ತು. ಬಿಜೆಪಿ 23 ಸ್ಥಾನಗಳನ್ನು ಗಳಿಸಿತ್ತು.
ಆದರೆ ಒಟ್ಟು 21 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 12 ಬಾಚಿಕೊಳ್ಳುವಲ್ಲಿ ಸಫಲವಾಗಿದೆ.
ಪದಗ್ರಹಣ ಮಾಡಿದ ಪಟ್ನಾಯಕ್ ಅವರಿಗೆ ಶುಭ ಕೋರಿರುವ ಪ್ರಧಾನಿ ಮೋದಿ, ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
72 ವರ್ಷದ ಮುಖ್ಯಮಂತ್ರಿ ದೇಶದ ಅತಿ ದೀರ್ಘಕಾಲೀನ ಮುಖ್ಯಮಂತ್ರಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ ಪಡೆದಿದ್ದಾರೆ. ತಾವು ಸ್ಪರ್ಧಿಸಿದ್ದ ಎರಡು ಕಡೆಯಿಂದಲೂ ಪಟ್ನಾಯಕ್ ಈ ಬಾರಿ ಗೆಲುವು ದಾಖಲಿಸಿದ್ದರು.
ಬಿಜೆಪಿಯ ಪ್ರಬಲ ಪೈಪೋಟಿ ಅಷ್ಟೇ ಅಲ್ಲ, ಫೋನಿ ಚಂಡಮಾರುತದಂತ ಪ್ರಕೃತಿ ವಿಕೋಪದ ನಡುವೆಯೂ ನವೀನ್ ಪಟ್ನಾಯಕ್ ಅವರ ಬಿಜೆಡಿ ವಿಧಾನಸಭೆ ಚುನಾವಣೆಯಲ್ಲಿ ತನ್ನ ಹಿಡಿತ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು.
ಒಡಿಶಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿಯು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಮುಂದೆ ಬಿಟ್ಟು ಭಾರಿ ರಣತಂತ್ರ ಹೆಣೆದಿತ್ತು. ಅಮಿತ್ ಶಾ ಹಾಗೂ ಮೋದಿ ಭರ್ಜರಿ ರಾರಯಲಿಗಳನ್ನು ನಡೆಸಿದ್ದರು. ಅವರ ಪ್ರಚಾರ ತಕ್ಕ ಮಟ್ಟಿಗಷ್ಟೇ ಪಕ್ಷಕ್ಕೆ ಲಾಭ ತಂದುಕೊಟ್ಟಿದ್ದು, ವಿಧಾನಸಭೆಯಲ್ಲಿ ಬಿಜೆಡಿ-ಬಿಜೆಪಿ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು.
ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ನವೀನ್ ಪಟ್ನಾಯಕ್ ಅವರು ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲು ಅನುಸರಿಸಿದ್ದು ಭರ್ಜರಿ ಫಲ ನೀಡಿದೆ. ಹಾಗೆಯೇ ದಕ್ಷ ಆಡಳಿತವೂ ಅವರ ಕೈಹಿಡಿಯಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅವರ ಜತೆ 20 ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಟ್ನಾಯಕ್ ಅವರ ಸಹೋದರಿ, ಪ್ರಖ್ಯಾತ ಬಹರಗಾರ್ತಿ ಗೀತಾ ಮೆಹ್ತಾ ಸಹ ಈ ಸಂದರ್ಭಕ್ಕೆ ಸಾಕ್ಷಿಯಾದರು.
146 ಸ್ಥಾನದ ವಿಧಾನಸಭಾ ಬಲಾಬಲದಲ್ಲಿ ನವೀನ್ ಅವರ ಪಕ್ಷ ಬಿಜೆಪಿ ಬರೋಬ್ಬರಿ 112 ಸ್ಥಾನಗಳಲ್ಲಿ ವಿಕ್ರಮ ಸಾಧಿಸಿತ್ತು. ಬಿಜೆಪಿ 23 ಸ್ಥಾನಗಳನ್ನು ಗಳಿಸಿತ್ತು.
ಆದರೆ ಒಟ್ಟು 21 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 12 ಬಾಚಿಕೊಳ್ಳುವಲ್ಲಿ ಸಫಲವಾಗಿದೆ.
ಪದಗ್ರಹಣ ಮಾಡಿದ ಪಟ್ನಾಯಕ್ ಅವರಿಗೆ ಶುಭ ಕೋರಿರುವ ಪ್ರಧಾನಿ ಮೋದಿ, ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
72 ವರ್ಷದ ಮುಖ್ಯಮಂತ್ರಿ ದೇಶದ ಅತಿ ದೀರ್ಘಕಾಲೀನ ಮುಖ್ಯಮಂತ್ರಿಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ ಪಡೆದಿದ್ದಾರೆ. ತಾವು ಸ್ಪರ್ಧಿಸಿದ್ದ ಎರಡು ಕಡೆಯಿಂದಲೂ ಪಟ್ನಾಯಕ್ ಈ ಬಾರಿ ಗೆಲುವು ದಾಖಲಿಸಿದ್ದರು.
ಬಿಜೆಪಿಯ ಪ್ರಬಲ ಪೈಪೋಟಿ ಅಷ್ಟೇ ಅಲ್ಲ, ಫೋನಿ ಚಂಡಮಾರುತದಂತ ಪ್ರಕೃತಿ ವಿಕೋಪದ ನಡುವೆಯೂ ನವೀನ್ ಪಟ್ನಾಯಕ್ ಅವರ ಬಿಜೆಡಿ ವಿಧಾನಸಭೆ ಚುನಾವಣೆಯಲ್ಲಿ ತನ್ನ ಹಿಡಿತ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು.
ಒಡಿಶಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿಯು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಮುಂದೆ ಬಿಟ್ಟು ಭಾರಿ ರಣತಂತ್ರ ಹೆಣೆದಿತ್ತು. ಅಮಿತ್ ಶಾ ಹಾಗೂ ಮೋದಿ ಭರ್ಜರಿ ರಾರಯಲಿಗಳನ್ನು ನಡೆಸಿದ್ದರು. ಅವರ ಪ್ರಚಾರ ತಕ್ಕ ಮಟ್ಟಿಗಷ್ಟೇ ಪಕ್ಷಕ್ಕೆ ಲಾಭ ತಂದುಕೊಟ್ಟಿದ್ದು, ವಿಧಾನಸಭೆಯಲ್ಲಿ ಬಿಜೆಡಿ-ಬಿಜೆಪಿ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು.
ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ನವೀನ್ ಪಟ್ನಾಯಕ್ ಅವರು ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲು ಅನುಸರಿಸಿದ್ದು ಭರ್ಜರಿ ಫಲ ನೀಡಿದೆ. ಹಾಗೆಯೇ ದಕ್ಷ ಆಡಳಿತವೂ ಅವರ ಕೈಹಿಡಿಯಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.