ಆ್ಯಪ್ನಗರ

ಫೋನಿಗೆ ಬಲಿಯಾದವರ ಸಂಖ್ಯೆ 64ಕ್ಕೆ ಏರಿಕೆ

ಪುರಿ ಜಿಲ್ಲೆಯೊಂದರಲ್ಲಿಯೇ 39 ಜನರು ಮರಣ ಹೊಂದಿದ್ದಾರೆ ಎಂದು ವಿಶೇಷ ಪರಿಹಾರ ಕಮಿಷನರ್ ಅವರ ವರದಿ ದೃಢಪಡಿಸಿದೆ. ಈ ಹಿಂದೆ ಸರಕಾರ ಜಿಲ್ಲೆಯಲ್ಲಿ 21 ಜನರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.

TIMESOFINDIA.COM 13 May 2019, 7:55 am
ಭುವನೇಶ್ವರ: ಮೇ 3 ರಂದು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫೋನಿ ಚಂಡಮಾರುತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 64ಕ್ಕೆ ಏರಿದೆ.
Vijaya Karnataka Web Fani


ಮತ್ತೆ 21 ಮಂದಿ ದುರ್ಮರಣವನ್ನಪ್ಪಿದ್ದಾರೆ ಎಂದು ಭಾನುವಾರ ರಾಜ್ಯ ಸರಕಾರ ದೃಢಪಡಿಸಿದ್ದು ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 43 ರಿಂದ 64 ಕ್ಕೆ ಏರಿದೆ.

ಪುರಿ ಜಿಲ್ಲೆಯೊಂದರಲ್ಲಿಯೇ 39 ಜನರು ಮರಣ ಹೊಂದಿದ್ದಾರೆ ಎಂದು ವಿಶೇಷ ಪರಿಹಾರ ಕಮಿಷನರ್ ಅವರ ವರದಿ ದೃಢಪಡಿಸಿದೆ. ಈ ಹಿಂದೆ ಸರಕಾರ ಪುರಿ ಜಿಲ್ಲೆಯಲ್ಲಿ 21 ಜನರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಿತ್ತು.

ಖುರ್ಡಾ ಜಿಲ್ಲೆಯಲ್ಲಿ ಮತ್ತೆ ಮೂವರ ಸಾವು ಬೆಳಕಿಗೆ ಬಂದಿದ್ದು, ಸಾವಿನ ಸಂಖ್ಯೆ 9ಕ್ಕೇರಿದೆ. ಮರಣವನ್ನಪ್ಪಿದ್ದ 64 ಜನರಲ್ಲಿ 25 ಜನರು ಗೋಡೆ ಕುಸಿತದಿಂದ , 20 ಜನರು ಬುಡಸಮೇತ ಉರುಳಿದ ಮರ, ವಿದ್ಯುತ್ ಕಂಬ, ಹೋರ್ಡಿಂಗ್ಸ್ ಅಡಿಯಲ್ಲಿ ಸಿಲುಕಿ , 6 ಜನ ಛಾವಣಿ ಕುಸಿದು ಕೊನೆಯುಸಿರೆಳೆದಿದ್ದಾರೆ. ಉಳಿದ 13 ಸಾವುಗಳಿಗೆ ಕಾರಣವಿನ್ನು ಬಹಿರಂಗವಾಗಿಲ್ಲ.

ಇನ್ನು ಸಹಜ ಸ್ಥಿತಿಗೆ ಮರಳದ ರಾಜ್ಯ

ಚಂಡಮಾರುತದ ಅಬ್ಬರದಲ್ಲಿ ನಲುಗಿ ಹೋದ ಒಡಿಶಾದಲ್ಲಿ 9 ದಿನ ಕಳೆದರೂ ಜನಜೀವನ ಇನ್ನೂ ಸಹಜಸ್ಥಿತಿಗೆ ಮರಳುತ್ತಿಲ್ಲ. ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಪುನರ್ವಸತಿ ಕಾರ್ಯಕ್ರಮಗಳು ಮಂದಗತಿಯಲ್ಲಿ ನಡೆಯುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುತೇಕ ಕಡೆ ಪುನಃ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಇನ್ನೂ ಸಾಧ್ಯವಾಗಿಲ್ಲ. ಅನೇಕ ಕಡೆ ನೀರು ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಭುವನೇಶ್ವರ ಸೇರಿದಂತೆ ಅನೇಕ ನಗರಗಳಲ್ಲಿ ಭಾನುವಾರ ಜನರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮೇ 3ರಂದು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತದಿಂದ 14 ಜಿಲ್ಲೆಗಳ 14 ಸಾವಿರ ಗ್ರಾಮಗಳು ತೀವ್ರತರದಲ್ಲಿ ತತ್ತರಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ