ಆ್ಯಪ್ನಗರ

ಒಡಿಶಾದಲ್ಲಿ ಕೊರೊನಾ ಮಾರಿ ಓಡಿಸಲು ನರಬಲಿ ಕೊಟ್ಟ ಪೂಜಾರಿ!

ಕೊರೊನಾ ಮಹಾಮಾರಿಯ ನಿವಾರಣೆಗೆ ಥರಥರದ ಪೂಜೆ ಮಾಡಿದ್ದನ್ನು ಕಂಡು, ಕೇಳಿದ್ದೀರಿ. ಆದರೆ, ಇಲ್ಲೊಬ್ಬ ಪೂಜಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುರಿ-ಕೋಳಿ ಬಲಿ ನೀಡುವಂತೆ, ದೇವರಿಗೆ ಮನುಷ್ಯನನ್ನೇ ಬಲಿ ಕೊಟ್ಟಿದ್ದಾನೆ.

Vijaya Karnataka Web 28 May 2020, 8:51 pm
ಭುವನೇಶ್ವರ: ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿರುವ ಈ ಕಾಲದಲ್ಲೂ ಮೂಡನಂಬಿಕೆಗಳು ಆಚರಣೆಯಲ್ಲಿವೆ. ಕೊರೊನಾ ಮಹಾಮಾರಿಯ ನಿವಾರಣೆಗೆ ಥರಥರದ ಪೂಜೆ ಮಾಡಿದ್ದನ್ನು ಕಂಡು, ಕೇಳಿದ್ದೀರಿ. ಆದರೆ, ಇಲ್ಲೊಬ್ಬ ಪೂಜಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುರಿ-ಕೋಳಿ ಬಲಿ ನೀಡುವಂತೆ, ದೇವರಿಗೆ ಮನುಷ್ಯನನ್ನೇ ಬಲಿ ಕೊಟ್ಟಿದ್ದಾನೆ.
Vijaya Karnataka Web Odisha priest


ಒಡಿಶಾದ ಕಟಕ್ ಜಿಲ್ಲೆಯ ದೇವಾಲಯ ಒಂದರಲ್ಲಿ ಈ ಘಟನೆ ನಡೆದಿದೆ. ದೇವರನ್ನು ಶಾಂತಗೊಳಿಸಲು ಹಾಗೂ ಕೊರೊನಾ ಮಹಾಮಾರಿಯನ್ನು ಓಡಿಸಲು ಅರ್ಚಕರೊಬ್ಬರು ಬುಧವಾರ ರಾತ್ರಿ ನರಬಲಿ ಕೊಟ್ಟಿದ್ದಾನೆ. ಈಗ ಈ ಪೂಜಾರಿ ಪೊಲೀಸರ ವಶದಲ್ಲಿದ್ದಾರೆ.

ಅರ್ಚಕ ದೇವಾಲಯದ ಆವರಣದಲ್ಲಿಯೇ ಸ್ಥಳೀಯ 52 ವರ್ಷದ ವ್ಯಕ್ತಿಯನ್ನು ಬಲಿಕೊಟ್ಟಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಕೊರೊನಾ ವೈರಸ್‌ ನಿವಾರಣೆಗಾಗಿ ಬಲಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

115 ಮಂದಿಗೆ ಕೊರೊನಾ! ರಾಜ್ಯದಲ್ಲಿ 2,533ಕ್ಕೇರಿದ ಸೋಂಕಿತರ ಸಂಖ್ಯೆ!

70 ವರ್ಷದ ಅರ್ಚಕ ನರಬಲಿ ಕೊಟ್ಟ ಬಳಿಕ ಪೊಲೀಸರ ಮುಂದೆ ಶರಣಾಗಿದ್ದು ತಾನು ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಅರ್ಚಕನ ಹೇಳಿಕೆ ಆಧರಿಸಿ ದೇವಾಲಯಕ್ಕೆ ತೆರಳಿ ತಪಾಸಣೆ ನಡೆಸಿದ ಪೊಲೀಸರು ವ್ಯಕ್ತಿಯ ಶವ ಸಿಕ್ಕಿದೆ.

"ಕನಸಿನಲ್ಲಿ ಬಂದ ದೇವರು ತನಗೆ ನರಬಲಿ ನೀಡುವಂತೆ ಸೂಚಿಸಿದ. ನರಬಲಿ ಕೊಟ್ಟರೆ ಕೋವಿಡ್ - 19 ಸಂಪೂರ್ಣವಾಗಿ ಹೋಗುತ್ತದೆ ಎಂದು ದೇವರು ಹೇಳಿದ್ದ" ಎಂದು ಅರ್ಚಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಜೂ.1ರಿಂದ ಸಾರ್ವಜನಿಕರ ದರ್ಶನಕ್ಕೆ ದೇವಾಲಯಗಳು ಸಿದ್ಧ! ಅಧಿಕೃತ ಆದೇಶವಷ್ಟೇ ಬಾಕಿ

ಬುಧವಾರ ರಾತ್ರಿ ಬ್ರಾಹ್ಮಿಣಿ ದೇವಿ ದೇವಾಲಯದ ಆವರಣದಲ್ಲಿ ಸರೋಜ್ ಕುಮಾರ್ ಪ್ರಧಾನ್ ಹತ್ಯೆಯಾಗಿದೆ. ಆದರೆ, ಸ್ಥಳೀಯರು ಅರ್ಚಕ ಮತ್ತು ಸರೋಜ್ ಕುಮಾರ್ ನಡುವೆ ಹಳೆಯ ದ್ವೇಷವಿತ್ತು ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು, ಹತ್ಯೆಗೆ ಬಳಸಿದ ಗರಗಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ