ಆ್ಯಪ್ನಗರ

ಕಾಂಗ್ರೆಸ್ ಬ್ಯಾನರ್‌‌ನಲ್ಲಿ ಶಿವಭಕ್ತನಾದ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೀಗ 'ಶಿವ ಭಕ್ತ'ರಾಗಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಕಿರುವ ಬ್ಯಾನರ್‌ಗಳಲ್ಲಿ ಶಿವಭಕ್ತನಾಗಿ ಬಿಂಬಿತರಾಗಿರುವ ರಾಹುಲ್ ಗಾಂಧಿ ರಾಜ್ಯದಲ್ಲಿ ಮಹಿಳಾ ಸುರಕ್ಷತೆ, ಉದ್ಯೋಗ ಖಾತ್ರಿಯ ಪ್ರತಿಜ್ಞೆ ಮಾಡುತ್ತಿದ್ದಾರೆ.

TIMESOFINDIA.COM 17 Sep 2018, 2:32 pm
ಭೋಪಾಲ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೀಗ 'ಶಿವ ಭಕ್ತ'ರಾಗಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಕಿರುವ ಬ್ಯಾನರ್‌ಗಳಲ್ಲಿ ಶಿವಭಕ್ತನಾಗಿ ಬಿಂಬಿತವಾಗಿರುವ ರಾಹುಲ್ ಗಾಂಧಿ ರಾಜ್ಯದಲ್ಲಿ ಮಹಿಳಾ ಸುರಕ್ಷತೆ, ಉದ್ಯೋಗ ಖಾತ್ರಿಯ ಪ್ರತಿಜ್ಞೆ ಮಾಡುತ್ತಿದ್ದಾರೆ.
Vijaya Karnataka Web shiv


ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿ ಭೋಪಾಲ್ಗೆ ಭೇಟಿ ನೀಡಿದ್ದು, ಅವರು ರೋಡ್ ಶೋ ನಡೆಸುತ್ತಿರುವ ರಸ್ತೆಯುದ್ದಕ್ಕೂ ಈ ರೀತಿಯ ಬ್ಯಾನರ್‌ಗಳನ್ನು ಅಂಟಿಸಲಾಗಿದೆ.

ಕಾಂಗ್ರೆಸ್ ಕಾರ್ಪೊರೇಟರ್ ಗಿರೀಶ್ ಶರ್ಮಾ ಎಂಬುವರು ಈ ಬ್ಯಾನರ್‌ಗಳನ್ನು ಹಾಕಿಸಿದ್ದಾರೆ.

ಕಾಂಗ್ರೆಸ್‌ನ ಈ ನಡೆ ಚುನಾವಣಾ ಗಿಮಿಕ್ ಎಂದು ಬಿಜೆಪಿ ಲೇವಡಿ ಮಾಡಿದರೆ, ಬಿಜೆಪಿಯವರು ಎಂದ ಕೂಡಲೇ ಅವರಿಗೆ ಹಿಂದು ಧರ್ಮದ ಮೇಲೆ ವಿಶೇಷ ಹಕ್ಕಿದೆ ಎಂದಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಯಾರು ಬೇಕಾದರೂ ಶಿವ ಭಕ್ತರಾಗಬಹುದು. ಇಂಥವರೇ ಶಿವನ ಭಕ್ತರಾಗಬೇಕೆಂದು ನಿರ್ಧರಿಸಲು ಬಿಜೆಪಿಯವರು ಯಾರು? ಎಂದು ಮಧ್ಯ ಪ್ರದೇಶ್ ಕಾಂಗ್ರೆಸ್ ಮಾಧ್ಯಮ ಉಪಾಧ್ಯಕ್ಷ ಭೂಪೇಂದ್ರ ಗುಪ್ತಾ ಕಿಡಿಕಾರಿದ್ದಾರೆ.

ಇಂದು ಮಧ್ಯಾಹ್ನ 12.45ರ ಸುಮಾರಿಗೆ ಭೋಪಾಲನ ರಾಜ್ ಭೋಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ರಾಹುಲ್, ಕಾರಿನಲ್ಲಿ ಘಾಟಿ ಸ್ಕೈರ್‌ಗೆ ತೆರಳಿ ಅಲ್ಲಿಂದ ರೋಡ್ ಶೋ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ