ಮತ್ತೆ ತಂಟೆಗೆ ಬಂದ್ರೆ ಸರ್ವನಾಶ: ಪಾಕ್ಗೆ ಸೇನಾ ಮುಖಸ್ಥ ರಾವತ್ ಖಡಕ್ ಎಚ್ಚರಿಕೆ
ಕಾರ್ಗಿಲ್ ಯುದ್ಧ ಸಂಭವಿಸಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಶನಿವಾರ ಅವರು ಮಾತನಾಡಿದರು.
Agencies 14 Jul 2019, 7:26 am
ಹೊಸದಿಲ್ಲಿ: ಇನ್ನೊಮ್ಮೆ ಭಾರತದ ವಿರುದ್ಧ ದುಸ್ಸಾಹಸಕ್ಕೆ ಇಳಿದರೆ ಉಗ್ರ ದಂಡನೆ ಕಾದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಗಿಲ್ ಯುದ್ಧ ಸಂಭವಿಸಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಶನಿವಾರ ಅವರು ಮಾತನಾಡಿದರು.
ಯುದ್ಧಕ್ಕೆ ಪ್ರಚೋದಿಸುವ ಬಿಕ್ಕಟ್ಟುಗಳ ನಿರ್ಮಾಣ, ಅಕ್ರಮವಾಗಿ ಉಗ್ರರನ್ನು ನುಸುಳಿಸುವುದು, ಉಗ್ರ ಸಂಘಟನೆಗಳಿಗೆ ಕುಮ್ಮಕ್ಕು ನೀಡುವಂಥ ಚಾಳಿಯನ್ನು ಮುಂದುವರಿಸಿ ದುಸ್ಸಾಹಸಕ್ಕೆ ಮುಂದಾದರೆ ಉಗ್ರ ದಂಡನೆಗೆ ಗುರಿಯಾಗಲಿದೆ ಎಂದು ಎಚ್ಚರಿಸಿದರು.
ಚೀನಾ ಗಡಿ ದಾಟಿಲ್ಲ
ಬೌದ್ಧ ಧರ್ಮಗುರು ದಲೈ ಲಾಮಾ ಅವರ ಜನ್ಮದಿನಾಚರಣೆಯನ್ನು ವಿರೋಧಿಸಲು ಜುಲೈ 6ರಂದು ಕೆಲವು ಚೀನಾ ಪ್ರಜೆಗಳು ಲೆಹ್ ಪಟ್ಟಣದ ಗಡಿ ಬಳಿ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಒಳಗೆ ನುಸುಳಿದ್ದರು. ಅವರನ್ನು ಹಿಂದಕ್ಕೆ ಕರೆಸಲು ಚೀನಾ ಯೋಧರೂ ಒಳಬಂದಿದ್ದರು. ಇದನ್ನು ಗಡಿ ಉಲ್ಲಂಘನೆ ಎಂದು ಹೇಳಲಾಗದು ಎಂದು ಅವರು ತಿಳಿಸಿದರು.
ಮುಂದಿನದು ಹಿಂಸಾತ್ಮಕ, ತಂತ್ರಜ್ಞಾನಾಧರಿತ ಸಮರ
ಭವಿಷ್ಯದ ಸಮರಗಳಲ್ಲಿ ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಲಿದ್ದು, ಇವು ಊಹೆಗೂ ನಿಲುಕದೆ ಹೆಚ್ಚು ಹಿಂಸಾತ್ಮಕವಾಗಿ ಇರಲಿವೆ ಎಂದಿದ್ದಾರೆ ಜನರಲ್ ರಾವತ್.
ಕಾರ್ಗಿಲ್ ಯುದ್ಧ ಸಂಭವಿಸಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಶನಿವಾರ ಅವರು ಮಾತನಾಡಿದರು.
ಯುದ್ಧಕ್ಕೆ ಪ್ರಚೋದಿಸುವ ಬಿಕ್ಕಟ್ಟುಗಳ ನಿರ್ಮಾಣ, ಅಕ್ರಮವಾಗಿ ಉಗ್ರರನ್ನು ನುಸುಳಿಸುವುದು, ಉಗ್ರ ಸಂಘಟನೆಗಳಿಗೆ ಕುಮ್ಮಕ್ಕು ನೀಡುವಂಥ ಚಾಳಿಯನ್ನು ಮುಂದುವರಿಸಿ ದುಸ್ಸಾಹಸಕ್ಕೆ ಮುಂದಾದರೆ ಉಗ್ರ ದಂಡನೆಗೆ ಗುರಿಯಾಗಲಿದೆ ಎಂದು ಎಚ್ಚರಿಸಿದರು.
ಚೀನಾ ಗಡಿ ದಾಟಿಲ್ಲ
ಬೌದ್ಧ ಧರ್ಮಗುರು ದಲೈ ಲಾಮಾ ಅವರ ಜನ್ಮದಿನಾಚರಣೆಯನ್ನು ವಿರೋಧಿಸಲು ಜುಲೈ 6ರಂದು ಕೆಲವು ಚೀನಾ ಪ್ರಜೆಗಳು ಲೆಹ್ ಪಟ್ಟಣದ ಗಡಿ ಬಳಿ ಲೈನ್ ಆಫ್ ಆ್ಯಕ್ಚುಯಲ್ ಕಂಟ್ರೋಲ್ ಒಳಗೆ ನುಸುಳಿದ್ದರು. ಅವರನ್ನು ಹಿಂದಕ್ಕೆ ಕರೆಸಲು ಚೀನಾ ಯೋಧರೂ ಒಳಬಂದಿದ್ದರು. ಇದನ್ನು ಗಡಿ ಉಲ್ಲಂಘನೆ ಎಂದು ಹೇಳಲಾಗದು ಎಂದು ಅವರು ತಿಳಿಸಿದರು.
ಮುಂದಿನದು ಹಿಂಸಾತ್ಮಕ, ತಂತ್ರಜ್ಞಾನಾಧರಿತ ಸಮರ
ಭವಿಷ್ಯದ ಸಮರಗಳಲ್ಲಿ ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಲಿದ್ದು, ಇವು ಊಹೆಗೂ ನಿಲುಕದೆ ಹೆಚ್ಚು ಹಿಂಸಾತ್ಮಕವಾಗಿ ಇರಲಿವೆ ಎಂದಿದ್ದಾರೆ ಜನರಲ್ ರಾವತ್.