ಆ್ಯಪ್ನಗರ

ಓರ್ವ ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದರೆ ಮತ್ತೋರ್ವ ಪ್ರಜಾಪ್ರಭುತ್ವವನ್ನೇ ಗಲ್ಲಿಗೇರಿಸಿದ್ದಾರೆ: ಶಿವಸೇನೆ

ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಗೆ ಹೋಲಿಸಿ ಕೆಂಡಾಮಂಡಲಗೊಂಡಿದೆ.

Vijaya Karnataka Web 26 Nov 2019, 10:01 am
ಮುಂಬಯಿ: ಓರ್ವ ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಲ್ಲಿಗೇರಿದರೆ ಮತ್ತೊರ್ವ 'ಭಗತ್‌ ಸಿಂಗ್‌' ರಾತ್ರಿಯ ಕತ್ತಲಲ್ಲಿ ಪ್ರಜಾಪ್ರಭುತ್ವವನ್ನೇ ಗಲ್ಲಿಗೇರಿಸಿದರು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ವಿರುದ್ಧ ಶಿವಸೇನೆ ಹರಿಹಾಯ್ದಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ನವೆಂಬರ್‌ 23, ಶನಿವಾರ ಬೆಳಗ್ಗೆ ತರಾತುರಿಯಲ್ಲಿ ಪ್ರಮಾಣ ವಚನ ಬೋದಿಸಿದ ರಾಜ್ಯಪಾಲ ಭಗತ್‌ ಕೋಶಾರಿಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.
Vijaya Karnataka Web Shivsena


ಮುಂಬಯಿನ ಹೋಟೆಲ್‌ನಲ್ಲಿ 162 ಶಾಸಕರ ಸಂಖ್ಯಾಬಲವನ್ನು ಪ್ರದರ್ಶಿಸಿದ್ದ ಕಾಂಗ್ರೆಸ್‌-ಶಿವಸೇನೆ-ಎನ್‌ಸಿಪಿ ಮೈತ್ರಿ ಮಹಾ ವಿಕಾಸ ಅಗಾಡಿ ಬಹುಮತದ ಪತ್ರವನ್ನು ರಾಜ್ಯಪಾಲರ ಬಳಿಗೆ ಕೊಂಡೊಯ್ದಾಗ ಏನು ಮಾಡುತ್ತಾರೆ ನೋಡಬೇಕು ಎಂದು ಶಿವಸೇನೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ತೀರ್ಪಿಗಾಗಿ ಕಾಯುತ್ತಿದೆ. ವಿಚಾರಣೆ ಮುಗಿಸಿರುವ ಸುಪ್ರೀಂ ಕೋರ್ಟ್‌ ಮಂಗಳವಾರ 10.30ಕ್ಕೆ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ.

'ಮಹಾ' ಸುಪ್ರೀಂ ತೀರ್ಪು Live: ಯಾವಾಗ, ಹೇಗೆ ವಿಶ್ವಾಸಮತ ಪರೀಕ್ಷೆ ನಡೆಯಬೇಕೆಂದು ಸುಪ್ರೀಂ ನಿರ್ಧಾರ

288 ಶಾಸಕರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಕಾರ ರಚನೆಗೆ ಬೇಕಿರುವ ಮ್ಯಾಜಿಕ್‌ ನಂಬರ್‌ 145. ಮಹಾ ವಿಕಾಸ ಅಗಾಡಿ ತಮಗೆ 162 ಸಂಖ್ಯಾಬಲವಿರುವುದಾಗಿ ಹೇಳಿಕೊಳ್ಳುತ್ತಿದೆ. ಎನ್‌ಸಿಪಿಯ 54 ಶಾಸಕರು ಬೆಂಬಲದೊಂದಿಗೆ ಸರಕಾರ ರಚಿಸಿರುವುದಾಗಿ ಬಿಜೆಪಿ ವಾದಿಸುತ್ತಿದೆ.

ಗುರುಗ್ರಾಮದ 5 ಸ್ಟಾರ್‌ ಹೋಟೆಲ್‌ನಿಂದ 4 ಎನ್‌ಸಿಪಿ ಶಾಸಕರ ರಕ್ಷಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ