ಆ್ಯಪ್ನಗರ

ಶಶಿ ಕ್ಯಾಂಪ್‌ನಿಂದ ತಪ್ಪಿಸಿಕೊಂಡ ಶಾಸಕ: ಸೆಲ್ವಂಗೆ ಬಲ

ಶಶಿಕಲಾ ಅವರು ಶಾಸಕರನ್ನು ಬಲವಂತವಾಗಿ ಕೂಡಿಟ್ಟುಕೊಂಡಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ಮಧುರೈ ಶಾಸಕ ಶರವಣಂ ಅವರು ಶಶಿ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಸಿಎಂ ಪನ್ನೀರ ಸೆಲ್ವಂ ಬಣ ಸೇರಿದ್ದಾರೆ.

ಏಜೆನ್ಸೀಸ್ 14 Feb 2017, 7:53 am

ಚೆನ್ನೈ: ಶಶಿಕಲಾ ಅವರು ಶಾಸಕರನ್ನು ಬಲವಂತವಾಗಿ ಕೂಡಿಟ್ಟುಕೊಂಡಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ಮಧುರೈ ಶಾಸಕ ಶರವಣಂ ಅವರು ಶಶಿ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಸಿಎಂ ಪನ್ನೀರ ಸೆಲ್ವಂ ಬಣ ಸೇರಿದ್ದಾರೆ.

Vijaya Karnataka Web one mla joined hands with o pannerselvam
ಶಶಿ ಕ್ಯಾಂಪ್‌ನಿಂದ ತಪ್ಪಿಸಿಕೊಂಡ ಶಾಸಕ: ಸೆಲ್ವಂಗೆ ಬಲ


ಇದರೊಂದಿಗೆ ಸೆಲ್ವಂರನ್ನು ಬೆಂಬಲಿಸುತ್ತಿರುವ ಶಾಸಕರ ಬಲ 9ಕ್ಕೇರಿದೆ. ಶಶಿಕಲಾ ಅವರು ಶಾಸಕರನ್ನು ಇರಿಸಿರುವ ಗೋಲ್ಡನ್‌ ಬೇ ರೆಸಾರ್ಟ್‌ನಿಂದ ಸೋಮವಾರ ರಾತ್ರಿ ತಪ್ಪಿಸಿಕೊಂಡು ಮದುರೈ ಸಂಸದ ಆರ್‌ ಗೋಪಾಲಕೃಷ್ಣನ್‌ ಅವರೊಂದಿಗೆ ಸೆಲ್ವಂ ನಿವಾಸಕ್ಕೆ ದೌಡಾಯಿಸಿದ ಶರವಣಂ, ತನ್ನಂತೆಯೇ ಹಲವು ಶಾಸಕರು ಅಣ್ಣ ಪನ್ನೀರಸೆಲ್ವಂ ಅವರ ಬೆಂಬಲಕ್ಕಿದ್ದು, ದಿನಗಳೆದಂತೆ ಅವರೆಲ್ಲರೂ ಬಣ ಬದಲಿಸಲಿದ್ದಾರೆ. ಅಣ್ಣ ಸೆಲ್ವಂ ಅವರೇ ಬಹುಮತ ಸಾಬೀತುಪಡಿಸಲಿದ್ದಾರೆ ಎಂದು ಘೋಷಿಸಿದರು. ಸಂಸದ ಗೋಪಾಲಕೃಷ್ಣನ್‌ ಕೂಡ ಸೆಲ್ವಂ ಬಣ ಸೇರುವುದರೊಂದಿಗೆ ಅವರಿಗಿರುವ ಸಂಸದರ ಬೆಂಬಲ 12ಕ್ಕೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ