ಆ್ಯಪ್ನಗರ

ಆ್ಯಂಬಿಡೆಂಟ್‌ ಬಳಿಕ ಅಜ್ಮೆರಾ: ಮತ್ತೊಂದು ದೋಖಾ

ಮೋಸ ಮಾಡಿರುವ ಕಂಪನಿ ಕಳೆದ 8 ತಿಂಗಳಿಂದ ಬಾಗಿಲು ಹಾಕಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ.

Vijaya Karnataka Web 18 Nov 2018, 7:44 am
ಬೆಂಗಳೂರು: ಬಹುಕೋಟಿ ಆ್ಯಂಬಿಡೆಂಟ್‌ ವಂಚನೆ ಪ್ರಕರಣ ರೀತಿಯಲ್ಲೇ ಭಾರಿ ರಿಟರ್ನ್‌ ಕೊಡಿಸುವುದಾಗಿ ನಂಬಿಸಿದ ಅಜ್ಮೆರಾ ಗ್ರೂಪ್‌ ಎಂಬ ಮತ್ತೊಂದು ಕಂಪನಿಯು ಕೇವಲ ಮೂರೇ ತಿಂಗಳಲ್ಲಿ ನೂರಾರು ಕೋಟಿ ರೂ. ಸಂಗ್ರಹಿಸಿ ಬಾಗಿಲು ಹಾಕಿದೆ.
Vijaya Karnataka Web scam


ಹಣ ಕಳೆದುಕೊಂಡ ನೂರಾರು ಹೂಡಿಕೆದಾರರು ಹಣವನ್ನು ವಾಪಸ್‌ ಕೊಡಿಸಿ ಎಂದು ಕೋರಿ ಶನಿವಾರ ಬೆಳಗ್ಗೆ ಸಿಸಿಬಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಮೋಸ ಮಾಡಿರುವ ಕಂಪನಿ ಕಳೆದ 8 ತಿಂಗಳಿಂದ ಬಾಗಿಲು ಹಾಕಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ಪ್ರಕರಣ ದಾಖಲಾಗಿಲ್ಲ.

ಆದರೆ, ವಂಚನೆಗೆ ಒಳಗಾದ ಕೆಲವರು ಇತ್ತೀಚೆಗಷ್ಟೇ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಆ್ಯಂಬಿಡೆಂಟ್‌ ಕಂಪನಿಯ ತನಿಖೆ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ವಿಳಂಬವಾಗಿದೆ ಎನ್ನಲಾಗಿದೆ.

ಆ್ಯಂಬಿಡೆಂಟ್‌ ಕಂಪನಿಯ ವಂಚನೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ. ಆದರೆ, ತಮಗೆ ಆಗಿರುವ ವಂಚನೆಯಲ್ಲಿ ಆರೋಪಿಗಳನ್ನು ಬಂಧಿಸದೆ ಇರುವುದರಿಂದ ಬೇಸರಗೊಂಡ ಹೂಡಿಕೆದಾರರು ಶನಿವಾರ ಸಿಸಿಬಿ ಕಚೇರಿ ಬಳಿ ಜಮಾಯಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ