ಆ್ಯಪ್ನಗರ

ಮುಂಬೈ ಮಳೆಗೆ ನಾಲ್ಕು ಬಲಿ

ಒಬ್ಬ ವ್ಯಕ್ತಿ ಶಾರ್ಟ್‌ ಸಕ್ರ್ಯೂಟ್‌ನಿಂದ ಮೃತಪಟ್ಟರೆ, ಮೂವರು ಸಿಡಿಲು ಬಡಿದು ಸತ್ತಿದ್ದಾರೆ. ಸುಮಾರು 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬಯಿ ನಗರಪಾಲಿಕೆ ತಿಳಿಸಿದೆ.

PTI 2 Jul 2019, 5:00 am
ಮುಂಬಯಿ: ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮುಂಬಯಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಹಾಗೂ ಸ್ಥಳೀಯ ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ನೌಕರರು ಕಚೇರಿಗೆ ತೆರಳಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ.
Vijaya Karnataka Web rain


ಒಬ್ಬ ವ್ಯಕ್ತಿ ಶಾರ್ಟ್‌ ಸಕ್ರ್ಯೂಟ್‌ನಿಂದ ಮೃತಪಟ್ಟರೆ, ಮೂವರು ಸಿಡಿಲು ಬಡಿದು ಸತ್ತಿದ್ದಾರೆ. ಸುಮಾರು 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬಯಿ ನಗರಪಾಲಿಕೆ ತಿಳಿಸಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ 24 ಗಂಟೆ ಅವಧಿಯಲ್ಲಿ 91 ಮಿ.ಮೀ ಮಳೆಯಾಗಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೀರಲ್ಲಿ ಮುಳುಗಿದ ಹಳಿ: ಸಿಯೊನ್‌ ಸೇರಿದಂತೆ ಅನೇಕ ರೈಲು ನಿಲ್ದಾಣಗಳಲ್ಲಿನ ಹಳಿಗಳ ಮೇಲೆ ನೀರು ನಿಂತಿರುವುದರಿಂದ ನಗರದ ಜೀವನಾಡಿಯಾದ ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಪಶ್ಚಿಮ ರೈಲ್ವೆಯ 17 ರೈಲುಗಳು ಹಾಗೂ ಕೇಂದ್ರೀಯ ರೈಲ್ವೆಯ 10 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಮಳೆಯಿಂದಾಗಿ ವಿಮಾನಗಳ ಸಂಚಾರ ಅರ್ಧ ಗಂಟೆ ತಡವಾಗಿದೆ.

ಗುಜರಾತಿನ ಸೂರತ್‌ನಿಂದ ಆರಂಭಗೊಂಡು ಮಹಾರಾಷ್ಟ್ರದ ಮಹಾಬಲೇಶ್ವರದವರೆಗೆ ಮುಂಗಾರು ಅತಿವೇಗವಾಗಿ ಅಪ್ಪಳಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 299 ಮಿ.ಮೀ.ನಷ್ಟು ಮಳೆ ಈ ಮಾರ್ಗದಲ್ಲಿ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ