ಆ್ಯಪ್ನಗರ

ಬಯಲಿಗೆ ಹೋದರೆ ದಂಡ ಖಚಿತ!

ಗುಜರಾತಿನ ಟಾಪಿ ಜಿಲ್ಲೆಯ ಗ್ರಾಮಗಳಲ್ಲಿ ಬಹಿರ್ದೆಸೆಗೆ ತೆರಳುವ ವ್ಯಕ್ತಿಗಳಿಗೆ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಟೈಮ್ಸ್ ಆಫ್ ಇಂಡಿಯಾ 25 Jun 2017, 12:59 pm
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಕನನು ನನಸು ಮಾಡುವ ಉದ್ದೇಶದಿಂದ ಗುಜರಾತಿನ ಟಾಪಿ ಜಿಲ್ಲೆಯ ಗ್ರಾಮಗಳಲ್ಲಿ ಬಹಿರ್ದೆಸೆಗೆ ತೆರಳುವ ವ್ಯಕ್ತಿಗಳಿಗೆ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ.
Vijaya Karnataka Web open defecation free use the loo or pay fine
ಬಯಲಿಗೆ ಹೋದರೆ ದಂಡ ಖಚಿತ!


ಟಾಪಿ ಬುಡಕಟ್ಟು ಜಿಲ್ಲೆಯ ಸುಮಾರು 79 ಗ್ರಾಮಗಳಲ್ಲಿ ಮನೆಯಲ್ಲಿ ಶೌಚಾಲಯ ಇದ್ದರೂ ಸಹ ಬಹಿರ್ದೆಸೆಗೆ ತೆರಳುವ ವ್ಯಕ್ತಿಗಳಿಗೆ ದಂಡ ಕಡ್ಡಾಯಗೊಳಿಸಲಾಗಿದೆ.

ಬಯಲು ಶೌಚಾಲಯ ಮುಕ್ತಗೊಳಿಸುವ ಪ್ರಧಾನಿ ಮೋದಿ ಅವರ ದೃಷ್ಟಿಕೋನದಿಂದ ಗ್ರಾಮಗಳನ್ನು ಪ್ರೇರೆಪಿಸಲಾಗಿದೆ. 'ಮನೆಯಲ್ಲಿ ಶೌಚಾಲಯ ಇರುವ 30ರಷ್ಟು ಜನರು ಬಯಲು ಶೌಚಾಲಯಕ್ಕೆ ತೆರಳುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಬಯಲು ಶೌಚಾಲಯಕ್ಕೆ ತೆರಳುವವರಿಗೆ 200 ರೂಪಾಯಿ ದಂಡ ಕಡ್ಡಾಯಗೊಳಿಸಲಾಯಿತು' ಎಂದು ತಾಲೂಕು ಅಭಿವೃದ್ಧಿ ಅಧಿಕಾರಿ ಚಂದುಬಾಯಿ ಲತಾ ಹೇಳಿದ್ದಾರೆ.

'ಮನೆಯಲ್ಲಿ ಶೌಚಾಲಯ ಹೊಂದಿದ್ದು, ಬಯಲು ಶೌಚಾಲಯಕ್ಕೆ ತೆರಳಿದರೆ ದಂಡ ಖಚಿತ. ಆದರೆ, ಮನೆಯಲ್ಲಿ ಶೌಚಾಲಯಗಳಿಲ್ಲದ ಕುಟುಂಬಗಳಿಗೆ ದಂಡ ವಿಧಿಸಲಾಗುತ್ತಿಲ್ಲ' ಎಂದು ಲತಾ ಸ್ಪಷ್ಟಪಡಿಸಿದ್ದಾರೆ.

'ನಮ್ಮ ಗ್ರಾಮಗಳಲ್ಲಿ ಒಂದು ಉತ್ತಮ ನಿರ್ಣಯ ಕೈಗೊಂಡಿದ್ದು, 22 ಸದಸ್ಯರ ಜಾಗೃತ ಸಮಿತಿಯನ್ನು ರಚಿಸಲಾಯಿತು. ಈ ಕಮಿಟಿ ಗ್ರಾಮದ ಸರ್ಪಂಚ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಗೋಪಾಲಪುರ ಗ್ರಾಮ ಸುಮಾರು 1820 ಜನಸಂಖ್ಯೆ ಹೊಂದಿದೆ. 316 ಕುಟುಂಬಗಳ ಪೈಕಿ 123 ಕುಟುಂಬಗಳು ಶೌಚಾಲಯ ಹೊಂದಿಲ್ಲ. ಈ ಮನೆಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ನಡೆಯುತ್ತಿದೆ' ಎಂದು ಗೋಪಾಲಪುರ ಗ್ರಾಮದ ತಲಾಟಿ ಆರ್‌.ಸಿ.ಧೋಡಿಯಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ