ಆ್ಯಪ್ನಗರ

ಅಕ್ರಮ ವಲಸಿಗರ ಪತ್ತೆಗೆ ಇರುವ ಅಸ್ತ್ರವೇ ಎನ್‌ಆರ್‌ಸಿ: ರಾಜನಾಥ್‌ ಸಿಂಗ್

ಎನ್‌ಆರ್‌ಸಿ ವರದಿಯ ಕುರಿತು ಸಲ್ಲದ ಆರೋಪ ಹೊರಿಸುವ ಮೂಲಕ ಕೆಲವರು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿಯಬಿಟ್ಟು ಶಾಂತಿ ಕದಡುತ್ತಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Vijaya Karnataka Web 3 Aug 2018, 4:42 pm
ಹೊಸದಿಲ್ಲಿ: ಎನ್‌ಆರ್‌ಸಿ ವರದಿಯ ಕುರಿತು ಸಲ್ಲದ ಆರೋಪ ಹೊರಿಸುವ ಮೂಲಕ ಕೆಲವರು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿಯಬಿಟ್ಟು ಶಾಂತಿ ಕದಡುತ್ತಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Vijaya Karnataka Web RajnathSingh


ರಾಷ್ಟ್ರೀಯ ನಾಗರಿಕ ನೋಂದಣಿಯ ಕರಡು ವರದಿ ಜು. 31ರಂದು ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ವರದಿಯಲ್ಲಿ ಸುಮಾರು 40 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿತ್ತು. ಆದರೆ ಅಸ್ಸಾಂನಲ್ಲಿ ಪತ್ತೆಯಾಗಿದ್ದ ಬಾಂಗ್ಲಾ ಅಕ್ರಮ ನಿವಾಸಿಗಳ ಕುರಿತು ಟಿಎಂಸಿ ಮತ್ತು ಇತರ ಕೆಲ ವಿಪಕ್ಷಗಳು ಎನ್ಆರ್‌ಸಿ ವರದಿ ಸರಿಯಾಗಿಲ್ಲ ಎಂದು ಆರೋಪಿಸಿ, ಅದನ್ನು ವಿರೋಧಿಸಿದ್ದವು. ಅಲ್ಲದೆ ಬಿಜೆಪಿ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಕ್ಸಮರಕ್ಕೂ ವರದಿ ಕಾರಣವಾಗಿತ್ತು.

ಎನ್‌ಆರ್‌ಸಿ ವರದಿ ಯಾವುದೇ ಪೂವಾಗ್ರಹದಿಂದ ಕೂಡಿಲ್ಲ, ಅದರಲ್ಲಿ ಯಾವುದೇ ದುರುದ್ದೇಶವಿಲ್ಲ. ದೇಶದ ಎಲ್ಲ ನಾಗರಿಕರು ಕೂಡ ಪಟ್ಟಿಯಲ್ಲಿ ನೋಂದಣಿಯಾಗಲಿದ್ದಾರೆ. ಅದರ ಹೊರತು ಅಕ್ರಮ ವಾಸಿಗಳು ಮಾತ್ರ ಪಟ್ಟಿಯಿಂದ ಹೊರಗುಳಿಯುತ್ತಾರೆ. ಹೀಗಾಗಿ ವರದಿ ಬಗ್ಗೆ ಯಾವುದೇ ಸಂಶಯ ಬೇಡ. ವಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಎನ್‌ಆರ್‌ಸಿ ಸಹಕಾರಿಯಾಗಲಿದೆ ಎಂದು ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ