ಕಾಂಗ್ರೆಸ್ ಪಾಲಿಗೆ OROP ಅಂದ್ರೆ 'ಓನ್ಲೀ ರಾಹುಲ್ ಓನ್ಲೀ ಪ್ರಿಯಾಂಕಾ': ಅಮಿತ್ ಶಾ
ಯೋಧರ ಸಂಕಷ್ಟವನ್ನು ಮೋದಿ ಸರಕಾರ ಮನಗಂಡಿದೆ. ಹೀಗಾಗಿಯೇ ಒಂದೇ ಶ್ರೇಣಿ- ಒಂದೇ ಪಿಂಚಣಿ (ಓಆರ್ಓಪಿ- ಒನ್ ರ್ಯಾಂಕ್ ಒನ್ ಪೆನ್ಷನ್) ಪದ್ಧತಿ ಜಾರಿಗೆ ತಂದಿದೆ. ಕಾಂಗ್ರೆಸ್ ಕೂಡ OROP ಜಾರಿಗೆ ತಂದಿದೆ, ಆದರೆ ಅದರ ಅರ್ಥ- Only Rahul Only Priyanka' ಎಂದು ಅಮಿತ್ ಶಾ ಬಣ್ಣಿಸಿದರು.
Vijaya Karnataka Web 28 Jan 2019, 5:06 pm
ಹೈಲೈಟ್ಸ್:
- ಬಿಜೆಪಿಗೆ ಓಆರ್ಓಪಿ ಎಂದರೆ ಸೈನಿಕರ ಯೋಗಕ್ಷೇಮಕ್ಕಾಗಿ ತಂದ ಯೋಜನೆ; ಆದರೆ ಕಾಂಗ್ರೆಸ್ ಪಾಲಿಗೆ ಅದು ಕುಟುಂಬದ ಬಲವರ್ಧನೆಗಿರುವ ದಾರಿ ಎಂದ ಅಮಿತ್ ಶಾ.
- ಕಾಂಗ್ರೆಸ್ ಪಾಲಿಗೆ OROP ಅಂದರೆ Only Rahul Only Priyanka' ಎಂದು ಛೇಡಿಸಿದ ಅಮಿತ್ ಶಾ
ಧರ್ಮಶಾಲಾ: ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಪಾಲಿಗೆ ಓಆರ್ಓಪಿ ಅಂದರೆ 'ಓನ್ಲೀ ರಾಹುಲ್ ಓನ್ಲೀ ಪ್ರಿಯಾಂಕಾ' ಎಂದು ಛೇಡಿಸಿದರು. ಬಿಜೆಪಿ ಜಾರಿಗೆ ತಂದ ಓಆರ್ಓಪಿ (ಒನ್ ರ್ಯಾಂಕ್ ಒನ್ ಪೆನ್ಷನ್) ಯೋಧರ ಯೋಗಕ್ಷೇಮದ ಗುರಿ ಹೊಂದಿದ್ದರೆ, ಕಾಂಗ್ರೆಸ್ನ ಓಆರ್ಓಪಿ ಕುಟುಂಬದ ಬಲವರ್ಧನೆಗೆ ಮಾತ್ರ ಕೇಂದ್ರೀಕೃತವಾಗಿದೆ ಎಂದು ಅಮಿತ್ ಶಾ ಟೀಕಿಸಿದರು.
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಸಶಸ್ತ್ರ ಪಡೆಗಳಿಗೆ ಹಿಮಾಚಲ ಪ್ರದೇಶದ ಕೊಡುಗೆಯನ್ನು ಶ್ಲಾಘಿಸಿದರು. ಮೊದಲ ಪರಮವೀರ ಚಕ್ರ ಪುರಸ್ಕಾರ ಈ ರಾಜ್ಯಕ್ಕೆ ಸಂದಿದೆ; ಅಲ್ಲದೆ ಈ ರಾಜ್ಯದಿಂದ ಹಲವು ಯೋಧರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಯೋಧರ ಸಂಕಷ್ಟವನ್ನು ಮೋದಿ ಸರಕಾರ ಮನಗಂಡಿದೆ. ಹೀಗಾಗಿಯೇ ಒಂದೇ ಶ್ರೇಣಿ- ಒಂದೇ ಪಿಂಚಣಿ (ಓಆರ್ಓಪಿ- ಒನ್ ರ್ಯಾಂಕ್ ಒನ್ ಪೆನ್ಷನ್) ಪದ್ಧತಿ ಜಾರಿಗೆ ತಂದಿದೆ. ಕಾಂಗ್ರೆಸ್ ಕೂಡ OROP ಜಾರಿಗೆ ತಂದಿದೆ, ಆದರೆ ಅದರ ಅರ್ಥ- Only Rahul Only Priyanka' ಎಂದು ಅಮಿತ್ ಶಾ ಬಣ್ಣಿಸಿದರು.
ಹಮೀರ್ಪುರ ಸಂಸದೀಯ ಕ್ಷೇತ್ರದ 40,000 ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ಈ ಕ್ಷೇತ್ರವನ್ನು ಬಿಜೆಪಿ ಸಂಸದ ಅನುರಾಗ್ ಠಾಕೂರ್ (ಮಾಜಿ ಮುಖ್ಯಮಂತ್ರಿ ಪಿ.ಕೆ ಧುಮಾಲ್ ಅವರ ಪುತ್ರ) ಪ್ರತಿನಿಧಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಸಶಸ್ತ್ರ ಪಡೆಗಳಿಗೆ ಹಿಮಾಚಲ ಪ್ರದೇಶದ ಕೊಡುಗೆಯನ್ನು ಶ್ಲಾಘಿಸಿದರು. ಮೊದಲ ಪರಮವೀರ ಚಕ್ರ ಪುರಸ್ಕಾರ ಈ ರಾಜ್ಯಕ್ಕೆ ಸಂದಿದೆ; ಅಲ್ಲದೆ ಈ ರಾಜ್ಯದಿಂದ ಹಲವು ಯೋಧರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಯೋಧರ ಸಂಕಷ್ಟವನ್ನು ಮೋದಿ ಸರಕಾರ ಮನಗಂಡಿದೆ. ಹೀಗಾಗಿಯೇ ಒಂದೇ ಶ್ರೇಣಿ- ಒಂದೇ ಪಿಂಚಣಿ (ಓಆರ್ಓಪಿ- ಒನ್ ರ್ಯಾಂಕ್ ಒನ್ ಪೆನ್ಷನ್) ಪದ್ಧತಿ ಜಾರಿಗೆ ತಂದಿದೆ. ಕಾಂಗ್ರೆಸ್ ಕೂಡ OROP ಜಾರಿಗೆ ತಂದಿದೆ, ಆದರೆ ಅದರ ಅರ್ಥ- Only Rahul Only Priyanka' ಎಂದು ಅಮಿತ್ ಶಾ ಬಣ್ಣಿಸಿದರು.
ಹಮೀರ್ಪುರ ಸಂಸದೀಯ ಕ್ಷೇತ್ರದ 40,000 ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ಈ ಕ್ಷೇತ್ರವನ್ನು ಬಿಜೆಪಿ ಸಂಸದ ಅನುರಾಗ್ ಠಾಕೂರ್ (ಮಾಜಿ ಮುಖ್ಯಮಂತ್ರಿ ಪಿ.ಕೆ ಧುಮಾಲ್ ಅವರ ಪುತ್ರ) ಪ್ರತಿನಿಧಿಸುತ್ತಿದ್ದಾರೆ.