ಆ್ಯಪ್ನಗರ

ಅಮೃತ್‌ ಯೋಜನೆಯಡಿ ದೇಶದ 1159 ಉದ್ಯಾನಗಳ ಅಭಿವೃದ್ಧಿ

ನಗರ ಪುನರುಜ್ಜೀವನ ಮತ್ತು ಪರಿವರ್ತನೆಗಾಗಿ ಅಟಲ್‌ ಮಿಷನ್‌(ಅಮೃತ್‌)ನಡಿ ಉದ್ಯಾನ ನಿರ್ಮಾಣದಿಂದ 4,288 ಎಕರೆ ಪ್ರದೇಶ ಹಸಿರು ಬನಸಿರಿಯಾಗಿ ಕಂಗೊಳಿಸುತ್ತಿದೆ ಎಂದು ಹೇಳಿರುವ ಇಲಾಖೆ, ಉದ್ಯಾನಗಳಲ್ಲಿ ಮಕ್ಕಳು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ ಎಂದಿದೆ.

PTI 26 Aug 2019, 5:00 am
ಹೊಸದಿಲ್ಲಿ: ಅಮೃತ್‌ ಯೋಜನೆಯಡಿ ದೇಶಾದ್ಯಂತ 1,159 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಭಾನುವಾರ ಪ್ರಕಟಿಸಿದೆ. ನಗರ ಪುನರುಜ್ಜೀವನ ಮತ್ತು ಪರಿವರ್ತನೆಗಾಗಿ ಅಟಲ್‌ ಮಿಷನ್‌(ಅಮೃತ್‌)ನಡಿ ಉದ್ಯಾನ ನಿರ್ಮಾಣದಿಂದ 4,288 ಎಕರೆ ಪ್ರದೇಶ ಹಸಿರು ಬನಸಿರಿಯಾಗಿ ಕಂಗೊಳಿಸುತ್ತಿದೆ ಎಂದು ಹೇಳಿರುವ ಇಲಾಖೆ, ಉದ್ಯಾನಗಳಲ್ಲಿ ಮಕ್ಕಳು ಮತ್ತು ದಿವ್ಯಾಂಗರಿಗೆ ಅನುಕೂಲವಾಗುವ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ 500 ನಗರಗಳಿಗೆ ಅಮೃತ್‌ ಯೋಜನೆಯನ್ನು ಪ್ರಕಟಿಸಿದ್ದು, ಇದು ದೇಶದ ನಗರಗಳ ಜನಸಂಖ್ಯೆಯ 60% ಭಾಗವನ್ನು ಆವರಿಸುತ್ತದೆ. ಈವರೆಗೆ 2,355 ಉದ್ಯಾನಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಆ ಪೈಕಿ 1,159 ಕಾಮಗಾರಿಗಳು ಪೂರ್ಣಗೊಂಡಿವೆ.
Vijaya Karnataka Web amrut

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ