ಆ್ಯಪ್ನಗರ

ಪಂಜಾಬ್‌ನಲ್ಲಿ ರೊಚ್ಚಿಗೊದ್ದ ರೈತರು: ಜಿಯೋ ಮೊಬೈಲ್‌ ಟವರ್‌ಗಳು ಧ್ವಂಸ

ಟವರ್‌ಗಳು ಮಾತ್ರವಲ್ಲದೇ, ಜಿಯೋ ಫೈಬರ್‌ ಕೇಬಲ್‌ಗಳನ್ನು ರೈತರು ಕತ್ತರಿಸುತ್ತಿದ್ದಾರೆ. ಟವರ್‌ ಬಳಿ ಇದ್ದ ಜನರೇಟರ್‌ ಅನ್ನು ರೈತರು ಕೊಂಡೊಯ್ದಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ರೈತರಿಗೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಮನವಿ ಮಾಡಿದ್ದಾರೆ.

Vijaya Karnataka Web 28 Dec 2020, 8:29 pm
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕಾನೂನುಗಳು ಉಳ್ಳವರಿಗೆ ಮಾತ್ರ ಲಾಭದಾಯಕ ಎಂದು ಕೆಲವರು ವದಂತಿ ಹಬ್ಬಿಸಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾ ನಿರತ ರೈತರು ಪಂಜಾಬ್‌ನಲ್ಲಿ 1500 ಕ್ಕೂ ಹೆಚ್ಚು ಟೆಲಿಕಾಂ ಟವರ್‌ಗಳನ್ನು ಹಾನಿ ಮಾಡಲಾಗಿದೆ.
Vijaya Karnataka Web ರೈತರ ಪ್ರತಿಭಟನೆ
ರೈತರ ಪ್ರತಿಭಟನೆ


ವದಂತಿ ಹಬ್ಬಿಸಿದ್ದರಿಂದ ಪಂಜಾಬ್‌ ರೈತ ಸಮುದಾಯ ಆಕ್ರೋಶಗೊಂಡು ಮುಖೇಶ್‌ ಅಂಬಾನಿ ಒಡೆತನದ ಜಿಯೋ ಮೊಬೈಲ್‌ ಟವರ್‌ಗಳನ್ನು ಹಾನಿಗೊಳಿಸಿದರು. ಕಳೆದ ಎರಡು ದಿನಗಳಿಂದ ನಿರಂತರವಾಗಿ ರೈತರು ಮೊಬೈಲ್‌ ಟವರ್‌ಗಳನ್ನು ಹಾನಿ ಮಾಡುತ್ತಿದ್ದಾರೆ.

ಟವರ್‌ ಇನ್‌ಫ್ರಾಸ್ಟ್ರಕ್ಚರ್ ಪ್ರೊವೈಡರ್‌ ಅಸೋಸಿಯೇಷನ್‌ ನೀಡಿದ ವರದಿಗಳ ಪ್ರಕಾರ 1600 ಟವರ್‌ಗಳಿಗೆ ಹಾನಿಯಾಗಿದೆ.

ಟವರ್‌ಗಳು ಮಾತ್ರವಲ್ಲದೇ, ಜಿಯೋ ಫೈಬರ್‌ ಕೇಬಲ್‌ಗಳನ್ನು ರೈತರು ಕತ್ತರಿಸುತ್ತಿದ್ದಾರೆ. ಟವರ್‌ ಬಳಿ ಇದ್ದ ಜನರೇಟರ್‌ ಅನ್ನು ರೈತರು ಕೊಂಡೊಯ್ದಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ರೈತರಿಗೆ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ