ಆ್ಯಪ್ನಗರ

ಕೊರೊನಾ ಅಪ್ಡೇಟ್ಸ್‌: ಒಂದೇ ದಿನ ದೇಶದಲ್ಲಿ 60,962 ಹೊಸ ಕೇಸ್‌, 23 ಲಕ್ಷ ತಲುಪಿದ ಸೋಂಕಿತರ ಸಂಖ್ಯೆ,!

ಮಂಗಳವಾರ ಒಂದೇ ದಿನ 834 ಮಂದಿಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ 46,091 ಮಂದಿ ದೇಶದಲ್ಲಿ ಕೊರೊನಾದಿಂದ ಮೃತಪಟ್ಟಂತೆ ಆಗಿದೆ. ಇನ್ನು ಮಂಗಳವಾರ ಒಂದೇ ದಿನ ಒಟ್ಟು 47,746 ಮಂದಿ ರೋಗಿಗಳು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ 16,39,599 ಮಂದಿ ಗುಣಮುಖರಾದಂತೆ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Agencies 12 Aug 2020, 3:12 pm
ಹೊಸದಿಲ್ಲಿ: ದೇಶದಲ್ಲಿ ದಿನ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಐವತ್ತು ಸಾವಿರದ ಗಡಿ ದಾಟುತ್ತಿದೆ. ಮಂಗಳವಾರ ಒಂದೇ ದಿನ ದೇಶದಲ್ಲಿ 60,962 ಹೊಸ ಕೊರೊನಾ ಕೇಸ್‌ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 23,29,638ರ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Vijaya Karnataka Web 18


ಅಲ್ಲದೆ ಮಂಗಳವಾರ ಒಂದೇ ದಿನ 834 ಮಂದಿಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ 46,091 ಮಂದಿ ದೇಶದಲ್ಲಿ ಕೊರೊನಾದಿಂದ ಮೃತಪಟ್ಟಂತೆ ಆಗಿದೆ. ಇನ್ನು ಮಂಗಳವಾರ ಒಂದೇ ದಿನ ಒಟ್ಟು 47,746 ಮಂದಿ ರೋಗಿಗಳು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ 16,39,599 ಮಂದಿ ಗುಣಮುಖರಾದಂತೆ ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸದ್ಯ 6,43,948 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಗುಣಮುಖ ದರ 69.80 ಮಂದಿ ಇದೆ. ಅಲ್ಲದೆ ದೇಶದಲ್ಲಿ ಸಾವಿನ ದರ 1.99 ರಷ್ಟಿದೆ ಎಂದು ತಿಳಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ದರ ಕಡಿಮೆ ಇದೆ. ಅಲ್ಲದೇ ದಿನ ನಿತ್ಯ ಭಾರೀ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆ ನಡೆಸುವುದರಿಂದ ಸಹಾಯವಾಗುತ್ತಿದೆ. ಸದ್ಯ ದೇಶದಲ್ಲಿ ದಿನ ನಿತ್ಯ ಆರು ಲಕ್ಷಕ್ಕೂ ಅಧಿಕ ಕೊರೊನಾ ಪರೀಕ್ಷೆಗಳು ನಡೆಯುತ್ತಿದೆ.

ಇಂದು ವಿಶ್ವ ಆನೆಗಳ ದಿನ: ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ, ಗಜ ನಮ್‌ ಥರಾನೆ!
ಇನ್ನು ವಿಶ್ವದಾದ್ಯಂತ ಕೊರೊನಾ ಸೋಂಕು ತಾಂಡವ ಆಡುತ್ತಿರುವ ಮಧ್ಯೆ ರಷ್ಯಾ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವ ಬಗ್ಗೆ ಘೋಷಿಸಿದೆ. ಆದರೆ ಈ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿರುವ ಮಧ್ಯೆಯೇ 20ಕ್ಕೂ ಹೆಚ್ಚು ದೇಶಗಳು ಲಸಿಕೆ ಖರೀದಿಸುವುದಾಗಿ ಹೇಳಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ