ಆ್ಯಪ್ನಗರ

ಬಿಗ್‌ ಬ್ರೇಕಿಂಗ್: ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣ, ಪಿ ಚಿದಂಬರಂ ಬಂಧನ

ಕೇಂದ್ರದ ಮಾಜಿ ಸಚಿವ ಚಿದಂಬರಂ ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಚಿದಂಬರಂಗೆ ನಿರೀಕ್ಷಣಾ ಜಾಮೀನು ಮಂಜೂರಾಗದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದರು. ಅದರಂತೆ ಈಗ ಸಿಬಿಐ ವಶದಲ್ಲಿದ್ದಾರೆ ಮಾಜಿ ಸಚಿವರು.

Vijaya Karnataka Web 21 Aug 2019, 10:48 pm
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ.
Vijaya Karnataka Web ಚಿದಂಬರಂ
ಚಿದಂಬರಂ


ಬುಧವಾರ ರಾತ್ರಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು.

ಪಿ ಚಿದಂಬರಂ ಅವರನ್ನು ಬಂಧಿಸಿದ ಕೂಡಲೇ ಅವರ ನಿವಾಸದಿಂದ ಸಿಬಿಐ ವಾಹನದ ಮೂಲಕವೇ ಸಿಬಿಐ ಮುಖ್ಯ ಕಚೇರಿಗೆ ಕರೆದೊಯ್ಯಲಾಯಿತು. ಸಿಬಿಐ ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ರಾತ್ರಿಯವರೆಗೂ ಹಾಜರಿದ್ದರು.


ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಚಿದಂಬರಂ ವಶಕ್ಕೆ ಪಡೆದಿರುವ ವಿಷಯದ ಕುರಿತು ಸಿಬಿಐ ಬುಧವಾರ ರಾತ್ರಿ ಪ್ರಕಟಣೆ ಹೊರಡಿಸಿದೆ. ಬಂಧನ ವಾರಂಟ್‌ ಇರಲಿಲ್ಲ ಎಂಬ ಆರೋಪವನ್ನು ನಿರಾಕರಿಸಿದೆ.

ಬುಧವಾರ ರಾತ್ರಿ ದಿಢೀರ್ ಆಗಿ ಕಾಂಗ್ರೆಸ್‌ ಕಚೇರಿಗೆ ಬಂದ ಚಿದಂಬರಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿದಂಬರಂ ಸುದ್ದಿಗೋಷ್ಠಿ ನಡೆಸುತ್ತಿರುವುದು ಗೊತ್ತಾಗುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಆಗಮಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಸಿಬಿಐ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಕಚೇರಿ ದ್ವಾರವನ್ನು ಮುಚ್ಚಿ ಅಧಿಕಾರಿಗಳು ಒಳಗೆ ಹೋಗದಂತೆ ತಡೆದರು.

ಕಾಂಪೌಂಡ್‌ ಹಾರಿ, ಮನೆ ಸುತ್ತುವರಿದು, 55 ನಿಮಿಷದ ಸಿನಿಮೀಯ ಕಾರ್ಯಾಚರಣೆ ನಂತರ ಚಿದಂಬರಂ ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು

ಆಗ ಕೂಡಲೇ ಚಿದಂಬರಂ ತಮ್ಮ ನಿವಾಸಕ್ಕೆ ತೆರಳಿದರು. ಆಗ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೂರು ತಂಡಗಳಾಗಿ ಚಿದಂಬರಂ ನಿವಾಸವನ್ನು ಸುತ್ತುವರಿದರು.


ಚಿದಂಬರಂ ನಿವಾಸದ ಕೌಂಪೌಂಡ್‌ ಹಾರಿದ ಸಿಬಿಐ ಅಧಿಕಾರಿಗಳು ನಿವಾಸದೊಳಗೆ ನುಗ್ಗಿದರು. 20ಕ್ಕೂ ಹೆಚ್ಚು ಅಧಿಕಾರಿಗಳು ಚಿದಂಬರಂ ನಿವಾಸದ ಮುಂದಿನ ಹಾಗೂ ಹಿಂದಿನ ಗೇಟ್‌ ಮೂಲಕ ಮನೆಯನ್ನು ಸುತ್ತುವರಿದರು. 55 ನಿಮಿಷದ ಕಾರ್ಯಾಚರಣೆ ನಂತರ ಚಿದಂಬರಂ ಅವರನ್ನು ವಶಕ್ಕೆ ಪಡೆದು ಕರೆದೊಯ್ಯಲಾಯಿತು.

ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣ: ಚಿದಂಬರಂ ನಿರೀಕ್ಷಣಾ ಜಾಮೀಜು ಅರ್ಜಿ ವಿಚಾರಣೆ ಶುಕ್ರವಾರ


ಈ ನಡುವೆ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆದ ಕೂಡಲೇ ಪ್ರತಿಕ್ರಿಯೆ ನೀಡಿದ ಪುತ್ರ ಕಾರ್ತಿ ಚಿದಂಬರಂ, ಇದು ರಾಜಕೀಯ ದ್ವೇಷದ ಕ್ರಮ. ಕೆಲವೇ ಕೆಲವರನ್ನು ಮೆಚ್ಚಿಸಲು ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ