ಆ್ಯಪ್ನಗರ

ಪದ್ಮಾವತಿ ವಿವಾದ: ವಿಚಾರಣೆ ಎದುರಿಸಿದ ಬನ್ಸಾಲಿ

ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರು ಗುರುವಾರ ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸದೀಯ ಸಮಿತಿಯ ಮುಂದೆ ಹಾಜರಾದರು...

Vijaya Karnataka Web 30 Nov 2017, 10:52 pm

ಹೊಸದಿಲ್ಲಿ: ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರು ಗುರುವಾರ ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸದೀಯ ಸಮಿತಿಯ ಮುಂದೆ ಹಾಜರಾದರು.

Vijaya Karnataka Web padmavati row bhansali appears before parliament panel
ಪದ್ಮಾವತಿ ವಿವಾದ: ವಿಚಾರಣೆ ಎದುರಿಸಿದ ಬನ್ಸಾಲಿ


ಈ ವೇಳೆ ಬನ್ಸಾಲಿ ಅವರ ಮೇಲೆ ಪ್ರಶ್ನೆಗಳ ಸುರಿಮಳೆಗರೆದ ಸಮಿತಿ ಸದಸ್ಯರು, ಆಯ್ದ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರ ಉದ್ದೇಶ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.

''ನವೆಂಬರ್‌ 11ರಂದು 'ಸಿಬಿಎಫ್‌ಸಿ'ಗೆ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನೀವು, ಡಿ.1ರಂದೇ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಗೆ ಭಾವಿಸಿದಿರಿ? ಸಿನಿಮಾಟೋಗ್ರಫಿ ಕಾಯಿದೆ ಪ್ರಕಾರ, ಚಿತ್ರಕ್ಕೆ ಪ್ರಮಾಣಪತ್ರ ನೀಡಲು 'ಸಿಬಿಎಫ್‌ಸಿ' 68 ದಿನ ತೆಗೆದುಕೊಳ್ಳಬಹುದೆಂಬ ವಿಚಾರ ನಿಮಗೆ ಗೊತ್ತಿಲ್ಲವೇ?'' ಎಂದು ಸಮಿತಿ ಸದಸ್ಯರು ಪ್ರಶ್ನೆ ಮಾಡಿದರು.

''ಆಯ್ದ ಮಾಧ್ಯಮಗಳಿಗೆ ಮಾತ್ರ ಚಿತ್ರದ ವಿಶೇಷ ಪ್ರದರ್ಶನ ನ್ಯಾಯೋಚಿತ ಮತ್ತು ನೈತಿಕ ನಡೆಯೇ? ಸೆನ್ಸಾರ್‌ ಮಂಡಳಿಯ (ಸಿಬಿಎಫ್‌ಸಿ) ಮೇಲೆ ಪ್ರಭಾವ ಬೀರಲೆಂದೇ ಹೀಗೆ ಮಾಡಿದಿರಾ? ಚಿತ್ರಗಳ ಪ್ರಚಾರ ಹೆಚ್ಚಿಸಲು ವಿವಾದ ಸೃಷ್ಟಿಸುವುದು ಹೊಸ ಪ್ರವೃತ್ತಿಯೇನು?...ಮುಂತಾದ ನೇರ ಪ್ರಶ್ನೆಗಳನ್ನು ಬನ್ಸಾಲಿ ಅವರ ಮುಂದೆ ಒಡ್ಡಲಾಯಿತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿವಿಧ ಸಮಸ್ಯೆಗಳ ವಿಚಾರಣೆ ಅಧಿಕಾರ ಹೊಂದಿರುವ ಈ ಸಮಿತಿಗೆ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅಧ್ಯಕ್ಷರಾಗಿದ್ದು, ಬಿಜೆಪಿ ಹಿರಿಯ ಮುಖಂಡ ಎಲ್‌ ಕೆ ಆಡ್ವಾಣಿ, ನಟ ಹಾಗೂ ಕಾಂಗ್ರೆಸ್‌ ಮುಖಂಡ ರಾಜ್‌ ಬಾಬ್ಬರ್‌ ಇದರ ಸದಸ್ಯರಾಗಿದ್ದಾರೆ.

ಪದ್ಮಾವತಿ ಚಿತ್ರ ವಿವಾದದ ಹಿನ್ನೆಲೆಯಲ್ಲಿ, ಸಮಿತಿಯು ನಿರ್ದೇಶಕ ಬನ್ಸಾಲಿ ಅವರನ್ನು ಕರೆಸಿ, ಪ್ರಶ್ನೆ ಮಾಡಿದೆ.

ಜೋಶಿ ಸ್ಪಷ್ಟನೆ: ಇದಕ್ಕೂ ಮೊದಲು ಸಮಿತಿಯ ವಿಚಾರಣೆ ಎದುರಿಸಿದ ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿ ಮುಖ್ಯಸ್ಥ ಪ್ರಸೂನ್‌ ಜೋಶಿ, ಈ ವಿವಾದಗ್ರಸ್ತ ಚಿತ್ರದ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈತನ ತಾವು ಆ ಚಿತ್ರವನ್ನು ನೋಡಿಲ್ಲ. ಅದಕ್ಕೆ ಮಂಡಳಿ ಅನುಮತಿಯೂ ನೀಡಿಲ್ಲ ಎಂದು ಜೋಶಿ ಉತ್ತರಿಸಿರುವುದಾಗಿ ವರದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ