ಆ್ಯಪ್ನಗರ

ಕರ್ತಾರ್‌ಪುರ ಗಡಿಯಲ್ಲಿ ವಲಸೆ ಕೇಂದ್ರ ತೆರೆಯಲು ಪಾಕ್‌ ಸರ್ಕಾರ ನಿರ್ಧಾರ

ಗುರುದ್ವಾರದಲ್ಲಿ ಗುರುನಾನಕ್‌ ಅವರ ಸಮಾಧಿ ಇದೆ ಎಂದು ಭಾವಿಸಲಾಗಿದೆ. ಕಾರಿಡಾರ್‌ನಿಂದಾಗಿ ಉಗ್ರರು ಸುಲಭವಾಗಿ ದೇಶ ಪ್ರವೇಶಿಸಲು ಅನುಕೂಲವಾಗಲಿದೆ ಎಂಬ ಆತಂಕ ಎರಡೂ ದೇಶಗಳಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಲಸೆ ಕೇಂದ್ರ ತೆರೆಯಲು ಪಾಕ್‌ ಮುಂದಾಗಿದೆ.

Vijaya Karnataka Web 4 Dec 2018, 9:19 am
ಲಾಹೋರ್‌: ಕರ್ತಾರಪುರ ಗಡಿಯಲ್ಲಿ ವಲಸೆ ಕೇಂದ್ರ ತೆರೆಯಲು ಪಾಕಿಸ್ತಾನ ಮುಂದಾಗಿದೆ. ಭಾರತದ ಪಂಜಾಬ್‌ನಲ್ಲಿರುವ ಗುರುದಾಸ್‌ಪುರದಿಂದ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಡೇರಾ ಬಾಬಾ ನಾನಕ್‌ ಗುರುದ್ವಾರದವರೆಗೆ ಕಾರಿಡಾರ್‌ ನಿರ್ಮಿಸಲು ಉಭಯ ದೇಶಗಳೂ ಮುಂದಾಗಿವೆ.
Vijaya Karnataka Web pakistan_open kartarpur


ಈ ಗುರುದ್ವಾರದಲ್ಲಿ ಗುರುನಾನಕ್‌ ಅವರ ಸಮಾಧಿ ಇದೆ ಎಂದು ಭಾವಿಸಲಾಗಿದೆ. ಕಾರಿಡಾರ್‌ನಿಂದಾಗಿ ಉಗ್ರರು ಸುಲಭವಾಗಿ ದೇಶ ಪ್ರವೇಶಿಸಲು ಅನುಕೂಲವಾಗಲಿದೆ ಎಂಬ ಆತಂಕ ಎರಡೂ ದೇಶಗಳಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಲಸೆ ಕೇಂದ್ರ ತೆರೆಯಲು ಪಾಕ್‌ ಮುಂದಾಗಿದೆ.

ಫೆಡರಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (ಎಫ್‌ಐಎ)ಯು ವಲಸೆ ಕೇಂದ್ರವನ್ನು ನಿರ್ವಹಿಸಲಿದೆ. ಎಫ್‌ಐಎ ಅಧಿಕಾರಿಗಳೇ ಸಿಖ್‌ ಯಾತ್ರಾರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕ್‌ ಪ್ರದೇಶದಲ್ಲಿ ಕಾರಿಡಾರ್‌ ಆರಂಭವಾಗುವ ನರೋವಾಲ್‌ನಲ್ಲಿ ವಲಸೆ ಕೇಂದ್ರ ತಲೆ ಎತ್ತಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ