ಲಾಹೋರ್: ಬಾಲಾಕೋಟ್ ವಾಯುದಾಳಿ ಬಳಿಕ ಭಾರತಕ್ಕೆ ವಿಧಿಸಲಾಗಿದ್ದ ವಾಯುಪ್ರದೇಶ ನಿರ್ಬಂಧವನ್ನು ಶೀಘ್ರವೇ ತೆರವುಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.
ಫೆ.27ರ ನಂತರ ಹೇರಿದ್ದ ವಾಯುಪ್ರದೇಶ ತಾತ್ಕಾಲಿಕ ನಿರ್ಬಂಧವನ್ನು ಎಲ್ಲ ವಾಯುಮಾರ್ಗಗಳಲ್ಲಿಯೂ ತೆರವುಗೊಳಿಸುತ್ತಿರುವುದಾಗಿ ಶುಕ್ರವಾರ ಭಾರತೀಯ ವಾಯುಪಡೆ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
''ಟ್ವಿಟರ್ನಲ್ಲಿ ಮಾತ್ರ ಭಾರತದ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಅಧಿಕೃತವಾಗಿ ನಮ್ಮೊಂದಿಗೆ ಸಂವಹನ ನಡೆದಿಲ್ಲ. ನಮ್ಮ ವಿಮಾನ ಸಂಚಾರಕ್ಕೆ ಭಾರತ ವಾಯುಪ್ರದೇಶವನ್ನು ಮುಕ್ತಗೊಳಿಸಿದರೆ, ನಾವು ಕೂಡ ಅದೇ ದಾರಿ ಅನುಸರಿಸುತ್ತೇವೆ,'' ಎಂದು ಪಾಕ್ ಅಧಿಕಾರಿ ಹೇಳಿದ್ದಾರೆ.
ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಬಾಲಾಕೋಟ್ನಲ್ಲಿ ವಾಯುದಾಳಿ ನಡೆಸಿದ ನಂತರ ಆತಂಕಗೊಂಡ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಎಲ್ಲ ದೇಶಗಳಿಗೂ ನಿರ್ಬಂಧಿಸಿತ್ತು. ಮಾ. 27ರಂದು ಹೊಸದಿಲ್ಲಿ, ಬ್ಯಾಂಕಾಕ್ ಮತ್ತು ಕೌಲಾಲಂಪುರ ಮಾರ್ಗದ ಅಥವಾ ಅಲ್ಲಿಗೆ ತಲುಪುವ ವಿಮಾನಗಳನ್ನು ಹೊರತಾಗಿ ಬಾಕಿ ವಿಮಾನಗಳಿಗೆ ವಾಯುಪ್ರದೇಶವನ್ನು ಮುಕ್ತಗೊಳಿಸಿತ್ತು. ಆದರೆ, ಭಾರತದ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶದ ನಿರ್ಬಂಧವನ್ನು ಜೂನ್ 15ರವರೆಗೆ ವಿಸ್ತರಿಸಿತ್ತು.
ಫೆ.27ರ ನಂತರ ಹೇರಿದ್ದ ವಾಯುಪ್ರದೇಶ ತಾತ್ಕಾಲಿಕ ನಿರ್ಬಂಧವನ್ನು ಎಲ್ಲ ವಾಯುಮಾರ್ಗಗಳಲ್ಲಿಯೂ ತೆರವುಗೊಳಿಸುತ್ತಿರುವುದಾಗಿ ಶುಕ್ರವಾರ ಭಾರತೀಯ ವಾಯುಪಡೆ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
''ಟ್ವಿಟರ್ನಲ್ಲಿ ಮಾತ್ರ ಭಾರತದ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಅಧಿಕೃತವಾಗಿ ನಮ್ಮೊಂದಿಗೆ ಸಂವಹನ ನಡೆದಿಲ್ಲ. ನಮ್ಮ ವಿಮಾನ ಸಂಚಾರಕ್ಕೆ ಭಾರತ ವಾಯುಪ್ರದೇಶವನ್ನು ಮುಕ್ತಗೊಳಿಸಿದರೆ, ನಾವು ಕೂಡ ಅದೇ ದಾರಿ ಅನುಸರಿಸುತ್ತೇವೆ,'' ಎಂದು ಪಾಕ್ ಅಧಿಕಾರಿ ಹೇಳಿದ್ದಾರೆ.
ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಬಾಲಾಕೋಟ್ನಲ್ಲಿ ವಾಯುದಾಳಿ ನಡೆಸಿದ ನಂತರ ಆತಂಕಗೊಂಡ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಎಲ್ಲ ದೇಶಗಳಿಗೂ ನಿರ್ಬಂಧಿಸಿತ್ತು. ಮಾ. 27ರಂದು ಹೊಸದಿಲ್ಲಿ, ಬ್ಯಾಂಕಾಕ್ ಮತ್ತು ಕೌಲಾಲಂಪುರ ಮಾರ್ಗದ ಅಥವಾ ಅಲ್ಲಿಗೆ ತಲುಪುವ ವಿಮಾನಗಳನ್ನು ಹೊರತಾಗಿ ಬಾಕಿ ವಿಮಾನಗಳಿಗೆ ವಾಯುಪ್ರದೇಶವನ್ನು ಮುಕ್ತಗೊಳಿಸಿತ್ತು. ಆದರೆ, ಭಾರತದ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶದ ನಿರ್ಬಂಧವನ್ನು ಜೂನ್ 15ರವರೆಗೆ ವಿಸ್ತರಿಸಿತ್ತು.