ಆ್ಯಪ್ನಗರ

ವಾಯುಪ್ರದೇಶ ನಿರ್ಬಂಧ ತೆಗೆಯಲಿದೆ ಪಾಕ್‌ ?

''ಟ್ವಿಟರ್‌ನಲ್ಲಿ ಮಾತ್ರ ಭಾರತದ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಅಧಿಕೃತವಾಗಿ ನಮ್ಮೊಂದಿಗೆ ಸಂವಹನ ನಡೆದಿಲ್ಲ. ನಮ್ಮ ವಿಮಾನ ಸಂಚಾರಕ್ಕೆ ಭಾರತ ವಾಯುಪ್ರದೇಶವನ್ನು ಮುಕ್ತಗೊಳಿಸಿದರೆ, ನಾವು ಕೂಡ ಅದೇ ದಾರಿ ಅನುಸರಿಸುತ್ತೇವೆ,'' ಎಂದು ಪಾಕ್‌ ಅಧಿಕಾರಿ ಹೇಳಿದ್ದಾರೆ.

PTI 2 Jun 2019, 5:00 am
ಲಾಹೋರ್‌: ಬಾಲಾಕೋಟ್‌ ವಾಯುದಾಳಿ ಬಳಿಕ ಭಾರತಕ್ಕೆ ವಿಧಿಸಲಾಗಿದ್ದ ವಾಯುಪ್ರದೇಶ ನಿರ್ಬಂಧವನ್ನು ಶೀಘ್ರವೇ ತೆರವುಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.
Vijaya Karnataka Web pak likely to remove restriction on air space usage
ವಾಯುಪ್ರದೇಶ ನಿರ್ಬಂಧ ತೆಗೆಯಲಿದೆ ಪಾಕ್‌ ?

ಫೆ.27ರ ನಂತರ ಹೇರಿದ್ದ ವಾಯುಪ್ರದೇಶ ತಾತ್ಕಾಲಿಕ ನಿರ್ಬಂಧವನ್ನು ಎಲ್ಲ ವಾಯುಮಾರ್ಗಗಳಲ್ಲಿಯೂ ತೆರವುಗೊಳಿಸುತ್ತಿರುವುದಾಗಿ ಶುಕ್ರವಾರ ಭಾರತೀಯ ವಾಯುಪಡೆ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.

''ಟ್ವಿಟರ್‌ನಲ್ಲಿ ಮಾತ್ರ ಭಾರತದ ನಿರ್ಧಾರ ನಮ್ಮ ಗಮನಕ್ಕೆ ಬಂದಿದೆ. ಅಧಿಕೃತವಾಗಿ ನಮ್ಮೊಂದಿಗೆ ಸಂವಹನ ನಡೆದಿಲ್ಲ. ನಮ್ಮ ವಿಮಾನ ಸಂಚಾರಕ್ಕೆ ಭಾರತ ವಾಯುಪ್ರದೇಶವನ್ನು ಮುಕ್ತಗೊಳಿಸಿದರೆ, ನಾವು ಕೂಡ ಅದೇ ದಾರಿ ಅನುಸರಿಸುತ್ತೇವೆ,'' ಎಂದು ಪಾಕ್‌ ಅಧಿಕಾರಿ ಹೇಳಿದ್ದಾರೆ.

ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿದ ನಂತರ ಆತಂಕಗೊಂಡ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಎಲ್ಲ ದೇಶಗಳಿಗೂ ನಿರ್ಬಂಧಿಸಿತ್ತು. ಮಾ. 27ರಂದು ಹೊಸದಿಲ್ಲಿ, ಬ್ಯಾಂಕಾಕ್‌ ಮತ್ತು ಕೌಲಾಲಂಪುರ ಮಾರ್ಗದ ಅಥವಾ ಅಲ್ಲಿಗೆ ತಲುಪುವ ವಿಮಾನಗಳನ್ನು ಹೊರತಾಗಿ ಬಾಕಿ ವಿಮಾನಗಳಿಗೆ ವಾಯುಪ್ರದೇಶವನ್ನು ಮುಕ್ತಗೊಳಿಸಿತ್ತು. ಆದರೆ, ಭಾರತದ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶದ ನಿರ್ಬಂಧವನ್ನು ಜೂನ್‌ 15ರವರೆಗೆ ವಿಸ್ತರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ