ಆ್ಯಪ್ನಗರ

ನಮ್ಮ ಯೋಧರನ್ನು ಹತ್ಯೆಗೈದವರು ಸ್ವಾತಂತ್ರ್ಯ ಸೇನಾನಿಗಳಂತೆ!

ಜೆಮ್‌ ಉಗ್ರ ಸಂಘಟನೆಯ ನಡೆಸಿದ ದಾಳಿಯಲ್ಲಿ ಆತ್ಮಾಹುತಿ ಬಾಂಬರ್‌ನನ್ನು ಸ್ವಾತಂತ್ರ್ಯ ಸೇನಾನಿಗಳು ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿದೆ. ಕಾಶ್ಮೀರವನ್ನು ಇಂಡಿಯಾ ಅಕ್ಯುಪೈಡ್‌ ಕಾಶ್ಮೀರ್‌(ಐಒಕೆ) ಎಂದೂ ಕರೆದಿದ್ದು, ಸ್ವಾತಂತ್ರ್ಯ ಸೇನಾನಿಗಳಿಂದ ಐಒಕೆ ಮೇಲೆ ನಡೆದ ದಾಳಿ ಎಂದು ಬಣ್ಣಿಸಿದೆ.

Times Now 16 Feb 2019, 5:00 pm
[This story originally published in Times of India on Feb 16,2019]
Vijaya Karnataka Web pulwama


ಹೊಸದಿಲ್ಲಿ: ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್‌ ಸೈನಿಕರನ್ನು ಕೊಂದವರು ಸ್ವಾತಂತ್ರ್ಯ ಸೇನಾನಿಗಳಂತೆ!

350 ಕಿ.ಗ್ರಾಂನಷ್ಟು ಸ್ಫೋಟಕಗಳನ್ನು ಹೊತ್ತ ಎಸ್‌ಯುವಿ ಕಾರು, ಸೈನಿಕರನ್ನು ಒಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ನಡೆಸಿದ ದಾಳಿಯನ್ನು ಪಾಕ್‌ನ ಮಾಧ್ಯಮವೊಂದು ಈರೀತಿ ಬಣ್ಣಿಸಿದೆ.

ಜೆಮ್‌ ಉಗ್ರ ಸಂಘಟನೆಯ ನಡೆಸಿದ ದಾಳಿಯಲ್ಲಿ ಆತ್ಮಾಹುತಿ ಬಾಂಬರ್‌ನನ್ನು ಸ್ವಾತಂತ್ರ್ಯ ಸೇನಾನಿಗಳು ಎಂದು ವರದಿ ಮಾಡಿರುವ ಪಾಕ್‌ ಮಾಧ್ಯಮ ಅಟ್ಟಹಾಸ ಮೆರೆದಿದೆ.

ದಿ ನೇಷನ್‌ ಎಂಬ ಪಾಕ್‌ನ ದಿನ ಪತ್ರಿಕೆ ಪುಲ್ವಾಮಾ ದಾಳಿಯ ಕುರಿತು ವರದಿ ಮಾಡಿದ್ದು, ಭಾರತ ಆಕ್ರಮಿತ ಕಾಶ್ಮೀರ(ಐಒಕೆ)ದಲ್ಲಿ ಸ್ವಾತಂತ್ರ್ಯ ಸೇನಾನಿಗಳಿಂದ ದಾಳಿ: 40 ಆಕ್ರಮಿತ ಸೇನಾ ಮಂದಿ ಹತರಾಗಿದ್ದಾರೆ ಎಂದು ವರದಿ ಮಾಡಿದೆ. ಇದರೊಂದಿಗೆ ಜೆಮ್‌ ಸಂಘಟನೆಯ ವಕ್ತಾರನ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ. ಪಾಕ್‌ನ ದಿ ಎಕ್ಸ್‌ಪ್ರೆಸ್‌ ಟ್ರಿಬ್ಯುನ್‌ ಹಾಗೂ ಡೈಲಿ ಟೈಮ್ಸ್‌ ಪತ್ರಿಕೆಗಳೂ ಸತ್ಯಾಂಶವನ್ನು ಮರೆಮಾಚುವ ಯತ್ನ ನಡೆಸಿವೆ.

ವಿಶ್ವದ ಅನೇಕ ರಾಷ್ಟ್ರಗಳು ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿ, ಪಾಕ್‌ ವಿರುದ್ಧ ಧ್ವನಿ ಎತ್ತಿದ ಬಳಿಕವೂ ಪಾಕಿಸ್ತಾನದ ನಡೆತೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾಗಿದ್ದು, ಆತ್ಮಾಹುತಿ ದಾಳಿ ಮಾಡಿದ ಅದಿಲ್‌ ಅಹ್ಮದ್‌ ದಾರ್‌ನನ್ನು ಉಗ್ರರ ಪಟ್ಟಿಗೂ ಸೇರಿಸಿಲ್ಲ. ಜೆಮ್‌ ಸಂಘಟನೆ ಕೃತ್ಯದ ಜವಾಬ್ದಾರಿ ಹೊತ್ತ ಬಳಿಕವೂ, ಪಾಕ್‌ನ ಕೆಲ ಮಾಧ್ಯಮಗಳು ಈ ಕೃತ್ಯವನ್ನು ಖಂಡಿಸುವ ಕೆಲಸ ಮಾಡಿಲ್ಲ.

ಜೆಮ್‌ ಉಗ್ರ ಸಂಘಟನೆಗೆ ಸೇರಿದ್ದ ಅದಿಲ್‌ ಅಹ್ಮದ್‌ ಎಂಬ ಸ್ಥಳೀಯ ಯುವಕ, ಸ್ಫೋಟಕ ತುಂಬಿದ್ದ ಮಹೀಂದ್ರ ಸ್ಕಾರ್ಪಿಯೋ ವಾಹನವನ್ನು ಸಿಆರ್‌ಪಿಎಫ್‌ ಸೈನಿಕರನ್ನು ಹೊತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಸಿದ್ದಾನೆ. ಒಟ್ಟಾರೆ 78 ವಾಹನಗಳಲ್ಲಿ 2500 ಸೈನಿಕರನ್ನು ಶ್ರೀನರ-ಜಮ್ಮು ಹೆದ್ದಾರಿಯಲ್ಲಿ ಒಯ್ಯಲಾಗುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ