ಆ್ಯಪ್ನಗರ

ಕೊನೆಗೂ ಹಫೀಜ್‌ನನ್ನು ಪಾತಕಿ ಎಂದ ಪಾಕ್‌ ಉಗ್ರ ನಿಗ್ರಹ ದಳ

ಜಾಗತಿಕ ಉಗ್ರ ಹಫೀಜ್‌ ಸಯೀದ್‌ನನ್ನು ಬಿಗಿ ಭದ್ರತೆಯಲ್ಲಿ ಬುಧವಾರ ಲಾಹೋರ್‌ ಸಮೀಪದ ಗುರ್ಜನ್‌ವಾಲಾದಲ್ಲಿರುವ ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಮೀಸಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

PTI 8 Aug 2019, 5:00 am
ಲಾಹೋರ್‌: 2008ರ ಮುಂಬಯಿ ದಾಳಿಯ ಪ್ರಧಾನ ಸಂಚುಕೋರ ಹಾಗೂ ಜಮಾತೆ ಉದ್‌ ದಾವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಉಗ್ರ ಕೃತ್ಯಗಳಿಗೆ ಹಣಕಾಸಿನ ನೆರವು ನೀಡಿದ ಪಾತಕಿ ಎಂದು ಪಾಕಿಸ್ತಾನದ ಉಗ್ರ ನಿಗ್ರಹ ದಳ ಘೋಷಿಸಿದೆ.
Vijaya Karnataka Web hafeez


ಜಾಗತಿಕ ಉಗ್ರ ಹಫೀಜ್‌ ಸಯೀದ್‌ನನ್ನು ಬಿಗಿ ಭದ್ರತೆಯಲ್ಲಿ ಬುಧವಾರ ಲಾಹೋರ್‌ ಸಮೀಪದ ಗುರ್ಜನ್‌ವಾಲಾದಲ್ಲಿರುವ ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಮೀಸಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಉಗ್ರರಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಉಗ್ರ ನಿಗ್ರಹ ದಳವು (ಎಟಿಸಿ) ಹಫೀಜ್‌ನನ್ನು ಪಾತಕಿ ಎಂದು ಘೋಷಿಸಿ ಇದನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ದೋಷಾರೋಪಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.

ಉಗ್ರರಿಗೆ ಆರ್ಥಿಕ ನೆರವು ನೀಡಿದ 23 ಪ್ರಕರಣಗಳು ಈತನ ಮೇಲಿವೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮಾಂಡಿ ಬಹುದ್ದೀನ್‌ ಜಿಲ್ಲೆಯ ಪ್ರಕರಣವನ್ನು ಹೆಚ್ಚಿನ ವಿಚಾರಣೆಗೆ ಪಾಕ್‌ನ ಗುಜರಾತ್‌ ಎಟಿಸಿಗೆ ವರ್ಗಾಯಿಸಬೇಕು ಎಂದು ಪ್ರಾಸಿಕ್ಯೂಷನ್‌ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಪರಿಗಣಿಸಿದೆ.

ಜುಲೈ 17ರಂದು ಪಾಕ್‌ ಉಗ್ರ ನಿಗ್ರಹ ದಳವು ಹಫೀಜ್‌ ಸಯೀದ್‌ನನ್ನು ಬಂಧಿಸಿದ್ದು, ಲಾಹೋರ್‌ನ ಕೋಟ್‌ ಲಾಕಪತ್‌ ಕಾರಾಗೃಹದಲ್ಲಿ ಇರಿಸಲಾಗಿದೆ. ಈತನ ವಿರುದ್ಧ 23 ಎಫ್‌ಐಆರ್‌ಗಳು ದಾಖಲಾಗಿವೆ. ಪುಲ್ವಾಮಾ ದಾಳಿ ಬಳಿಕ ಭಾರತದ ಪ್ರಯತ್ನಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡ ಎದುರಿಸಿದ ಪ್ರಧಾನಿ ಇಮ್ರಾನ್‌ ಖಾನ್‌ ಸರಕಾರ, ಹಫೀಜ್‌ ಸಯೀದ್‌ಗೆ ಸೇರಿದ ಜಮಾತೆ ಉದ್‌ ದಾವಾ ಹಾಗೂಅದರ ದತ್ತಿ ಸಂಸ್ಥೆ 'ಫಲಾ-ಇ-ಇನ್ಸಾನಿಯಾತ್‌ಫೌಂಡೇಷನ್‌(ಎಫ್‌ಐಎಫ್‌) ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಅಲ್ಲದೇ ಲಾಹೋರ್‌ನಲ್ಲಿರುವ ಜಮಾತೆ ಉದ್‌ ದಾವಾ ಕೇಂದ್ರ ಕಚೇರಿ ಪ್ರವೇಶಿಸದಂತೆ ನಿರ್ಬಂಧ ಹೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ