ಆ್ಯಪ್ನಗರ

ಪಾಕ್ ಉಗ್ರರ ಬಳಿ 'ಚೀನಾ ಟೆಕ್ನಾಲಜಿ' ಉಕ್ಕಿನ ಬುಲೆಟ್..! ಭಾರತದ ಬುಲೆಟ್‌ ನಿರೋಧಕ ವಾಹನವನ್ನೂ ಭೇದಿಸುತ್ತೆ..!

2017ರಲ್ಲಿ ಲೇಥಪೊರಾದ ಸಿಆರ್‌ಪಿಎಫ್‌ ನೆಲೆ ಮೇಲೆ ಜೈಷ್‌ ಉಗ್ರರು ನಡೆಸಿದ ದಾಳಿಯಲ್ಲಿ ಮೊದಲ ಬಾರಿಗೆ ಸ್ಟೀಲ್‌ ಬುಲೆಟ್‌ಗಳು ಪತ್ತೆಯಾಗಿದ್ದವು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವ ಸ್ಟೀಲ್‌ ಕೋರ್‌ ಬುಲೆಟ್‌ಗಳು ಬಂಕರ್‌ಗಳನ್ನು ಕೂಡ ಭೇದಿಸಬಲ್ಲವು.

Vijaya Karnataka 2 Feb 2020, 7:51 pm
ಜಮ್ಮು-ಕಾಶ್ಮೀರ: ಕಳೆದ ವರ್ಷ ಸೇನಾ ವಾಹನಗಳನ್ನು ಗುರಿಯಾಗಿಸಿ ನಡೆದ ಪುಲ್ವಾಮ ದಾಳಿಯ ರೂವಾರಿ, ಆತ್ಮಹತ್ಯಾ ದಾಳಿಕೋರ ಆದಿಲ್‌ ದರ್‌ ಸಹೋದರ ಸಮೀರ್‌ ದರ್‌ ಪೊಲೀಸರ ವಿಚಾರಣೆ ವೇಳೆ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ಉಗ್ರರ ತಂಡವೊಂದನ್ನು ಕಾಶ್ಮೀರ ಕಣಿವೆಗೆ ಅಕ್ರಮವಾಗಿ ನುಸುಳಿಸಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಕರೀಮಾಬಾದ್‌ಗೆ ಅವರನ್ನು ತಲುಪಿಸುವ ಹೊಣೆ ನನ್ನದಾಗಿತ್ತು ಎಂದು ಆತ ಹೇಳಿದ್ದಾರೆ. ಉಗ್ರರ ಬಳಿ ಅಪಾರ ಪ್ರಮಾಣದ ಉಕ್ಕಿನ ಬುಲೆಟ್‌ಗಳು ಇದ್ದವು. ಬುಲೆಟ್‌ ನಿರೋಧಕ ವಾಹನಗಳನ್ನೂ ಭೇದಿಸಬಲ್ಲ ಶಕ್ತಿ ಇರುವಂಥ ಬುಲೆಟ್‌ಗಳು ಅವು ಎಂದು ಸಮೀರ್ ಧರ್ ಹೇಳಿದ್ಧಾನೆ.
Vijaya Karnataka Web steel bullet
ಪಾಕ್ ಉಗ್ರರ ಬಳಿ 'ಚೀನಾ ಟೆಕ್ನಾಲಜಿ' ಉಕ್ಕಿನ ಬುಲೆಟ್..! ಭಾರತದ ಬುಲೆಟ್‌ ನಿರೋಧಕ ವಾಹನವನ್ನೂ ಭೇದಿಸುತ್ತೆ..!


ಸಮೀರ್‌ ಹೇಳಿಕೆ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ಹೆಚ್ಚಿಸಿದ್ದು, ಸಮೀಪದ ಗ್ರಾಮಗಳಲ್ಲಿ ಶೋಧಕಾರ್ಯ ಕೂಡ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪುಲ್ವಾಮ ಜಿಲ್ಲೆಯ ಕಾಕ್ಪೊರಾ ಪ್ರದೇಶದವನಾದ ಸಮೀರ್‌ನನ್ನು ಕಳೆದ ಶುಕ್ರವಾರ ನಗ್ರೋತಾದಲ್ಲಿ ಪೊಲೀಸರು ಬಂಧಿಸಿದ್ದರು.

ಯೋಧರ ಮೇಲೆ ಗ್ರೆನೇಡ್‌ ಎಸೆದು ಪರಾರಿಯಾದ ಉಗ್ರರು: ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

‘ಸ್ಟೀಲ್‌ ಬುಲೆಟ್‌’ ಚೀನಾ ತಂತ್ರಜ್ಞಾನ

2017ರಲ್ಲಿ ಲೇಥಪೊರಾದ ಸಿಆರ್‌ಪಿಎಫ್‌ ನೆಲೆ ಮೇಲೆ ಜೈಷ್‌ ಉಗ್ರರು ನಡೆಸಿದ ದಾಳಿಯಲ್ಲಿ ಮೊದಲ ಬಾರಿಗೆ ಸ್ಟೀಲ್‌ ಬುಲೆಟ್‌ಗಳು ಪತ್ತೆಯಾಗಿದ್ದವು. ಸಾಮಾನ್ಯವಾಗಿ ಬಳಸಲಾಗುವ ಎಕೆ ಬುಲೆಟ್‌ಗಳಿಗೆ ಬುಲೆಟ್‌ ಪ್ರೂಫ್‌ ಪದರವನ್ನು ಭೇದಿಸುವ ಶಕ್ತಿ ಇರುವುದಿಲ್ಲ. ಆದರೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುವ ಸ್ಟೀಲ್‌ ಕೋರ್‌ ಬುಲೆಟ್‌ಗಳು ಬಂಕರ್‌ಗಳನ್ನು ಕೂಡ ಭೇದಿಸಬಲ್ಲವು. ಸಾಮಾನ್ಯ ಬುಲೆಟ್‌ಗೆ ಉಕ್ಕಿನ ಪದರವನ್ನು ಲೇಪಿಸುವುದು ಚೀನಾ ಸೇನೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಚೀನಾದ ತಂತ್ರಜ್ಞಾನವನ್ನು ಬಳಸಿ ಉಗ್ರರಿಗೆ ಸ್ಟೀಲ್‌ ಕೋರ್‌ ಬುಲೆಟ್‌ಗಳನ್ನು ಪೂರೈಕೆ ಮಾಡುತ್ತಿದೆ ಎಂದು ಸೇನಾಧಿಕಾರಿಗಳು ಈಗಾಗಲೇ ಹಲವು ಸಂದರ್ಭಗಳಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಗುಂಪು ಬಹುತೇಕ ನಿರ್ನಾಮ

ದಕ್ಷಿಣ ಕಾಶ್ಮೀರದಲ್ಲಿ ಒಟ್ಟಾಗುತ್ತಿರುವ ಉಗ್ರರು: ಗಡಿಯಲ್ಲಿ ಅಕ್ರಮ ನುಸುಳಿವಿಕೆ ಸಣ್ಣ ಪ್ರಮಾಣದಲ್ಲಿ ಮುಂದುವರಿದಿದೆ. ಪ್ರಮುಖವಾಗಿ ಪುಲ್ವಾಮ ಮತ್ತು ತ್ರಾಲ್‌ ಪ್ರದೇಶಗಳಲ್ಲಿ ಈಗಾಗಲೇ ಪಾಕಿಸ್ತಾನ ಪೋಷಿತ ಉಗ್ರರು ಒಟ್ಟಾಗುತ್ತಿದ್ದಾರೆ ಎಂದು ಕೂಡ ಸಮೀರ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಕಾಶ್ಮೀರದಲ್ಲಿ ವರ್ಷದ ಮೊದಲ ಎನ್‌ಕೌಂಟರ್‌, ಶರಣಾಗಲು ಒಪ್ಪದ 17 ವರ್ಷದ ಉಗ್ರನ ಹತ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ