ಹೊಸದಿಲ್ಲಿ: ಶಾಂತಿಯ ನಾಟಕದ ಮೂಲಕ ಕ್ರುದ್ಧ ಭಾರತವನ್ನು ಶಾಂತಗೊಳಿಸಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತೀವ್ರ ತಿರುಗೇಟು ನೀಡಿದೆ. ಶಾಂತಿ ಮಂತ್ರ ಬೋಧಿಸುತ್ತಲೇ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ವಿಫಲ ಯತ್ನ ನಡೆಸಿದ ಅದರ ಬಣ್ಣವನ್ನು ಬಯಲು ಮಾಡಿರುವ ಸೇನೆ ಮುಂದೆ ಒಂದೇ ಒಂದು ಪ್ರಚೋದನಾಕಾರಿ ಆಕ್ರಮಣ ನಡೆದರೂ ಅತ್ಯಂತ ನಿರ್ದಯ ಉತ್ತರ ನೀಡಲಾಗುವುದು ಎಂದು ಕಟು ಎಚ್ಚರಿಕೆ ನೀಡಿದೆ.
ತನ್ನ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದ ಬೆನ್ನಿಗೇ ಮೂರೂ ಸಶಸ್ತ್ರ ಪಡೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಏರ್ವೈಸ್ ಮಾರ್ಷಲ್ ಆರ್ಜಿಕೆ ಕಪೂರ್, ಆರ್ಮಿಯ ಮೇಜರ್ ಎಸ್.ಎಸ್. ಮಹಲ್ ಮತ್ತು ನೌಕಾಪಡೆಯ ರೇರ್ ಎಡ್ಮಿರಲ್ ದಲ್ಬೀರ್ ಸಿಂಗ್ ಅವರು ಪಾಕಿಸ್ತಾನದ ಕುತಂತ್ರಗಳನ್ನು ಬಯಲುಗೊಳಿಸಿದರು. ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸುವ ತನ್ನ ಹಕ್ಕನ್ನು ಮುಂದೆಯೂ ಭಾರತ ಪ್ರಯೋಗಿಸಲಿದೆ ಎನ್ನುವುದನ್ನು ಸ್ಪಷ್ಟವಾಗಿ ಸಾರಲಾಗಿದೆ.
ಇತ್ತ ಪುಲ್ವಾಮಾ ದಾಳಿಯ ಸಂಚುಕೋರ ಜೈಷೆ ಮೊಹಮ್ಮದ್ನ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಮತ್ತೊಂದು ದೊಡ್ಡ ಪ್ರಯತ್ನ ಆರಂಭಗೊಂಡಿದೆ.
ಪಾಕ್ ದುರಾಕ್ರಮಣಕ್ಕೆ ಸಾಕ್ಷ್ಯ
1. ಪಾಕಿಸ್ತಾನ ಎಫ್16 ಮೂಲಕ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ, ಅದು ಎಸೆದ ಬಾಂಬ್ ಗುರಿ ತಪ್ಪಿ ನೆಲೆಗಳ ಆವರಣಕ್ಕೆ ಬಿದ್ದಿದ್ದರಿಂದ ದೊಡ್ಡ ಅಪಾಯ ತಪ್ಪಿತು.
2. ತಾನು ಎಫ್-16 ವಿಮಾನವನ್ನೇ ಬಳಸಿಲ್ಲ ಎಂದು ಪಾಕಿಸ್ತಾನ ಹೇಳಿದ್ದು ಶುದ್ಧ ಸುಳ್ಳು. ಪತನಗೊಂಡ ಅದರ ಭಾಗಗಳು ಸಾಕ್ಷ್ಯವಾಗಿ ಸಿಕ್ಕಿವೆ.
3. ಎಫ್-16 ಗುರಿ ಭಾರತದ ಮಿಲಿಟರಿ ನೆಲೆ ಎನ್ನುವುದಕ್ಕೆ ಎಲೆಕ್ಟ್ರಾನಿಕ್ ಸಿಗ್ನೇಚರ್ ಸಾಕ್ಷ್ಯ ಲಭ್ಯ
ಸೇನೆಯ ಖಡಕ್ ನುಡಿ
ಮೂರೂ ಪಡೆಗಳು ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿವೆ. ನೆಲದ ಮೇಲೆ, ಆಕಾಶ ಮಾರ್ಗ ಮತ್ತು ಜಲ ಮಾರ್ಗದಲ್ಲಿ ಯಾವುದೇ ದುರಾಕ್ರಮಣಕ್ಕೆ ಮುಂದಾದರೂ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಮೂರೂ ಸೇನೆಗಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಬಾಲಾಕೋಟ್ ದಾಳಿಗೆ ಸಾಕ್ಷ್ಯ
ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ದಾಳಿಗೂ ನಿಖರವಾದ ಸಾಕ್ಷ್ಯಗಳಿದ್ದು, ಸಕಾಲದಲ್ಲಿ ಅದನ್ನು ಬಿಡುಗಡೆ ಮಾಡುವುದು ಸರಕಾರಕ್ಕೆ ಬಿಟ್ಟದ್ದು ಎಂದರು ಸೇನೆಯ ಮುಂದಾಳುಳುಗಳು.
ಮಾತಿಗೆ ಒಪ್ಪದ ಮೋದಿ
* ಗುರುವಾರ ರಾತ್ರಿಯೇ ಫೋನ್ ಮಾತುಕತೆಗೆ ಇಮ್ರಾನ್ ಯತ್ನ
* ಶಾಂತಿ ಮಾತುಕತೆಗೆ ಮೊರೆ, ನರೇಂದ್ರ ಮೋದಿ ಸ್ಪಷ್ಟ ನಿರಾಕರಣೆ
* ಬಿಜೆಪಿ ಕಾರ್ಯಕರ್ತರ ಜತೆಗಿನ ಸಂವಾದದಲ್ಲೂ ದಿಟ್ಟ ಉತ್ತರದ ಪ್ರತಿಜ್ಞೆ
* ಸಂಜೆ ಮೂರೂ ಸೇನೆಗಳ ಪತ್ರಿಕಾಗೋಷ್ಠಿ ಮೂಲಕ ಪಾಕ್ಗೆ ಎಚ್ಚರಿಕೆ
ತನ್ನ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದ ಬೆನ್ನಿಗೇ ಮೂರೂ ಸಶಸ್ತ್ರ ಪಡೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.
ಏರ್ವೈಸ್ ಮಾರ್ಷಲ್ ಆರ್ಜಿಕೆ ಕಪೂರ್, ಆರ್ಮಿಯ ಮೇಜರ್ ಎಸ್.ಎಸ್. ಮಹಲ್ ಮತ್ತು ನೌಕಾಪಡೆಯ ರೇರ್ ಎಡ್ಮಿರಲ್ ದಲ್ಬೀರ್ ಸಿಂಗ್ ಅವರು ಪಾಕಿಸ್ತಾನದ ಕುತಂತ್ರಗಳನ್ನು ಬಯಲುಗೊಳಿಸಿದರು. ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸುವ ತನ್ನ ಹಕ್ಕನ್ನು ಮುಂದೆಯೂ ಭಾರತ ಪ್ರಯೋಗಿಸಲಿದೆ ಎನ್ನುವುದನ್ನು ಸ್ಪಷ್ಟವಾಗಿ ಸಾರಲಾಗಿದೆ.
ಇತ್ತ ಪುಲ್ವಾಮಾ ದಾಳಿಯ ಸಂಚುಕೋರ ಜೈಷೆ ಮೊಹಮ್ಮದ್ನ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಮತ್ತೊಂದು ದೊಡ್ಡ ಪ್ರಯತ್ನ ಆರಂಭಗೊಂಡಿದೆ.
ಪಾಕ್ ದುರಾಕ್ರಮಣಕ್ಕೆ ಸಾಕ್ಷ್ಯ
1. ಪಾಕಿಸ್ತಾನ ಎಫ್16 ಮೂಲಕ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ, ಅದು ಎಸೆದ ಬಾಂಬ್ ಗುರಿ ತಪ್ಪಿ ನೆಲೆಗಳ ಆವರಣಕ್ಕೆ ಬಿದ್ದಿದ್ದರಿಂದ ದೊಡ್ಡ ಅಪಾಯ ತಪ್ಪಿತು.
2. ತಾನು ಎಫ್-16 ವಿಮಾನವನ್ನೇ ಬಳಸಿಲ್ಲ ಎಂದು ಪಾಕಿಸ್ತಾನ ಹೇಳಿದ್ದು ಶುದ್ಧ ಸುಳ್ಳು. ಪತನಗೊಂಡ ಅದರ ಭಾಗಗಳು ಸಾಕ್ಷ್ಯವಾಗಿ ಸಿಕ್ಕಿವೆ.
3. ಎಫ್-16 ಗುರಿ ಭಾರತದ ಮಿಲಿಟರಿ ನೆಲೆ ಎನ್ನುವುದಕ್ಕೆ ಎಲೆಕ್ಟ್ರಾನಿಕ್ ಸಿಗ್ನೇಚರ್ ಸಾಕ್ಷ್ಯ ಲಭ್ಯ
ಸೇನೆಯ ಖಡಕ್ ನುಡಿ
ಮೂರೂ ಪಡೆಗಳು ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿವೆ. ನೆಲದ ಮೇಲೆ, ಆಕಾಶ ಮಾರ್ಗ ಮತ್ತು ಜಲ ಮಾರ್ಗದಲ್ಲಿ ಯಾವುದೇ ದುರಾಕ್ರಮಣಕ್ಕೆ ಮುಂದಾದರೂ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಮೂರೂ ಸೇನೆಗಳ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಬಾಲಾಕೋಟ್ ದಾಳಿಗೆ ಸಾಕ್ಷ್ಯ
ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ದಾಳಿಗೂ ನಿಖರವಾದ ಸಾಕ್ಷ್ಯಗಳಿದ್ದು, ಸಕಾಲದಲ್ಲಿ ಅದನ್ನು ಬಿಡುಗಡೆ ಮಾಡುವುದು ಸರಕಾರಕ್ಕೆ ಬಿಟ್ಟದ್ದು ಎಂದರು ಸೇನೆಯ ಮುಂದಾಳುಳುಗಳು.
ಮಾತಿಗೆ ಒಪ್ಪದ ಮೋದಿ
* ಗುರುವಾರ ರಾತ್ರಿಯೇ ಫೋನ್ ಮಾತುಕತೆಗೆ ಇಮ್ರಾನ್ ಯತ್ನ
* ಶಾಂತಿ ಮಾತುಕತೆಗೆ ಮೊರೆ, ನರೇಂದ್ರ ಮೋದಿ ಸ್ಪಷ್ಟ ನಿರಾಕರಣೆ
* ಬಿಜೆಪಿ ಕಾರ್ಯಕರ್ತರ ಜತೆಗಿನ ಸಂವಾದದಲ್ಲೂ ದಿಟ್ಟ ಉತ್ತರದ ಪ್ರತಿಜ್ಞೆ
* ಸಂಜೆ ಮೂರೂ ಸೇನೆಗಳ ಪತ್ರಿಕಾಗೋಷ್ಠಿ ಮೂಲಕ ಪಾಕ್ಗೆ ಎಚ್ಚರಿಕೆ